SUDDIKSHANA KANNADA NEWS/ DAVANAGERE/ DATE-28-05-2025
ದಾವಣಗೆರೆ: ಖಾಸಗಿ ಕಂಪೆನಿಯಲ್ಲಿ ವ್ಯವಸ್ಥಾಪಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಯುವತಿ ಕಮಿಷನ್ ಆಸೆಗೆ ಬಿದ್ದು 13 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ.
ನಗರದ ಎಂಸಿಸಿ ಬ್ಲಾಕ್ ನಲ್ಲಿ ವಾಸವಾಗಿರುವ ಹರಿಯಾಣದ 26 ವರ್ಷದ ಯುವತಿ ಹಣ ಕಳೆದುಕೊಂಡವರು ಎಂದು ಗುರುತಿಸಲಾಗಿದೆ. ಹೆಚ್ಚು ಕಮಿಷನ್ ಹಾಗೂ ಉದ್ಯೋಗದ ಆಸೆ ತೋರಿಸಿ ಯುವತಿಯೊಬ್ಬರಿಗೆ ಸೈಬರ್ ವಂಚಕರು ಮೋಸ ಮಾಡಿದ್ದಾರೆ. ಸೆನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಯುವತಿಯನ್ನು ಟೆಲಿಗ್ರಾಂ ಮೂಲಕ ಮಹಿಳೆಯೊಬ್ಬರು ಪರಿಚಯಿಸಿಕೊಂಡಿದ್ದಾರೆ. ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್ ಸಿಗುತ್ತದೆ. ಉತ್ತಮ ಉದ್ಯೋಗವೂ ಸಿಗುತ್ತದೆ ಎಂದು ಮಹಿಳೆಯು ಯುವತಿಯನ್ನು ನಂಬಿಸಿದ್ದು, ಮೋಸದ ಅರಿವಿರದ ಯುವತಿ 13 ಲಕ್ಷ ರೂಪಾಯಿಯನ್ನು ಹಂತ ಹಂತವಾಗಿ ವರ್ಗಾವಣೆ ಮಾಡಿದ್ದಾರೆ.
ಆ ಬಳಿಕ ಕಮಿಷನ್ ಸೇರಿ ಹೆಚ್ಚಿನ ಹಣ ಬಂದಿದೆ ಎಂದು ನಂಬಿಸಿದ್ದಾರೆ. ಆ ಬಳಿಕ ಹಣ ಬಿಡಿಸಿಕೊಳ್ಳಲು ಹೋದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಆ ಬಳಿಕ ಮಹಿಳೆಗೆ ಕರೆ ಮಾಡಿದರೆ ಪ್ರತಿಕ್ರಿಯೆ ಇಲ್ಲ. ಹಾಗಾಗಿ ಪೊಲೀಸರಿಗೆ ದೂರು ನೀಡಿದ್ದು, ಹಣ ವಾಪಸ್ ಕೊಡಿಸುವಂತೆ ಯುವತಿ ಮನವಿ ಮಾಡಿದ್ದಾಳೆ.