SUDDIKSHANA KANNADA NEWS/ DAVANAGERE/ DATE-30-05-2025
ದಾವಣಗೆರೆ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಿಆರ್ ಪಿಯಲ್ಲಿರುವ ಭದ್ರಾ ಡ್ಯಾಂ (Bhadra Dam) ನೀರಿನ ಮಟ್ಟ ಏರಿಕೆಯಾಗಿದೆ. 140 ಅಡಿ ಗಡಿ ದಾಟಿರುವ ಜಲಾಶಯದ ನೀರಿನ ಮಟ್ಟ 140.5 ಅಡಿ ಆಗಿದೆ.
ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಕುಂಠಿತವಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಡ್ಯಾಂಗೆ ಬರುತ್ತಿರುವ ಒಳಹರಿವು ಪ್ರಮಾಣ ಕಡಿಮೆ ಆಗಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮತ್ತು ಭದ್ರಾ ಜಲಾನಯನ ಪ್ರದೇಶದಲ್ಲಿ ವರುಣಾರ್ಭಟ ಕಡಿಮೆ ಆಗಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವು 7651 ಕ್ಯೂಸೆಕ್ ಆಗಿದೆ.
ಕಳೆದ ನಾಲ್ಕೈದು ದಿನಗಳಿಂದ ಮಳೆ ಜೋರಾಗಿತ್ತು. ಗುರುವಾರ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣ ದಿನ ಕಳೆದಂತೆ ಹೆಚ್ಚಾಗುತ್ತಿದ್ದರೂ ಇಂದು ಕಡಿಮೆ ಆಗಿದೆ. ಹೊರ ಹರಿವು 405 ಕ್ಯೂಸೆಕ್ ಇದೆ.
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 141.5 ಅಡಿಗೆ ಏರಿಕೆ ಆಗಿದ್ದು, ಕಳೆದ ವರ್ಷ ಇದೇ ದಿನ ಡ್ಯಾಂನ ನೀರಿನ ಮಟ್ಟ 117.2 ಅಡಿ ನೀರು ಸಂಗ್ರಹವಾಗಿತ್ತು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 24 ಅಡಿಗೂ ಹೆಚ್ಚು ನೀರು ಹೆಚ್ಚು ಸಂಗ್ರಹವಾಗಿದೆ. ಕಳೆದ ವರ್ಷ ಭಾರೀ ಮಳೆಯಾದ ಕಾರಣ ಡ್ಯಾಂ ತುಂಬಿತ್ತು. ಅವಧಿ ಪೂರ್ವ ಮುಂಗಾರು ಎಂಟ್ರಿ ಕೊಟ್ಟಿರುವುದರಿಂದ ಈ ಬಾರಿಯೂ ಡ್ಯಾಂ ತುಂಬುವ ನಿರೀಕ್ಷೆ ರೈತಾಪಿ ವರ್ಗದಲ್ಲಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ. ಮಳೆ ಆಗುತ್ತಿರುವುದರಿಂದ ಭದ್ರಾ ಜಲಾನಯನ ಪ್ರದೇಶ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಭದ್ರಾ ಜಲಾಶಯದ ನೀರಿನ ಮಟ್ಟ
ಇಂದಿನ ನೀರಿನ ಮಟ್ಟ: 140.5 ಅಡಿ
ಒಳ ಹರಿವು: 7651 ಕ್ಯೂಸೆಕ್
ಹೊರ ಹರಿವು: 405 ಕ್ಯೂಸೆಕ್
ಭದ್ರಾ ಎಡ, ಬಲದಂಡೆ ನಾಲೆ: ಒಟ್ಟು 80 ಕ್ಯೂಸೆಕ್
ಇತರೆ: 200 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 117.2 ಅಡಿ
ಕೆಪಾಸಿಟಿ: 14.319 ಟಿಎಂಸಿ
ಜಲಾಶಯದ ಗರಿಷ್ಠ ಮಟ್ಟ: 186 ಅಡಿ