SUDDIKSHANA KANNADA NEWS/ DAVANAGERE/ DATE-28-05-2025
ದಾವಣಗೆರೆ: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮತ್ತು ಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.
ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಂತೂ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಪ್ರವಾಹ ತಲೆದೋರಿದೆ. ರಸ್ತೆ ಮೇಲೆಲ್ಲಾ ನೀರು ಹರಿಯುತ್ತಿದೆ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಭದ್ರಾ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಮಂಗಳವಾರಕ್ಕಿಂತ ಬುಧವಾರ ಹೆಚ್ಚಾಗಿದೆ.
ಭದ್ರಾ ಜಲಾಶಯಕ್ಕೆ 6778 ಕ್ಯೂಸೆಕ್ ಒಳಹರಿವಿದ್ದರೆ, ಹೊರ ಹರಿವು 401 ಕ್ಯೂಸೆಕ್ ಇದೆ. ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 138.6 ಅಡಿ ಇದೆ. ಕಳೆದ ವರ್ಷ ಇದೇ ದಿನ ಡ್ಯಾಂನ ನೀರಿನ ಮಟ್ಟ 117.2 ಅಡಿ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 20 ಅಡಿಗೂ ಹೆಚ್ಚು ನೀರು ಸಂಗ್ರಹವಿದೆ. ಕಳೆದ ವರ್ಷ ಭಾರೀ ಮಳೆಯಾದ ಕಾರಣ ಡ್ಯಾಂ ತುಂಬಿತ್ತು. ಅವಧಿ ಪೂರ್ವ ಮುಂಗಾರು ಎಂಟ್ರಿ ಕೊಟ್ಟಿರುವುದರಿಂದ ಈ ಬಾರಿಯೂ ಡ್ಯಾಂ ತುಂಬುವ ನಿರೀಕ್ಷೆ ರೈತಾಪಿ ವರ್ಗದಲ್ಲಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ.
ಭದ್ರಾ ಜಲಾಶಯದ ನೀರಿನ ಮಟ್ಟ
ಇಂದಿನ ನೀರಿನ ಮಟ್ಟ: 138.6 ಅಡಿ
ಒಳ ಹರಿವು: 6778 ಕ್ಯೂಸೆಕ್
ಹೊರ ಹರಿವು: 41 ಕ್ಯೂಸೆಕ್
ಭದ್ರಾ ಎಡ, ಬಲದಂಡೆ ನಾಲೆ: ಒಟ್ಟು 80 ಕ್ಯೂಸೆಕ್
ಇತರೆ: 200 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 117.2 ಅಡಿ
ಕೆಪಾಸಿಟಿ: 14.319 ಟಿಎಂಸಿ