• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Friday, May 9, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

Channagiri: ಕಾಂಗ್ರೆಸ್ ಶಾಸಕನ ವಿರುದ್ಧ ಸ್ವಪಕ್ಷದ ಮುಖಂಡನ ರೋಷಾವೇಶ, ಕೆಲ್ಸ ಮಾಡದಿದ್ದರೆ ರಾಜೀನಾಮೆ ಕೊಡು, 5 ಸಾವಿರ ಮತ ಪಡೆ ನೋಡೋಣ: ಶಿವಗಂಗಾ ಬಸವರಾಜ್ ಗೆ ಹೊದಿಗೆರೆ ರಮೇಶ್ ಸವಾಲು

Editor by Editor
October 20, 2023
in ದಾವಣಗೆರೆ
0
Channagiri: ಕಾಂಗ್ರೆಸ್ ಶಾಸಕನ ವಿರುದ್ಧ ಸ್ವಪಕ್ಷದ ಮುಖಂಡನ ರೋಷಾವೇಶ, ಕೆಲ್ಸ ಮಾಡದಿದ್ದರೆ ರಾಜೀನಾಮೆ ಕೊಡು, 5 ಸಾವಿರ ಮತ ಪಡೆ ನೋಡೋಣ: ಶಿವಗಂಗಾ ಬಸವರಾಜ್ ಗೆ ಹೊದಿಗೆರೆ ರಮೇಶ್ ಸವಾಲು

SUDDIKSHANA KANNADA NEWS/ DAVANAGERE/ DATE:20-10-2023

ದಾವಣಗೆರೆ: ಚನ್ನಗಿರಿ (Channagiri)ಯಲ್ಲಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ವಿರುದ್ಧ ಸ್ವಪಕ್ಷದ ಮುಖಂಡ ತೀವ್ರ ವಾಗ್ದಾಳಿ ನಡೆಸಿದ್ದು, ಏಕವಚನದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ತಾಲೂಕಿನ ಜನರು ಮಳೆ, ಬೆಳೆ, ಕುಡಿಯಲು ನೀರಿಲ್ಲದೇ ಸಂಕಷ್ಟದಲ್ಲಿದ್ದಾರೆ. ಇಂಥ ಕಷ್ಟದ ಪರಿಸ್ಥಿತಿಯಲ್ಲಿ ವಿದೇಶ ಪ್ರವಾಸ ಬೇಕಿತ್ತಾ? ಅಭಿವೃದ್ಧಿ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ. ಆ ಬಳಿಕ 5 ಸಾವಿರ ಮತಗಳನ್ನು ತೆಗೆದುಕೊಳ್ಳು ನೋಡೋಣ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಹೊದಿಗೆರೆ ರಮೇಶ್ ಟೀಕಾಪ್ರಹಾರ ನಡೆಸಿದರು.

READ ALSO THIS STORY:

Davanagere: ಬೆಣ್ಣೆನಗರಿಯಲ್ಲಿ ಅಂತಾರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿ ಕಲರವ: ಅ. 22ಕ್ಕೆ ಚಾಲನೆ 29ಕ್ಕೆ ಮುಕ್ತಾಯ, ವಿಜೇತರಾದವರಿಗೆ ಸಿಗುವ ನಗದು ಬಹುಮಾನ ಎಷ್ಟು ಗೊತ್ತಾ…?

ಚನ್ನಗಿರಿ ಪಟ್ಟಣದ ತಾವರಕೆರೆ ಕ್ರಾಸ್ ಬಳಿ ವಾಲ್ಮೀಕಿ ಪುತ್ಥಳಿ ಮರು ಪ್ರತಿಷ್ಠಾಪನೆಗೆ ಒತ್ತಾಯಿಸಿ ಆಯೋಜಿಸಿದ್ದ ಅಹೋರಾತ್ರಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಸಕ ಶಿವಗಂಗಾ ಬಸವರಾಜ್ ಗೆ ಜೂಜಾಡಲು ಬಿಟ್ಟಿಲ್ಲ. ರೇಸ್ ಗೆ ಬಿಟ್ಟಿಲ್ಲ. ಶೋಷಿತ ಸಮುದಾಯಗಳ ಮತ ಪಡೆದು ಕುದುರೆ ಏರಿ ಹೋಗುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಶಾಸಕ ತಾಲೂಕಿನ ಪ್ರಥಮ ಪ್ರಜೆ. ಪಟ್ಟಣದಲ್ಲಿ ಜನರು ಕುಡಿಯುವ ನೀರು ಸಿಗದೇ ಹಾಹಾಕಾರ ಎದುರಿಸುತ್ತಿದ್ದಾರೆ. ಎಲ್ಲಿ ಹೋಗಿದೆಯಪ್ಪಾ. ಜ್ವಲಂತ ಸಮಸ್ಯೆಗಳ ಬಗ್ಗೆ ಸಭೆ ಯಾಕೆ ಮಾಡಿಲ್ಲಪ್ಪಾ? ಎಸ್ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಎರಡು ಸಭೆಗಳನ್ನು ತೆರೆಮರೆಯಲ್ಲಿ ಯಾಕೆ ನಡೆಸಿದ್ದೀಯಪ್ಪಾ? ಎಂದು ಪ್ರಶ್ನಿಸಿದರು.

ಚುನಾವಣಾ ಪ್ರಚಾರದಲ್ಲಿ ಪ್ರಾಮಾಣಿಕ ಸೇವೆ ಮಾಡುತ್ತೇನೆ ಎಂದು ಹೇಳಿದ್ದನ್ನು ಮರೆತು ಬಿಟ್ಟಿರುವ ಶಾಸಕರು, ಸರ್ಕಾರಿ ಅಧಿಕಾರಿಗಳ ಬಳಿ ರೊಕ್ಕ ತೆಗೆದಕೊಂಡು ಕರೆದುಕೊಂಡು ಬಂದರೆ, ರೊಕ್ಕ ತೆಗೆದುಕೊಳ್ಳದೇ ಅಧಿಕಾರಿಗಳು ಕೆಲಸ ಮಾಡುತ್ತಾರಾ?  ಕೆಪಿಸಿಸಿ ಅಧ್ಯಕ್ಷರಿಗೆ ಮನವಿ, ಸಿಎಂ ಅವರನ್ನು ಯಾವಾಗ ಭೇಟಿ ಮಾಡಬೇಕು ಎಂಬುದು ನನಗೆ ಗೊತ್ತಿದೆ. ತಾಲೂಕಿನ ಜನರು ನಮ್ಮನ್ನು ತಿದ್ದಿದ್ದಾರೆ. ತಿದ್ದಿ ಮೂರ್ತಿ ಮಾಡಿದ್ದಾರೆ. ಸುಮ್ನೆ ಬಿಟ್ಟಿಯಾಗಿ ಬಿಟ್ಟಿಲ್ಲ ಎಂದು
ತಿಳಿಸಿದರು.

ವಾಲ್ಮೀಕಿ ಸಮುದಾಯ ಮಹರ್ಷಿ ವಾಲ್ಮೀಕಿಯವರೇ ದೊಡ್ಡ ವಿಶ್ವವಿದ್ಯಾಲಯ. ಲವ ಕುಶರಿಗೆ ಬಿಲ್ ವಿದ್ಯೆ ಕಲಿಸಿದವರು ಯಾರು? ಕುದುರೆ ಸವಾರಿ, ಈಜು ಸೇರಿದಂತೆ ಎಲ್ಲಾ ರೀತಿಯ ಪಾಠ ಹೇಳಿಕೊಟ್ಟ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಿತ್ತು. ನೀನು ಹೇಳಿದ್ದರೆ ಐದು ನಿಮಿಷದಲ್ಲಿ ಸಮಸ್ಯೆ ಬಗೆಹರಿಯುತಿತ್ತು. ತಾಲೂಕಿನ ಶಾಸಕನಿಗೆ ನಾಚಿಕೆಯಾಗಬೇಕು. ವಿದೇಶ ಪ್ರವಾಸಕ್ಕೆ ಹೋಗಿದ್ದೀಯಾ. ಇಲ್ಲಿ ಕುಡಿಯಲು ನೀರಿಲ್ಲ. ಮಳೆಯಿಲ್ಲ. ನೀರಿಲ್ಲದೇ ಜನರು
ಸಮಸ್ಯೆ ಎದುರಿಸುತ್ತಿರುವುದು ಅಷ್ಟಿಷ್ಟಲ್ಲ. ರೈತರು ಭೂಮಿಗೆ ಬಂಡವಾಳ ಹಾಕಿದ್ದಾರೆ. ಬೆಳೆ ಇಲ್ಲ. ಎಲ್ಲಿ ಮಲಗಿದ್ದೀಯಪ್ಪಾ. ಆರತಿ ಮಾಡಿ ಕರೆಸಿಕೊಳ್ಳಬೇಕಾ? ಬ್ಯಾಟರಿ ಹಾಕಿ ಹುಡುಕಿಕೊಂಡು ಬರಬೇಕಾ? ಎಂದು ವಾಗ್ದಾಳಿ ನಡೆಸಿದರು.

ಉಪವಾಸ ಸತ್ಯಾಗ್ರಹ ನಡೆಯುವ ಸ್ಥಳಕ್ಕೆ ಬಂದರೆ ಯಾವುದೇ ಕಾರಣಕ್ಕೂ ಶಾಸಕನನ್ನು ಬಿಟ್ಟುಕೊಳ್ಳಲ್ಲ. ಬಹಿಷ್ಕಾರ ಹಾಕುತ್ತೇವೆ. ಮಾನವೀಯತೆ ಎಂಬುದೇ ಇಲ್ಲ. ಅಹಿಂದ ಮತಗಳಿಂದಲೇ ನೀನು ಗೆದ್ದು ಬಂದಿರುವುದು. ಇವರ ಬೆಂಬಲದ ಅವಶ್ಯಕತೆ ಇಲ್ಲವೇ. ಸರ್ಕಾರ ಇದೆ, ಪಕ್ಷ ಇದೆ, ಸಿಎಂ ಇದ್ದಾರೆ, ತಾಲೂಕಿನ ಜನರ ಬೆಂಬಲ ಪಡೆಯುತ್ತೇವೆ. ವೇದಿಕೆ ಬಳಿ ಕಂಡರೆ ಬಹಿಷ್ಕಾರ ಹಾಕುವುದು ಸತ್ಯ. ಗ್ರಹಚಾರ ಬಿಡಿಸುತ್ತೇವೆ ಎಂದು ಹೊದಿಗೆರೆ ರಮೇಶ್ ಹೇಳುತ್ತಿದ್ದಂತೆಯೇ ಪ್ರತಿಭಟನಾನಿರತರು ಶಿವಗಂಗಾ ಬಸವರಾಜ್ ವಿರುದ್ಧ ಧಿಕ್ಕಾರದ ಘೋಷಣೆ ಹಾಕಿದರು.

ಧಿಕ್ಕಾರ… ಧಿಕ್ಕಾರ…

ಧಿಕ್ಕಾರ…. ಧಿಕ್ಕಾರ… ವಾಲ್ಮೀಕಿ ಸಮಾಜ ವಿರೋಧಿ ಶಾಸಕನಿಗೆ ಧಿಕ್ಕಾರ.. ರೈತ, ಅಹಿಂದ ವಿರೋಧಿ ಶಾಸಕನಿಗೆ ಧಿಕ್ಕಾರ… ಎಂದು ಪ್ರತಿಭಟನಾಕಾರರು ಶಾಸಕ ಶಿವಗಂಗಾ ಬಸವರಾಜ್ ಹೆಸರು ಹೇಳಿ ಆಕ್ರೋಶ ವ್ಯಕ್ತಪಡಿಸಿದರು.

ಭಾಷಣದುದ್ದಕ್ಕೂ ಕಾಂಗ್ರೆಸ್ ಪಕ್ಷದ ಶಾಸಕನ ವಿರುದ್ಧ ವಾಗ್ದಾಳಿ ಮುಂದುವರಿಸಿದ ಹೊದಿಗೆರೆ ರಮೇಶ್, ಅಹಿಂದ ಸಮುದಾಯದ ಮತಗಳು ದುರ್ಬಳಕೆ ಆಗಬಾರದು. ಸಾಮಾಜಿಕ ನ್ಯಾಯದ ಪರಿಕಲ್ಪನೆ, ತಾಲೂಕಿನ ಅಭಿವೃದ್ಧಿ ಪರಿಕಲ್ಪನೆಯಲ್ಲಿ ಮತ ಹಾಕಿದ್ದೇವೆ. ಶೋಷಿತ ಸಮುದಾಯದ ಮತಗಳು ಉಚಿತವಲ್ಲ. ಶೋಷಿತ ಸಮುದಾಯಗಳು, ಅಹಿಂದ ವರ್ಗ ಮತಕ್ಕೆ ಮಾತ್ರ ಭ್ರಮೆಯಲ್ಲಿ ಇದ್ದರೆ ನಿನ್ನ ತಲೆಯಲ್ಲಿನ ಹುಳ ತೆಗೆದು ಹಾಕು. ನಿರಂತರ ಹೋರಾಟ ಮಾಡ್ತೇವೆ. ಆದದ್ದು ಆಗಲಿ, ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ. ರಾಜ್ಯದ ಕಣ್ತೆರಿಸುವ ಪ್ರಯತ್ನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಂಘ ಇದೆ, ಹಿರಿಯರು ಇದ್ದಾರೆ. ಮಾರ್ಗದರ್ಶನ ಮಾಡ್ತಾರೆ. ತಪ್ಪು ಮಾಡಿದ್ದರೆ ತಪ್ಪು ತಿದ್ದುಕೊಳ್ಳುತ್ತೇವೆ. ಹೋರಾಟ ನಿರಂತರ, ಅನಿವಾರ್ಯ. ಇದು ಎಚ್ಚರಿಕೆ. ಸಮುದಾಯಗಳ ಸಹಕಾರ ನಿರೀಕ್ಷೆ ಮಾಡುತ್ತೇವೆ. ತಾಲೂಕು ಆಡಳಿತ, ಜಿಲ್ಲಾಡಳಿತದ ಸಹಕಾರ ಕೋರುತ್ತೇವೆ. ಸಹನೆ, ಶಾಂತಿ ಬಲಹೀನತೆ ಅಲ್ಲ. ನಮ್ಮನ್ನು ಕಾನೂನು ವಿರೋಧಿ ಚಟುವಟಿಕೆ ನಡೆಸಲು ಪ್ರಚೋದನೆ ಮಾಡುವುದನ್ನು ನಿಲ್ಲಿಸಬೇಕು. ಯಾವುದೋ ಒಬ್ಬ ವ್ಯಕ್ತಿ ವರ್ಗಾವಣೆ ಮಾಡುತ್ತಾನೆ ಎಂಬ ಭಯವನ್ನು ಅಧಿಕಾರಿಗಳು ಬಿಡಬೇಕು. ಕೆಲ ಅಧಿಕಾರಿಗಳು ಬಂಡವಾಳ ಹಾಕಿಕೊಂಡು ಬಿಟ್ಟಿದ್ದಾರೆ. ವರ್ಗಾವಣೆ ಭಯಕ್ಕೆ ದುಷ್ಟ ವ್ಯಕ್ತಿಗಳ ಪರವಾಗಿ ನಿಂತರೆ ಸುಮ್ಮನೆ ಇರಲ್ಲ. ನಮ್ಮನ್ನು ಪ್ರಚೋದನೆ ಮಾಡಲು ಮುಂದಾದರೆ ಸಹಿಸಲ್ಲ ಎಂದರು.

ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಆರಾಧ್ಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸಿಎಂ, ಗೃಹ ಮಂತ್ರಿಗಳ ಗಮನಕ್ಕೆ ತರುತ್ತೇವೆ. ಪೊಲೀಸರ ತಲೆದಂಡ ಆಗುತ್ತದೆ. ಯಾವ್ಯಾವ ಪದ ಬಳಸಿದ್ದೀರಿ ಎಂಬ ಕುರಿತಂತೆ ಸಾಕ್ಷಿಗಳಿವೆ. ನಮ್ಮ ಯುವಕರು ಸಾಕ್ಷಿ ಹೇಳುತ್ತಾರೆ. ಗೃಹ ಸಚಿವರ ಬಳಿ ನಿಯೋಗ ತೆಗೆದುಕೊಂಡು ಹೋಗುತ್ತೇವೆ. ರಾಷ್ಟ್ರ, ವಿಶ್ವಕ್ಕೆ ಕೊಡುಗೆ ನೀಡಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆ ಮಾಡಿಯೇ ತೀರುತ್ತೇವೆ ಎಂದು ಗುಡುಗಿದರು.

Next Post
Bangalore: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಟ್ವೀಟಾಸ್ತ್ರ… ಈ ಪ್ರಶ್ನೆಗಳಿಗೆ ಉತ್ತರವಿದೆಯಾ ಸಿದ್ದರಾಮಯ್ಯ…?

Bangalore: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಕಲೆಕ್ಷನ್ ಮಾಸ್ಟರ್ಸ್, ರಾಜ್ಯದ ಹಣ ಲೂಟಿ ಮಾಡಿ ಹೈಕಮಾಂಡ್ ಗೆ ಸಂದಾಯ: ಬಿಜೆಪಿ ಟ್ವೀಟ್ ನಲ್ಲಿ ಆರೋಪ

Leave a Reply Cancel reply

Your email address will not be published. Required fields are marked *

Recent Posts

  • ಎಲ್ಲಾ ಟಿ-20 ಐಪಿಎಲ್ ಪಂದ್ಯಗಳ ರದ್ದುಗೊಳಿಸಿದ ಬಿಸಿಸಿಐ
  • ಐಪಿಎಲ್ ಟಿ-20 ಟೂರ್ನಮೆಂಟ್ ರದ್ದಾಗುತ್ತಾ? ಐಪಿಎಲ್ ಅಧ್ಯಕ್ಷರು ಹೇಳಿದ್ದೇನು…?
  • ಬಾಂಬ್ ಇಟ್ಕೊಂಡು ಹೋಗೋ ಬದ್ಲು ಭಾರತದೊಳಗಿರುವ ಪಾಕಿಗಳನ್ನ ಜಮೀರ್ ಅಹ್ಮದ್ ಹೊಡೆದಾಕಲಿ: ಎಂ. ಪಿ. ರೇಣುಕಾಚಾರ್ಯ ಟಾಂಗ್!
  • ಜಾಗತಿಕ ಭಿಕ್ಷೆ ಬೇಡಿದ್ದ ಪಾಕ್ ಎಕ್ಸ್ ಖಾತೆಯೇ ಹ್ಯಾಕ್: ಪಾಕ್ ಆರ್ಥಿಕ ವ್ಯವಹಾರಗಳ ಸಚಿವಾಲಯಕ್ಕೆ ಶಾಕ್!
  • ಐಸಿ-814 ವಿಮಾನ ಅಪಹರಣದ ಮಾಸ್ಟರ್‌ಮೈಂಡ್ ಅಬ್ದುಲ್ ರೌಫ್ ಅಜರ್ ಆಪ್ ಖತಂ: ಯಾರು ಈ ಉಗ್ರ?

Recent Comments

No comments to show.

Archives

  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In