Home ದಾವಣಗೆರೆ ಕಾಂಗ್ರೆಸ್ ಆಮಿಷ, ಅಧಿಕಾರ ದುರುಪಯೋಗ ನಡುವೆಯೂ ಬಿಜೆಪಿಗೆ ಸ್ಪಷ್ಪ ಜನಾದೇಶ ಜನರ ನಾಡಿಮಿಡಿತಕ್ಕೆ ಸಾಕ್ಷಿ: ಬಿ. ವೈ. ವಿಜಯೇಂದ್ರ
ದಾವಣಗೆರೆನವದೆಹಲಿಬೆಂಗಳೂರು

ಕಾಂಗ್ರೆಸ್ ಆಮಿಷ, ಅಧಿಕಾರ ದುರುಪಯೋಗ ನಡುವೆಯೂ ಬಿಜೆಪಿಗೆ ಸ್ಪಷ್ಪ ಜನಾದೇಶ ಜನರ ನಾಡಿಮಿಡಿತಕ್ಕೆ ಸಾಕ್ಷಿ: ಬಿ. ವೈ. ವಿಜಯೇಂದ್ರ

Share
Share

SUDDIKSHANA KANNADA NEWS/DAVANAGERE/DATE:26_12_2025

ಬೆಂಗಳೂರು: ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಮುಖರನ್ನು ಇಂದು ಭೇಟಿ ಮಾಡಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಅಭಿನಂದನೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ ಹೊಂದಿದ ನಂತರ ಚುನಾವಣೆ ನಡೆದಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಎಲ್ಲ ಆಮಿಷ, ಅಧಿಕಾರ ದುರುಪಯೋಗಗಳ ನಡುವೆಯೂ ಪಕ್ಷವು ಸುಸ್ಪಷ್ಟ ಜನಾದೇಶವನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದು ತಿಳಿಸಿದರು.

ಪಕ್ಷದ ಈ ಅಭೂತಪೂರ್ವ ಗೆಲುವಿಗಾಗಿ ಶ್ರಮಿಸಿದ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಶಾಸಕ ಧೀರಜ್ ಮುನಿರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ರಾಮಕೃಷ್ಣಪ್ಪ, ದೊಡ್ಡಬಳ್ಳಾಪುರ ಮಂಡಲ ಅಧ್ಯಕ್ಷ ಮುದ್ದಣ್ಣ, ಪಕ್ಷದ ವೈದ್ಯಕೀಯ ಪ್ರಕೋಷ್ಠ ರಾಜ್ಯ ಸಂಚಾಲಕ ಡಾ. ನಾರಾಯಣ್ ಹಾಗೂ ಗೆಲುವು ಸಾಧಿಸಿದ ನೂತನ ಪಟ್ಟಣ ಪಂಚಾಯತ್ ಸದಸ್ಯರುಗಳನ್ನು ಅಭಿನಂದಿಸಿದರು.

Share

Leave a comment

Leave a Reply

Your email address will not be published. Required fields are marked *