SUDDIKSHANA KANNADA NEWS/ DAVANAGERE/ DATE:14_07_2025
ದಾವಣಗೆರೆ: ಭದ್ರಾ ಡ್ಯಾಂ (Bhadra Dam) ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಜುಲೈ ತಿಂಗಳಿನಲ್ಲಿ ಹರಿದು ಬಂದಿದೆ. ಜಲಾಶಯ ಭರ್ತಿಗೆ ಇನ್ನು ಕೇವಲ ಹತ್ತು ಅಡಿ ನೀರು ಮಾತ್ರ ಬರಬೇಕಷ್ಟೇ.
READ ALSO THIS STORY: 8ನೇ ವೇತನ ಆಯೋಗ: ವೇತನ ಏರಿಕೆ ಯಾವಾಗ? ಸಂಬಳ ಎಷ್ಟು ಏರಿಕೆಯಾಗಬಹುದು?
ಕಳೆದ ಕೆಲವು ದಿನಗಳಿಂದ ಮಳೆ ಕುಂಠಿತವಾಗಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವು ಕಡಿಮೆಯಾಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ 176 ಅಡಿ ಆಗಿದ್ದು, ಭರ್ತಿಗೆ ಕೇವಲ ಹತ್ತು ಅಡಿ ನೀರು ಮಾತ್ರ ಬರಬೇಕು. ಇದು ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಜ ಜಿಲ್ಲೆಗಳ ರೈತರು ಹಾಗೂ ಜನರ ಸಂತಸಕ್ಕೆ ಕಾರಣವಾಗಿದೆ. ಜುಲೈ ತಿಂಗಳಿನಲ್ಲಿ ಭದ್ರಾ ಡ್ಯಾಂನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದು ಇದೇ ಮೊದಲು.
ಇನ್ನು ಈ ತಿಂಗಳು ಹದಿನೈದು ದಿನಗಳಿದ್ದು, ಮಳೆ ಆರ್ಭಟಿಸಲು ಶುರು ಮಾಡಿದರೆ ಭರ್ತಿ ಖಚಿತ. ಭದ್ರಾ ಜಲಾಶಯಕ್ಕೆ ಇಷ್ಟೊಂದು ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದರಿಂದ ರೈತರಲ್ಲಿ ಆಶಾಭಾವನೆ ಮೂಡಿದೆ. ಆದ್ರೆ, ವರುಣ ದೇವ ಅಬ್ಬರಿಸಿ ಬೊಬ್ಬಿರಿದರೆ ಪ್ರವಾಹದ ಭೀತಿಯೂ ಶುರುವಾಗಿದೆ.
9735 ಒಳಹರಿವು ಇದ್ದು, ಹೊರ ಹರಿವು 2161 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ ಭದ್ರಾ ಡ್ಯಾಂ ನೀರಿನ ಮಟ್ಟ 139.3 ಅಡಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಇದೇ ದಿನ ಸುಮಾರು 36 ಅಡಿ
ನೀರು ಹೆಚ್ಚು ಸಂಗ್ರಹವಾಗಿದೆ.
ಭದ್ರಾ ನದಿಪಾತ್ರದ ತಗ್ಗುಪ್ರದೇಶದ ಜನರಿಗೆ ಎಚ್ಚರಿಕೆ:
ಭದ್ರಾ ನದಿ ದಂಡೆಯ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ಭದ್ರಾ ಜಲಾಶಯದ ಪ್ರದೇಶದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಸಾಕಷ್ಟು ಒಳಹರಿವು ಬರುತ್ತಿದೆ.
ಭದ್ರಾ ನದಿಯ ಎಡ ಮತ್ತು ಬಲ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕು. ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ಭದ್ರಾ ಜಲಾಶಯದ ನೀರಿನ ಮಟ್ಟ
Date:14_07_2025
ಇಂದಿನ ನೀರಿನ ಮಟ್ಟ: 176 ಅಡಿ
ಒಳ ಹರಿವು: 9735 ಕ್ಯೂಸೆಕ್
ಹೊರ ಹರಿವು: 2161 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 139.3 ಅಡಿ
ಕೆಪಾಸಿಟಿ: 26.379 ಟಿಎಂಸಿ
ಜಲಾಶಯದ ಗರಿಷ್ಠ ಮಟ್ಟ: 186 ಅಡಿ