ಪಂಜಾಬ್ನ ಬತಿಂದಾ ಜಿಲ್ಲೆ ಜೀವನ್ ಸಿಂಗ್ವಾಲಾ ಗ್ರಾಮದ ಬಳಿ ಭೀಕರ್ ಬಸ್ ಅಪಘಾತವಾಗಿದೆ. ಸೇತುವೆಯಿಂದ ಚರಂಡಿ ನೀರಿಗೆ ಬಸ್ ಬಿದ್ದ ಪರಿಣಾಮ 8 ಜನರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ಕೊಟ್ಟಿರುವ ಬತಿಂದಾದ ಶಾಸಕ ಜಗರೂಪ್ ಸಿಂಗ್ ಗಿಲ್, ಬಸ್ ಅಪಘಾತದಿಂದಾಗಿ ಸ್ಥಳದಲ್ಲಿಯೇ 5 ಜನರು ಜೀವ ಕಳೆದುಕೊಂಡಿದ್ದು ಮೂವರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಮಾಡುತ್ತಾ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ ಎಂದು ಹೇಳಿದ್ದಾರೆ.
ಹೇಳಿಕೆಗೂ ಮೊದಲು ಬತಿಂದಾದ ಭಾಯ್ಮಣಿ ಸಿಂಗ್ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿದ ಜಗರೂಪ್ ಸಿಂಗ್ ಗಿಲ್, ಒಟ್ಟು 18 ಗಾಯಾಗಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿವಿಲ್ ಸರ್ಜನ್ ಡಾ.ರಾಮ್ದೀಪ್ ಸಿಂಗ್ ಹೇಳಿದ್ದಾರೆ.
ಖಾಸಗಿ ಬಸ್ವೊಂದು ಜೀವನ್ಸಿಂಗ್ವಾಲಾ ಗ್ರಾಮದ ಬಳಿ ಹೋಗುವಾಗ ನಿಯಂತ್ರಣ ಕಳೆದುಕೊಂಡು ಸೇತುವೆಗೆ ಡಿಕ್ಕಿ ಹೊಡೆದು ಕೆಳಗಿದ್ದ ಚರಂಡಿ ನೀರಿಗೆ ಬಿದ್ದಿದೆ. ಸುದ್ದಿ ದೊರೆತ ಕೂಡಲೇ ಎನ್ಡಿಆರ್ಎಫ್ ಹಾಗೂ ಸ್ಥಳೀಯ ಪೊಲೀಸ್ ಪಡೆ ಹಾಗೂ ಸ್ಥಳೀಯರು ಸೇರಿ ಪ್ರಯಾಣಿಕರನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಈಗಾಗಲೇ ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಆಚೆ ತೆಗೆಯಲಾಗಿದೆ. ಆದ್ರೆ ಸ್ಥಳದಲ್ಲಿಯೇ 5 ಜನರು ಜೀವ ಕಳೆದುಕೊಂಡಿದ್ದು.ಮೂರು ಜನ ಪ್ರಯಾಣಿಕರು ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಗುರುತು ಪತ್ತೆ ಹಚ್ಚುವ ಕಾರ್ಯ ಜಿಲ್ಲಾಡಳಿತದಿಂದ ಆಗಬೇಕಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ವೇಗವಾಗಿ ಬಂದ ಬಸ್ ಸೇತುವೆಗೆ ಅಳವಡಿಸಿದ ಕಂಬಿಗಳನ್ನು ಗುದ್ದಿಕೊಂಡು ಚರಂಡಿ ನೀರಿಗೆ ಬಿದ್ದಿದೆಯಂತೆ