ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Bhadra Dam: ಭದ್ರಾ ಡ್ಯಾಂನಲ್ಲಿ ನೀರಿನ ಸಂಗ್ರಹ ಎಷ್ಟಿದೆ ಗೊತ್ತಾ…? ಬಲದಂಡೆ ನಾಲೆಯಲ್ಲಿ ಎಷ್ಟು ಕ್ಯೂಸೆಕ್ ಹೊರಹರಿವಿದೆ…?

On: October 11, 2023 5:03 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:11-10-2023

ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕ್ಷೀಣಿಸಿದೆ. ಕಳೆದ ತಿಂಗಳಿನಿಂದಲೂ ಮಳೆಯಾಗಿಲ್ಲ. ಭದ್ರಾ ಡ್ಯಾಂ (Bhadra Dam)ನ ನೀರಿನ ಸಂಗ್ರಹ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಕಾಡಾದಲ್ಲಿ ನಿರ್ಧಾರವಾದಂತೆ ಮತ್ತೆ ಹತ್ತು ದಿನಗಳ ಕಾಲ ನೀರು ಸ್ಥಗಿತಗೊಳ್ಳಲಿದೆ. ಆದ್ರೆ, ದಾವಣಗೆರೆ ಜಿಲ್ಲೆಯಲ್ಲಿ ಭತ್ತ ಬೆಳೆದಿರುವ ರೈತರು ಆನ್ ಅಂಡ್ ಪದ್ಧತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನೀರು ಹರಿಸಿರುವ ಪ್ರಮಾಣ ಭದ್ರಾ ಜಲಾಶಯ (Bhadra Dam)ದ ನೀರಿನ ಮಟ್ಟ 157.6 ಅಡಿಗೆ ಕುಸಿದಿದೆ.

Read Also This Story:

ದೇಶದಲ್ಲಿ ಎಷ್ಟು ಲಕ್ಷ ಹೆಕ್ಟೇರ್ ನಲ್ಲಿ ಅಡಿಕೆ (Areca nut) ಬೆಳೆಯಲಾಗುತ್ತೆ…? ಧಾರಣೆ ಕುಸಿಯುತ್ತಿರುವ ಈ ಹೊತ್ತಲ್ಲಿ ಅಡಿಕೆ ಸಿಪ್ಪೆ, ಹಾಳೆ ಬಳಸಿ ಕೈ ತುಂಬಾ ಹಣ ಮಾಡಬಹುದು… ಹೇಗೆ ಅಂತೀರಾ…?

ಒಳಹರಿವು 697 ಕ್ಯೂಸೆಕ್ ಇದ್ದರೆ, ಹೊರ ಹರಿವು 2861 ಕ್ಯೂಸೆಕ್ ಹರಿಸಲಾಗುತ್ತಿದೆ. ಈ ವರ್ಷ 167 ಅಡಿ ಮುಟ್ಟಿದ್ದ ಭದ್ರಾ ಜಲಾಶಯ(Bhadra Dam)ದ ನೀರಿನ ಮಟ್ಟ ಈಗ 157 ಅಡಿಗೆ ಕುಸಿದಿದ್ದು, ಎಡದಂಡೆ ಹಾಗೂ ಬಲದಂಡೆ ನಾಲೆಯಲ್ಲಿ ನೀರು ಹರಿಸುವುದು ಮುಂದುವರಿಸಿದರೆ ಮತ್ತಷ್ಟು ಕಡಿಮೆಯಾಗಲಿದೆ.

ಆಗಸ್ಟ್ 10ರಂದು ಭದ್ರಾ ಡ್ಯಾಂ (Bhadra Dam)ನೀರಿನ ಮಟ್ಟ 167 ಅಡಿ ಇತ್ತು. ಬರೋಬ್ಬರಿ ಹತ್ತು ಅಡಿ ನೀರು ಕಡಿಮೆಯಾಗಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಮಳೆಯಾಗುವುದಾಗಿ ಹವಾಮಾನ ಇಲಾಖೆ ಹೇಳಿತ್ತಾದರೂ ವರುಣ ಕೃಪೆ ತೋರಲಿಲ್ಲ, ಈಗಾಗಲೇ ಮೆಕ್ಕೆಜೋಳ ಬೆಳೆದವರು ಬೆಳೆ ಒಣಗಿ ನಷ್ಟ ಅನುಭವಿಸಿದ್ದರೆ, ಮತ್ತೊಂದೆಡೆ ಭತ್ತ ಬೆಳೆದವರ ಪಾಡು ಇದಕ್ಕಿಂತ ಸದ್ಯ ಭಿನ್ನವಾಗಿಲ್ಲ.

ಡ್ಯಾಂನ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರಲಿದೆ. ಶಿವಮೊಗ್ಗ, ಭದ್ರಾವತಿ ಸೇರಿದಂತೆ ಕೆಲವೆಡೆ ನೀರು ಸ್ಥಗಿತಕ್ಕೆ ಹೋರಾಟ ಮಾಡಲಾಗಿತ್ತು. ದಾವಣಗೆರೆ ಬಂದ್ ನಡೆಸಿ ಭದ್ರಾ ಅಚ್ಚುಕಟ್ಟು ಪ್ರದೇಶ
ಶೇಕಡಾ 70 ರಷ್ಟು ಇದ್ದು, ದಾವಣಗೆರೆ ರೈತರ ಹಿತ ಕಾಯುವಂತೆ ಭಾರತೀಯ ರೈತ ಒಕ್ಕೂಟ ಪ್ರತಿಭಟನೆ ನಡೆಸಿತ್ತು. ಕಾಡಾ ತೀರ್ಮಾನದಂತೆ ನೀರು ಹರಿಸಲಾಗಿತ್ತು. ಆದ್ರೆ, ಈಗ ಮತ್ತೆ ನೀರು ಸ್ಥಗಿತಗೊಳಿಸುತ್ತಿರುವುದರಿಂದ ರೈತರು ಮತ್ತೆ ಆತಂಕಕ್ಕೆ
ಒಳಗಾಗಿದ್ದಾರೆ.

ಬಿಸಿಸಿನ ಝಳವೂ ಹೆಚ್ಚಿದೆ. ಭತ್ತ ಬೆಳೆಯೂ ಒಣುಗುತ್ತಿದೆ. ಮಳೆಯೂ ಬಾರದ ಕಾರಣ ರೈತರು ಏನು ಮಾಡಬೇಕು ಎಂದು ತೋಚದೇ ದಿಗ್ಭ್ರಾಂತರಾಗಿದ್ದಾರೆ. ಒಟ್ಟು 186 ಅಡಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದ ಇಂದಿನ ನೀರಿನ ಮಟ್ಟ 157.6 ಅಡಿ ಆಗಿದೆ. ಸ್ಟೋರೇಜ್ ಕೆಪಾಸಿಟಿ 71.535 ಇದ್ದು, ಭದ್ರಾ ಬಲದಂಡೆ ನಾಲೆಯಲ್ಲಿ 2650 ಕ್ಯೂಸೆಕ್ ಹೊರ ಬಿಡಲಾಗುತ್ತಿದೆ. ಒಟ್ಟಿನಲ್ಲಿ ಡ್ಯಾಂ ನೀರಿನ ಸಂಗ್ರಹ ಕಡಿಮೆಯಾಗುತ್ತಿರುವುದು ರೈತರ ಮೊಗದಲ್ಲಿ ಕಾರ್ಮೋಡ ಕವಿಯುವಂತೆ ಮಾಡಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment