• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Sunday, May 18, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

Davanagere: 11 ಬಾರಿ ವಿಷ್ಣು ಸಹಸ್ರನಾಮ ಪಾರಾಯಣ, 108 ಮುತ್ತೈದೆಯರಿಗೆ ಮಡಲಕ್ಕಿ ನೀಡಿಕೆ ಕಾರ್ಯಕ್ರಮದ ಸ್ಪೆಷಾಲಿಟಿ ಏನು…?

Editor by Editor
July 19, 2023
in ದಾವಣಗೆರೆ
0
Parayana

Parayana

SUDDIKSHANA KANNADA NEWS/ DAVANAGERE/ DATE:19-07-2023

ದಾವಣಗೆರೆ (Davanagere): ಶ್ರಾವಣ ಮಾಸ ಬಂದಿದೆ. ಎಲ್ಲೆಡೆ ಪೂಜೆ, ಪುನಸ್ಕಾರ ಜೋರಾಗಿ ನಡೆಯುತ್ತಿದೆ. ಇನ್ನು ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯಲ್ಲಿ ಸ್ಪೆಷಲ್ ಆಗಿ ಆಚರಣೆ ಮಾಡಲಾಗುತ್ತದೆ.

ಅದೇ ರೀತಿಯಲ್ಲಿ ದಾವಣಗೆರೆಯಲ್ಲಿಯೂ ವಿಶೇಷವಾಗಿ ಆಚರಿಸಲಾಯಿತು. ಶ್ರೀ ವಾಗ್ದೇವಿ ಭಜನಾ ಮಂಡಳಿ ಸದಸ್ಯೆಯರು ವಿಭಿನ್ನವಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಇದು ಎಲ್ಲರ ಗಮನ ಸೆಳೆಯುವಂತಿದೆ.

108 ಸದಸ್ಯೆಯರಿಗೆ ಮಡಲಕ್ಕಿ:

ದಾವಣಗೆರೆಯ ಪಿ. ಬಿ. ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಅಧಿಕ ಶ್ರಾವಣ ಮಾಸ ಪ್ರಯುಕ್ತ ಹನ್ನೊಂದು ಬಾರಿ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ 108 ಸದಸ್ಯೆಯರಿಗೆ ಮಡಲಕ್ಕಿ ನೀಡಿ ಆಚರಿಸಲಾಯಿತು.

ಅನ್ನಸಂತರ್ಪಣೆ:

ಬೆಳಿಗ್ಗೆ 8 ಗಂಟೆಗೆ ಶುರುವಾದ ವಿಷ್ಣುಸಹಸ್ರನಾಮ ಪಾರಾಯಣದಲ್ಲಿ 11 ತಂಡಗಳು ಭಾಗವಹಿಸಿದ್ದವು. ಪಾರಾಯಣ ನಂತರ ಶ್ರೀಮನ್ನಾರಾಯಣ, ಆಂಜನೇಯ, ಶ್ರೀ ಬೀರಲಿಂಗೇಶ್ವರ ಹಾಗೂ ಚೌಡೇಶ್ವರಿ ದೇವಿಗೆ ಮಹಾಮಂಗಳಾರತಿ, ನೆರೆದಿದ್ದವರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ಮೊದಲಿಗೆ ಮಡಲಕ್ಕಿ ತುಂಬಿದ್ದು ಯಾರು…?

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ನಳಿನಿ ಅಚ್ಯುತ್ ಹಾಗೂ ಪ್ರಭಾ ರವೀಂದ್ರ ಅವರು ಮೊದಲಿಗೆ ಚೌಡೇಶ್ವರಿ ದೇವಿಗೆ ಮಡಲಕ್ಕಿ ತುಂಬಿದರು. ನಂತರ 108 ಮುತ್ತೈದೆಯರಿಗೆ ಶಾಸ್ತ್ರೋಕ್ತವಾಗಿ ಮಡಲಕ್ಕಿ ತುಂಬಿಸಲಾಯಿತು. ಇದೇ ವೇಳೆ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ ದೇವಸ್ಥಾನ ಧರ್ಮದರ್ಶಿ ಮಂಡಳಿಯವರಿಗೆ ಭಜನಾ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಪಾರಾಯಣ, ಭಜನೆ ಖುಷಿಕೊಟ್ಟಿದೆ:

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾರ್ಯದರ್ಶಿ ಜೆ.ಕೆ. ಕೊಟ್ರಬಸಪ್ಪ, ಬಿಜಾಪುರದ ಸಿದ್ದೇಶ್ವರ ಸ್ವಾಮಿಗಳು ಉಪನ್ಯಾಸ ನೀಡಲು ದಾವಣಗೆರೆಗೆ ಆಗಮಿಸಿದಾಗ ಬರುತ್ತಿದ್ದ ಜನಸ್ತೋಮದಂತೆ ಇಲ್ಲಿ ಪ್ರತಿನಿತ್ಯ ಭಜನಾ ಮಂಡಳಿಯ ಸದಸ್ಯರು ಸೇರಿಕೊಂಡು ಪಾರಾಯಣ, ಭಜನೆ ಮಾಡುತ್ತಿದ್ದೀರಿ. ನಮ್ಮ ಧಾರ್ಮಿಕ ಸಂಸ್ಕೃತಿಯನ್ನು ಪಸರಿಸುತ್ತಿರುವ ನಿಮ್ಮ ಕಾರ್ಯಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ: 

Basavaraj Bommai: ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಸರಿ ಪಡೆ ರೋಷಾಗ್ನಿ ಸ್ಫೋಟ: ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ಬೊಮ್ಮಾಯಿ

ಕಾರಿಗನೂರು ತಿಪ್ಪಣ್ಣ ಮಾತನಾಡಿ, ಸೇವೆಯ ಮೂಲಕ ದೇವರನ್ನು ಕಾಣುತ್ತಿರುವ ನಿಮಗೆ ನಾವು ಸಹಕಾರ ನೀಡಲಿದ್ದೇವೆ ಎಂದರು. ದೇವಸ್ಥಾನ ಮಂಡಳಿಯ ಸಂಗಪ್ಪ, ಹನುಮಂತಪ್ಪ, ಪರಮೇಶ್ವರಪ್ಪ, ಗುತ್ಯಪ್ಪ ಅವರನ್ನೂ ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ರಾಜು ಬನ್ನಿಕಟ್ಟಿ ಉಪಸ್ಥಿತರಿದ್ದರು.

ಈ ಎಲ್ಲಾ ಕಾರ್ಯಕ್ರಮಗಳನ್ನು ವಾಗ್ದೇವಿ ಭಜನಾ ಮಂಡಳಿಯ ಅಧ್ಯಕ್ಷೆ ಕನ್ಯಾಕುಮಾರಿ, ಕಾರ್ಯದರ್ಶಿ ಸ್ವರ್ಣಲತಾ ಹಾಗೂ ಖಜಾಂಚಿ ಆರ್.ಡಿ. ಗೀತಾ ಅವರ ನೇತೃತ್ವದಲ್ಲಿ ಎಲ್ಲಾ ಸದಸ್ಯೆಯರು ಕೂಡಿ ನಡೆಸಿಕೊಟ್ಟರು.

Davanagere, Davanagere News, Davanagere News Updates, Davanagere Spl News

Davanagere Suddi, Davanagere Update, Davanagere News Updates

 

Tags: DavanagereDavanagere newsDavanagere News UpdatesDAVANAGERE SUDDISuddi
Next Post
Suspect Terrorist Arrest

Davanagere: ಬೆಣ್ಣೆನಗರಿಯಲ್ಲಿ ಸೆರೆ ಸಿಕ್ಕ ಮತ್ತೊಬ್ಬ ಶಂಕಿತ ಉಗ್ರ...?: ಬೆಂಗಳೂರು ಮೂಲದ ಈತ ಕೆಲಸ ಮಾಡ್ತಿದ್ದು ಏನು ಗೊತ್ತಾ? ದಾವಣಗೆರೆಗೆ ಯಾಕೆ ಬರುತ್ತಿದ್ದ...?

Leave a Reply Cancel reply

Your email address will not be published. Required fields are marked *

Recent Posts

  • ಈ ರಾಶಿಯವರಿಗೆ ಉದ್ಯೋಗದಲ್ಲಿ ವರ್ಗಾವಣೆಯಿಂದ ಸಂತಸ, ಈ ರಾಶಿಯವರ ವಿಚ್ಛೇದನ ಪಡೆದವರಿಗೆ ಎರಡನೇ ವಿವಾಹ ಯೋಗ ಅತಿ ಶೀಘ್ರದಲ್ಲಿ ನೆರವೇರಲಿದೆ
  • ದಾವಣಗೆರೆ ಜಿಲ್ಲೆಯ 11 ಕಡೆ ರಸ್ತೆ ತಡೆ ನಡೆಸಿ ರೈತರ ರೋಷಾವೇಶ: ಶಾಸಕರಿಗೆ ತಟ್ಟಿತು ಹೋರಾಟದ ಬಿಸಿ!
  • ಕಡತ ಕ್ಲಿಯರ್ ಮಾಡಲು ಸಚಿವರು ಲಂಚ ಪಡೆಯುತ್ತಿದ್ದಾರೆ: ಸಚಿವೆ ಸ್ಫೋಟಕ ಹೇಳಿಕೆ!
  • 600ಕ್ಕೂ ಹೆಚ್ಚು ಪಾಕ್ ಡ್ರೋನ್ ಉಡಾಯಿಸಿದ ಭಾರತದ ವಾಯು ರಕ್ಷಣಾ ಪಡೆ: ಸ್ಪೆಷಲ್ ಗನ್ ಗುಂಡಿನ ಮೊರೆತಕ್ಕೆ ಪಾಕ್ ತತ್ತರ..!
  • ಮೆಣಸಿನಕಾಯಿ ಬೆಳೆಗಾರರು, ನರ್ಸರಿ ಮಾಲೀಕರಿಗೆ ಟಿಪ್ಸ್!

Recent Comments

No comments to show.

Archives

  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಸಾಹಿತ್ಯ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In