SUDDIKSHANA KANNADA NEWS/ DAVANAGERE/DATE:01_09_2025
ದಾವಣಗೆರೆ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಿಆರ್ ಪಿಯಲ್ಲಿರುವ ಭದ್ರಾ ಡ್ಯಾಂ ಭರ್ತಿಯಾದ ಹಿನ್ನೆಲೆಯಲ್ಲಿ ದಾವಣಗೆರೆಯ ರೈತರು ಭದ್ರೆಗೆ ಬಾಗೀನ ಅರ್ಪಿಸಿದರು.
READ ALSO THIS STORY: “ಒಳ್ಳೆಯ ಸ್ಥಾನಮಾನಕ್ಕೆಂದು ಬರುವವರ ತಡೆಯಲು ಸಾವಿರಾರು ಪಡೆಗಳಿರುವ ದುಷ್ಟ ಸಮಾಜ ನಮ್ಮದು”: ಜಿ. ಬಿ. ವಿನಯ್ ಕುಮಾರ್ ಬೇಸರ
ನೀರಾವರಿ ತಜ್ಞ ಪ್ರೊ. ನರಸಿಂಹಪ್ಪ, ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಹೆಚ್. ಆರ್. ಲಿಂಗರಾಜ್ ಅವರ ನೇತೃತ್ವದಲ್ಲಿ ತುಂಬಿದ ಭದ್ರಾ ಡ್ಯಾಂಗೆ ಬಾಗೀನ ಸಮರ್ಪಿಸಿದರು.
ಈ ವೇಳೆ ಶಾನಭೋಗ ನಾಗರಾಜರಾವ್ ಕೊಂಡಜ್ಜಿ, ಎ ಎಂ ಮಂಜುನಾಥ್ ಶಿರಮಗೊಂಡನಹಳ್ಳಿ, ಎ. ಆರ್. ಶಿವಪ್ಪ, ಸತ್ಯನಾರಾಯಣಮೂರ್ತಿ, ಬೆಳವನೂರು ವಿಶ್ವನಾಥ್, ಎಸ್. ಜಿ. ರುದ್ರೇಶ್, ಟಿ ಬಸವರಾಜಪ್ಪ ಹಳೇ ಬಾತಿ, ಗೋಪನಾಳ ಕರಿಬಸಪ್ಪ, ಕಲ್ಪನಹಳ್ಳಿ ಉಜ್ಜಣ್ಣ, ಕೃಷಿಕ ಸಮಾಜ, ಪ್ರೀಕಾರ್ಡ್ ಬ್ಯಾಂಕ್ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದಾವಣಗೆರೆ ಬಸವರಾಜಪ್ಪ, ಎಸ್. ಎ. ವಿಜಯಣ್ಣ ಶಿರಮಗೊಂಡನಹಳ್ಳಿ, ಕರಿಬಸಪ್ಪ, ನೀರುಬಳಕೆ ಸಹಕಾರಿ ಸಂಘದ ಪದಾಧಿಕಾರಿಗಳು, ಕಲ್ಪನಳ್ಳಿ ಚಂದ್ರಪ್ಪ, ನಾಗನೂರ ಮಹೇಶ್ವರಪ್ಪ, ರಾಜಣ್ಣ, ಮಲ್ಲಿಕಾರ್ಜುನ ಗ್ರಾಮ ಪಂಚಾಯತ್ ಸದಸ್ಯರು ಚಂದ್ರು, ಪಾಲಾಕ್ಸಪ್ಪ, ಸಂದೀಪ್ ಎಸ್ ಜಿ ಹಳ್ಳಿ,ಕೊಂಡಜ್ಜಿ ಪ್ರಕಾಶ್ ಕೊಂಡಜ್ಜಿ ಜಗದೀಶ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ವೇಳೆ ಹಾಜರಿದ್ದರು.
ಪ್ರತೀ ವರ್ಷವೂ ಇದೇ ರೀತಿಯಲ್ಲಿ ಒಳ್ಳೆಯ ಮಳೆ ಆಗಿ ಭದ್ರಾ ಡ್ಯಾಂ ಭರ್ತಿಯಾಗುತ್ತಿರಲಿ. ದಾವಣಗೆರೆ ಜಿಲ್ಲೆಯ ಜನರ ಜೀವನಾಡಿ ಭದ್ರಾ ಡ್ಯಾಂ. ಭದ್ರಾ ಜಲಾಶಯ ಭರ್ತಿಯಾದರೆ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಸಿಗುತ್ತದೆ. ರೈತರಿಗೂ
ಅನುಕೂಲವಾಗುತ್ತದೆ. ಪ್ರತಿ ವರ್ಷವೂ ಇದೇ ರೀತಿ ತುಂಬಿದರೆ ರೈತರು ಮತ್ತು ಜನರಿಗೆ ಅನುಕೂಲವಾಗುತ್ತದೆ ಎಂದು ಪ್ರಾರ್ಥಿಸಿದರು. ಸಭೆ ನಡೆಸಿ ರೊಟ್ಟಿ ಬುತ್ತಿ ಊಟ ಮಾಡಿ ದಾವಣಗೆರೆಗೆ ವಾಪಸ್ ಆದರು.