Home ಕ್ರೈಂ ನ್ಯೂಸ್ ಇಸ್ಲಾಂ ಧರ್ಮ ಶ್ರೇಷ್ಠ ಹೇಳಿಕೆ ವಿವಾದ: ನಾನೇ ಹೊಸ ಧರ್ಮ ಸ್ಥಾಪನೆ ಮಾಡ್ತೀನಿ ಎಂದ ಸಚಿವ ಬಸವರಾಜ ರಾಯರೆಡ್ಡಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಇಸ್ಲಾಂ ಧರ್ಮ ಶ್ರೇಷ್ಠ ಹೇಳಿಕೆ ವಿವಾದ: ನಾನೇ ಹೊಸ ಧರ್ಮ ಸ್ಥಾಪನೆ ಮಾಡ್ತೀನಿ ಎಂದ ಸಚಿವ ಬಸವರಾಜ ರಾಯರೆಡ್ಡಿ!

Share
ಇಸ್ಲಾಂ
Share

ಕೊಪ್ಪಳ: “ಇಸ್ಲಾಂ ಧರ್ಮ ಎಲ್ಲಕ್ಕಿಂತ ಶ್ರೇಷ್ಠ” ಎಂದು ಹೇಳಿಕೆ ನೀಡಿ ತೀವ್ರ ವಿವಾದಕ್ಕೀಡಾಗಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ವಿವಾದದ ಬೆನ್ನಲ್ಲೇ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯಲಬುರ್ಗಾ ತಾಲೂಕಿನ ಬೋದುರು ಗ್ರಾಮದಲ್ಲಿ ಮಾತನಾಡಿರುವ ಅವರು, “ಎಲ್ಲ ಒಳ್ಳೆಯ ವಿಚಾರಗಳನ್ನು ಇಟ್ಟುಕೊಂಡು ನಾನೇ ಹೊಸ ಧರ್ಮವೊಂದನ್ನು ಯಾಕೆ ಸ್ಥಾಪನೆ ಮಾಡಬಾರದು?” ಎಂದು ಪ್ರಶ್ನಿಸುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ವಿವಾದದ ಹಿನ್ನೆಲೆ: ಇಸ್ಲಾಂ ಧರ್ಮ ಎಲ್ಲಕ್ಕಿಂತ ಶ್ರೇಷ್ಠವಾಗಿದೆ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಹೊಸ ಧರ್ಮ ಸ್ಥಾಪನೆ: ವಿವಾದದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಅವರು, “ಎಲ್ಲ ಒಳ್ಳೆಯ ವಿಚಾರಗಳನ್ನು ಇಟ್ಟುಕೊಂಡು ನಾನೇ ಹೊಸ ಧರ್ಮವೊಂದನ್ನು ಯಾಕೆ ಸ್ಥಾಪನೆ ಮಾಡಬಾರದು?” ಎಂದು ಪ್ರಶ್ನಿಸಿದ್ದಾರೆ.

ಸ್ಥಳ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೋದುರು ಗ್ರಾಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಇಸ್ಲಾಂ ಧರ್ಮ ಹಾಗೂ ಮಠ-ಮಂದಿರಗಳ ಕುರಿತು ಅವರು ನೀಡಿದ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ವಿರೋಧ ಪಕ್ಷಗಳಿಂದ ಆಕ್ರೋಶ ವ್ಯಕ್ತವಾಗಿದೆ.

ಎಲ್ಲಾ ಧರ್ಮಗಳಿಂದ ಇಸ್ಲಾಂ ಧರ್ಮ ಶ್ರೇಷ್ಠ ಎಂದು ಹೇಳಿದ್ದ ರಾಯರೆಡ್ಡಿ ಉಲ್ಟಾ ಹೊಡೆದಿದ್ದು ಹೇಳಿಕೆ ವಿವಾದ ಆದ ಬಳಿಕ  ಶರಣ ತತ್ವ ಇಸ್ ದಿ ಬೆಸ್ಟ್ ಎಂದರು.
ನಾನು ಎಲ್ಲ ಧರ್ಮ ಶ್ರೇಷ್ಠ ಎಂದು ಹೇಳಿದ್ದೇನೆ ತಪ್ಪೇನಿದೆ. ಶ್ರೇಷ್ಠ ವಿಚಾರ ಇಸ್ಲಾಂನಲ್ಲಿದೆ ಎಂದು ಹೇಳಿದ್ದೇನೆ , ಬೇರೆ ಧರ್ಮ ಕಡಿಮೆ ಅಂತ ಹೇಳಿಲ್ಲ. ನಾನು ಎಲ್ಲ ಧರ್ಮಗಳು ಶ್ರೇಷ್ಠನೇ ಎಂದಿರುವುದು. ಒಂದು ವೇಳೆ ನಾನು ಹಾಗೇ ಹೇಳಿದ್ರೆ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
Share

Leave a comment

Leave a Reply

Your email address will not be published. Required fields are marked *

Related Articles