SUDDIKSHANA KANNADA NEWS/ DAVANAGERE/ DATE:16_07_2025
ದಾವಣಗೆರೆ: ಭದ್ರಾ ಡ್ಯಾಂ (Bhadra Dam) ಭರ್ತಿಯಾಗಲು ಕೇವಲ ಇನ್ನು 9 ಅಡಿ ಮಾತ್ರ ಬೇಕು. ಕಳೆದ ಎರಡು ತಿಂಗಳಿನಿಂದ ಅಬ್ಬರಿಸಿ ಬೊಬ್ಬಿರಿದ ವರುಣಾರ್ಭಟಕ್ಕೆ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಕುಂಠಿತವಾಗಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಸ್ವಲ್ಪ ಮಟ್ಟಿಗೆ ಒಳಹರಿವು ಏರಿಕೆಯಾಗಿದೆ.
READ ALSO THIS STORY: ಭಾರತದಲ್ಲಿ ದೊಡ್ಡ ಆಘಾತಕಾರಿ ಘಟನೆ, ಪರಿಹಾರ ಕಂಡುಕೊಂಡರಷ್ಟೇ ಕಾರ್ಮೋಡ ತಪ್ಪುತ್ತೆ: ಕೋಡಿಮಠ ಶ್ರೀ ಭಯಾನಕ ಭವಿಷ್ಯ!
ಈ ತಿಂಗಳಿನಲ್ಲೇ ಭದ್ರಾ ಡ್ಯಾಂ ಭರ್ತಿಯಾಗುವ ಎಲ್ಲಾ ಸಾಧ್ಯತೆ ಇದೆ. ಜಲಾಶಯದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಸಿದರೆ ಸ್ವಲ್ಪ ತಡವಾಗಬಹುದು. ಆದ್ರೆ, ಇಷ್ಟೊಂದು ಪ್ರಮಾಣದಲ್ಲಿ ಜಲಾಶಯದಲ್ಲಿ ನೀರು ಸಂಗ್ರಹವಾಗಿರುವುದು ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ರೈತರು ಹಾಗೂ ಜನರ ಸಂಭ್ರಮಕ್ಕೆ ಕಾರಣವಾಗಿದೆ.
ಬೆಳಿಗ್ಗೆ ಆರು ಗಂಟೆ ಹೊತ್ತಿಗೆ ಜಲಾಶಯದ ಇಂದಿನ ನೀರಿನ ಮಟ್ಟ 176.9 ಅಡಿ ಆಗಿದ್ದು, ಇಷ್ಟೊತ್ತಿಗೆ 177 ಅಡಿ ದಾಟಿದೆ ಎಂದು ಭದ್ರಾ ಡ್ಯಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಲಾಶಯಕ್ಕೆ 9122 ಕ್ಯೂಸೆಕ್ ಒಳಹರಿವಿದ್ದರೆ, ಹೊರ ಹರಿವು 3590 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 144.7 ಅಡಿ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 33 ಅಡಿಗೂ ಹೆಚ್ಚು
ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ.
ಚಿಕ್ಕಮಗಳೂರು ಹಾಗೂ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದೆ. ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಜಲಾಶಯ ಭರ್ತಿಗೆ ಕ್ಷಣಗಣನೆ ಶುರುವಾಗಿದೆ.
ಭದ್ರಾ ಜಲಾಶಯಕ್ಕೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಜುಲೈ ತಿಂಗಳಿನಲ್ಲಿ ಹರಿದು ಬಂದಿದೆ. ಜಲಾಶಯ ಭರ್ತಿಗೆ ಇನ್ನು ಕೇವಲ 9 ಅಡಿ ನೀರು ಬೇಕಿದೆ.
ಕಳೆದ ಕೆಲವು ದಿನಗಳಿಂದ ಮಳೆ ಕುಂಠಿತವಾಗಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವು ಕಡಿಮೆಯಾಗಿತ್ತು. ಇನ್ನು ಈ ತಿಂಗಳು ಹದಿನೈದು ದಿನಗಳಿದ್ದು, ಮಳೆ ಆರ್ಭಟಿಸಲು ಶುರು ಮಾಡಿದರೆ ಭರ್ತಿ ಖಚಿತ. ಭದ್ರಾ ಜಲಾಶಯಕ್ಕೆ ಇಷ್ಟೊಂದು ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದರಿಂದ ರೈತರಲ್ಲಿ ಆಶಾಭಾವನೆ ಮೂಡಿದೆ. ಆದ್ರೆ, ವರುಣ ದೇವ ಅಬ್ಬರಿಸಿ ಬೊಬ್ಬಿರಿದರೆ ಪ್ರವಾಹದ ಭೀತಿಯೂ ಶುರುವಾಗಲಿದೆ.
ಭದ್ರಾ ಜಲಾಶಯದ ನೀರಿನ ಮಟ್ಟ
Date:16_07_2025
ಇಂದಿನ ನೀರಿನ ಮಟ್ಟ: 176.9 ಅಡಿ
ಒಳ ಹರಿವು: 9122 ಕ್ಯೂಸೆಕ್
ಹೊರ ಹರಿವು: 3590 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 144.7 ಅಡಿ
ಕೆಪಾಸಿಟಿ: 30.142 ಟಿಎಂಸಿ
ಜಲಾಶಯದ ಗರಿಷ್ಠ ಮಟ್ಟ: 186 ಅಡಿ