SUDDIKSHANA KANNADA NEWS/DAVANAGERE/DATE:21_10_2025
ದಾವಣಗೆರೆ: ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಪಟಾಕಿ, ಸಿಡಿಮದ್ದುಗಳ ಭರಾಟೆ ಜೋರಾಗಿದೆ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರೂ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಆದ್ರೆ, ಈ ವೇಳೆ ಅನಾಹುತ ಸಂಭವಿಸುವ ಅಪಾಯವೂ ಇರುತ್ತದೆ.
ಈ ಸುದ್ದಿಯನ್ನೂ ಓದಿ: ಎಸ್ ಎಸ್ ಎಲ್ ಸಿ, ಪಿಯುಸಿ ಓದಿದವರಿಗೆ ಭರ್ಜರಿ ಉದ್ಯೋಗಾವಕಾಶ: 1426 ಸೈನಿಕ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸುವ ವೇಳೆ ಸಾರ್ವಜನಿಕರು, ವಿಶೇಷವಾಗಿ ಮಕ್ಕಳು ಜಾಗ್ರತೆ ವಹಿಸುವುದು ಅತ್ಯಗತ್ಯ.
ಕಣ್ಣಿಗೆ ಹಾನಿ ಆದರೆ ಕೂಡಲೇ ಈ ಕ್ರಮ ಅನುಸರಿಸಿ:
- 1. ಕಣ್ಣುಗಳನ್ನು ತಿಕ್ಕಬಾರದು
- 2. ಕಣ್ಣುಗಳ ಒಳಗೆ ಬಿದ್ದಿರಬಹುದಾದ, ಸಿಕ್ಕಿಕೊಂಡಿರುವ ಸಿಡಿಮದ್ದಿನ ಯಾವುದೇ ಚಿಕ್ಕ ವಸ್ತುಗಳನ್ನು ತೆಗೆಯಲು ಪ್ರಯತ್ನಿಸಬಾರದು.
- 3. ಯಾವುದೇ ಕಣ್ಣಿನ ಡ್ರಾಪ್ಸ್ ಗಳನ್ನು ಬಳಸಬಾರದು.
- 4. ತಕ್ಷಣವೇ ಆಸ್ಪತ್ರೆಗೆ ಧಾವಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು.
- 5. ಸರ್ಕಾರಿ/ಅಧಿಕೃತ/ನೋಂದಾಯಿತ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕು.
ಮಾನ್ಯ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸಾರ್ವಜನಿಕರು, ಹಸಿರು ಪಟಾಕಿ, ಪರಿಸರ ಸ್ನೇಹಿ ಪಟಾಕಿಗಳನ್ನು ಮಾತ್ರ ಕೊಂಡು ಬಳಸುವಂತೆ ದಾವಣಗೆರೆ ಜಿಲ್ಲಾ ಆರೋಗ್ಯ ಇಲಾಖೆಯು ಸಲಹೆ ನೀಡಿದೆ.