SUDDIKSHANA KANNADA NEWS/ DAVANAGERE/ DATE-30-06-2025
ದಾವಣಗೆರೆ: ಭದ್ರಾ ಅಣೆಕಟ್ಟು ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ. ಇನ್ನು ಭರ್ತಿಗೆ ಬೇಕು ಕೆಲವೇ ಕೆಲವು ಅಡಿಗಳು. ಇದೇ ರೀತಿ ಮಳೆ ಮುಂದುವರಿದರೆ ಜುಲೈ ತಿಂಗಳಿನಲ್ಲೇ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.
ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಜೂನ್ ತಿಂಗಳಲ್ಲಿಯೇ ಇಷ್ಟೊಂದು ಹೆಚ್ಚು ನೀರು ಹರಿದು ಬಂದಿರುವುದು ಇದೇ ಮೊದಲು ಎಂದು ತಿಳಿದು ಬಂದಿದೆ. ಜಲಾಶಯ ಭರ್ತಿಯಾಗಲು ಇನ್ನು ಕೇವಲ 23.1 ಅಡಿ ನೀರು ಬರಬೇಕಷ್ಟೇ.

READ ALSO THIS STORY: ದಾವಣಗೆರೆಯಲ್ಲೂ ಹೃದಯಘಾತಕ್ಕೆ 19 ವರ್ಷದ ಯುವತಿ ಬಲಿ!
ಕಳೆದ ಒಂದು ವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಜಲಾಶಯಕ್ಕೆ ಬರುತ್ತಿರುವ ಒಳಹರಿವು ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 40 ಅಡಿಗೂ ನೀರು ಹೆಚ್ಚು ಹರಿದು ಬಂದಿದ್ದು, ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರುಮತ್ತು ಜನರ ಖುಷಿಗೂ ಕಾರಣವಾಗಿದೆ.
ಜಲಾಶಯದ ಇಂದಿನ ನೀರಿನ ಮಟ್ಟ 163.1 ಅಡಿ ಇದೆ. ಜಲಾಶಯಕ್ಕೆ 11,749 ಕ್ಯೂಸೆಕ್ ಒಳಹರಿವಿದ್ದು, ಹೊರ ಹರಿವು 3393 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 123.10 ಅಡಿ ಸಂಗ್ರಹ ಇತ್ತು. ಈ ವರ್ಷ ಸುಮಾರು 40 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದ್ದು, ರೈತರಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. 2100 ಕ್ಯೂಸೆಕ್ ಇತರೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ. ಕಳೆದ ವರ್ಷವರುಣ ಅಬ್ಬರಿಸಿ ಬೊಬ್ಬಿರಿದ ಕಾರಣ ಭದ್ರಾ ಜಲಾಶಯವು ಎರಡರಿಂದ ಮೂರು ಬಾರಿ ಭರ್ತಿಯಾಗಿತ್ತು. ಬೇಸಿಗೆ ಕಾಲ ಬಂದರೂ ಜಲಾಶಯದಲ್ಲಿ ನೀರು ಸಂಗ್ರಹವಾಗಿತ್ತು. ನಿಯಮಿತವಾಗಿ ಭದ್ರಾ ಎಡದಂಡೆ, ಬಲದಂಡೆ ನಾಲೆಗಳಲ್ಲಿ ನೀರು ಹರಿಸಿದ ಪರಿಣಾಮ ಜಲಾಶಯದ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಮತ್ತೆ ಮಳೆ ಶುರುವಾಗಿದ್ದು, ಒಳಹರಿವು ಹೆಚ್ಚಾಗುತ್ತಿದೆ.
ಭದ್ರಾ ಅಣೆಕಟ್ಟು ಇಂದಿನ ನೀರಿನ ಮಟ್ಟ
Date:30_06_2025
ಇಂದಿನ ನೀರಿನ ಮಟ್ಟ: 163.1 ಅಡಿ
ಒಳ ಹರಿವು: 11,749 ಕ್ಯೂಸೆಕ್
ಹೊರ ಹರಿವು: 3393 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 123. 10 ಅಡಿ
ಕೆಪಾಸಿಟಿ: 17. 363 ಟಿಎಂಸಿ
ಜಲಾಶಯದ ಗರಿಷ್ಠ ಮಟ್ಟ: 186 ಅಡಿ