ದಾವಣಗೆರೆ: ಜಿಲ್ಲೆಯ ರಾಜಕಾರಣದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ನಡುವೆ ನಡೆದ ಎನ್ನಲಾದ ಅಸಂವಿಧಾನಿಕ ಪದಗಳ ಬಳಕೆ ವಿವಾದದ ಕುರಿತು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಬಿಜೆಪಿ ಶಾಸಕ ಬಿ.ಪಿ. ಹರೀಶ್ ನಡುವಿನ ಅಸಂವಿಧಾನಿಕ ಪದಗಳ ಬಳಕೆ ವಿವಾದಕ್ಕೆ ಸಂಬಂಧಿಸಿದಂತೆ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ನಾಯಕರು ಬಳಸುವ ಕೀಳುಮಟ್ಟದ ಪದಗಳು ಸಮಾಜಕ್ಕೆ ಮತ್ತು ಕಿರಿಯ ರಾಜಕಾರಣಿಗಳಿಗೆ ತಪ್ಪು ಸಂದೇಶ ರವಾನಿಸುತ್ತವೆ ಎಂದರು. ಸಿನಿಮಾಗಳಲ್ಲಿ ಬರುವ ಒರಟು ಸಂಭಾಷಣೆಗಳನ್ನು ಉದಾಹರಿಸಿದ ಅವರು, ರಾಜಕೀಯ ಧುರೀಣರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಆಗ್ರಹಿಸಿದರು.
ದಾವಣಗೆರೆಯಲ್ಲಿ ಈ ಕುರಿತು ಮಾತನಾಡಿದ ಅವರು, “ಹಿರಿಯ ನಾಯಕರೇ ಇಂತಹ ಕೀಳುಮಟ್ಟದ ಹಾಗೂ ಅಸಂವಿಧಾನಿಕ ಪದಗಳನ್ನು ಬಳಸಿದರೆ, ನಾವು ಕಿರಿಯರು ಅವರಿಂದ ಕಲಿಯುವುದಾದರೂ ಏನು? ಸೀನಿಯರ್ಗಳು ಈ ರೀತಿ ನಡೆದುಕೊಂಡರೆ ಸಮಾಜಕ್ಕೆ ನಾವು ಯಾವ ಸಂದೇಶ ನೀಡಿದಂತಾಗುತ್ತದೆ?” ಎಂದು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಹಿಂದಿನ ಕಾಲದ ಚಲನಚಿತ್ರಗಳಲ್ಲಿ, ಉದಾಹರಣೆಗೆ ಹಿರಿಯ ನಟ ಧೀರೇಂದ್ರ ಗೋಪಾಲ್ ಮುಂತಾದವರು ಕೆಲವು ಖಳನಾಯಕ ಪಾತ್ರಗಳಲ್ಲಿ ಬಳಸುತ್ತಿದ್ದ ಒರಟು ಪದಗಳನ್ನು ಸಿನಿಮಾಗಳಲ್ಲಿ ಕೇಳಿದ್ದೇವೆ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಹಿರಿಯ ರಾಜಕಾರಣಿಗಳು ಸಾರ್ವಜನಿಕವಾಗಿ ಇಂತಹ ಭಾಷೆಯನ್ನು ಬಳಸುವುದು ಸರಿಯಲ್ಲ ಎಂದು ಕಿಡಿಕಾರಿದರು.
ಒಬ್ಬರಿಗೊಬ್ಬರಿಗೆ ರಾಜಕೀಯ ವೈಷಮ್ಯವಿರಬಹುದು, ಆದರೆ ಸಾರ್ವಜನಿಕ ವೇದಿಕೆಗಳಲ್ಲಿ ಜನಪ್ರತಿನಿಧಿಗಳು ಬಳಸುವ ಭಾಷೆ ಸಮಾಜಕ್ಕೆ ಮಾದರಿಯಾಗಿರಬೇಕೇ ಹೊರತು, ಗೌರವ ಕಳೆದುಕೊಳ್ಳುವಂತಿರಬಾರದು ಎಂದು ಶಿವಗಂಗಾ ಬಸವರಾಜ್ ಎಚ್ಚರಿಸಿದ್ದಾರೆ. ರಾಜಕೀಯ ನಾಯಕರ ಈ ವಿವಾದಾತ್ಮಕ ಭಾಷಾ ಪ್ರಯೋಗವು ಈಗ ರಾಜ್ಯ ರಾಜಕಾರಣದಲ್ಲಿಯೂ ಚರ್ಚೆಗೆ ಕಾರಣವಾಗಿದೆ.





Leave a comment