ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಏಯ್ ಕುಳಿತ್ಕೋ… ನಾನಿನ್ನು ಇಲ್ಲೇ ಇದ್ದೇನೆ: ಎಸ್ಪಿ ವಿರುದ್ಧ ಸಿಎಂ ಗರಂ…!

On: June 5, 2023 1:08 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE: 05-06-2023

ದಾವಣಗೆರೆ(DAVANAGERE): ಜಿಲ್ಲಾ ಪಂಚಾಯಿತಿ (JILLA PANCHAYATH) ಸಭಾಂಗಣದಲ್ಲಿ ಕರೆದಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆದ ಪ್ರಸಂಗ ನಡೆಯಿತು.

ಸಭೆ ಇನ್ನೇನೂ ಮುಗಿಯಿತು ಎಂದು ಎಸ್ಪಿ (SP) ಅರುಣ್ ಅವರು ಹೊರಡಲು ಅಣಿಯಾದರು. ಈ ವೇಳೆ ಏಯ್ ಎಸ್ಪಿ (SP) ಕುಳಿತ್ಕೋ. ನಾನು ಇನ್ನು ಮಾತನಾಡುವುದು ಇದೆ ಎಂದು ಹೇಳಿದರು. ಆಗ ಎದ್ದು ನಿಂತ ಎಸ್ಪಿ ಅವರು
ಮತ್ತೆ ಆಸೀನರಾದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಯಾರೂ ಸಹ ಕಾನೂನು ಕೈಗೆತ್ತಿಕೊಳ್ಳಬಾರದು. ಇಂಥ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಪ್ರತಿಯೊಬ್ಬರೂ ಕಾನೂನು ಮತ್ತು ಸುವ್ಯವಸ್ಥೆಗೆ ಕಾಪಾಡಲು ಸಹಕರಿಸಬೇಕು. ನೈತಿಕ ಪೊಲೀಸ್ ಗಿರಿಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ನೈತಿಕವಾಗಲೀ, ಅನೈತಿಕ ಪೊಲೀಸ್ ಗಿರಿಯಾಗಲಿ ನಡೆಯಬಾರದು. ಅರ್ಥ ಆಯ್ತಾ ನಾನು ಹೇಳಿದ್ದು. ಎಲ್ಲಿಯೂ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಆಗಬಾರದು. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಹೇಳಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment