SUDDIKSHANA KANNADA NEWS/ DAVANAGERE/ DATE-11-06-2025
ದಾವಣಗೆರೆ: ಪೊಲೀಸರ ಹಣ, ಬಂಗಾರ, ಮೊಬೈಲ್ ತೆಗೆದುಕೊಳ್ಳುತ್ತಿದ್ದ ಆರೋಪಿತರನ್ನು 24 ಗಂಟೆಯೊಳಗೆ ಬಂಧಿಸಿ ಆರೋಪಿತರಿಂದ 6,52,000 ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ಆಸೀಫ್, ಆರೀಫ್ ಬಂಧಿತ ಆರೋಪಿಗಳು. ಜೂನ್ 9ರಂದು ದೂರುದಾರರಾದ ರಂಜಿತಾ ಎಂಬುವವರು ಹರಿಹರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರ ಸೋಗಿನಲ್ಲಿ ಬಂದು ಮಹಿಳೆಯರಿಗೆ ಹೆದರಿಸಿ ದರೋಡೆ ಮಾಡಿಕೊಂಡು ಹೋಗಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಸ್ವತ್ತು ಮರಳಿಸುವಂತೆ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಮನವಿ ಮಾಡಿದ್ದರು.
ಹರಿಹರ ನಗರ ಠಾಣೆ ಪಿಐ ಸುರೇಶ ಸಗರಿ ನೇತೃತ್ವದಲ್ಲಿ ಪಿಎಸ್ಐ ಜಿ.ಎಸ್.ವಿಜಯ್ ಗಿನ್ನಿ, ಅಪರಾಧ ವಿಭಾಗ ಸಿಬ್ಬಂದಿಗಳಾದ ನಾಗರಾಜ ಸುಣಗಾರ, ತಿಪ್ಪೆಸ್ವಾಮಿ.ಕೆ.ಎಲ್, ಸಿದ್ದೇಶ, ರವಿ ಆರ್, ರುದ್ರಸ್ವಾಮಿ, ಹನುಮಂತಪ್ಪ ಗೋಪನಾಳ, ರವಿನಾಯ್ಕ, ಶಾಂತರಾಜ್.ಎಂ.ಎಸ್, ಚಮನ್ ಸಾಬ್, ರವಿ.ಕೆ, ರಂಗನಾಥ ಹಾಗೂ ಜಿಲ್ಲಾ ಪೊಲೀಸ್ ಕಚೇಯ ರಾಮಚಂದ್ರ ಜಾಧವ್, ಶಿವಕುಮಾರ, ರಮೇಶ ಅವರನ್ನೊಳಗೊಂಡ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ
ಯಶಸ್ವಿಯಾಗಿದೆ.
ಬಂಧಿತರಿಂದ 6,00,000 ರೂಪಾಯಿ ಬೆಲೆಯ ಕಾರ್, 30,000 ರೂ ಮೌಲ್ಯದ ವಿವಿಧ ಕಂಪನಿಯ ನಾಲ್ಕು ಮೊಬೈಲ್, 12000 ರೂ ಬೆಲೆಯ 2 ಗ್ರಾಂ ತೂಕದ ಕಿವಿ ಓಲೆಗಳು ಸೇರಿದಂತೆ ಒಟ್ಟು 6,52,000 ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಅಧಿಕಾರಿ ಹಾಗೂ ಸಿಬ್ಬಂದಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.