ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ತಮ್ಮ ನೂತನ ಪದಾಧಿಕಾರಿಗಳ ತಂಡವನ್ನು ಪ್ರಕಟಿಸಿದ್ದು, ಪಕ್ಷದಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಿದ್ದಾರೆ. ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಹಿರಿಯ ನಾಯಕ ರಾಮ್ ಮಾಧವ್ ಪ್ರಮುಖ ಜವಾಬ್ದಾರಿಗಳೊಂದಿಗೆ ಪಕ್ಷದ ರಾಷ್ಟ್ರೀಯ ಮಟ್ಟಕ್ಕೆ ಮರಳಿದ್ದಾರೆ.
ಈ ಹೊಸ ಪಟ್ಟಿಯಲ್ಲಿ ರಾಮ್ ಮಾಧವ್ ಮತ್ತು ಉತ್ತರಾಖಂಡದ ಮಾಜಿ ಸಿಎಂ ತೀರಥ್ ಸಿಂಗ್ ರಾವತ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ ಸಿಂಧಿಯಾ, ಬೈಜಯಂತ್ ಜಯ ಪಂಡಾ, ರೇಖಾ ವರ್ಮಾ ಮತ್ತು ತಾರಿಕ್ ಮನ್ಸೂರ್ ತಮ್ಮ ಉಪಾಧ್ಯಕ್ಷ ಹುದ್ದೆಗಳನ್ನು ಉಳಿಸಿಕೊಂಡಿದ್ದಾರೆ.
National vice presidents
Vasundhara Raje Scindia — Rajasthan
Tirath Singh Rawat — Uttarakhand
Ram Madhav — Delhi
Baijayant Jay Panda — Odisha
D Purandeswari — Andhra Pradesh
Rekha Verma — Uttar Pradesh
Varshaben Narendrabhai Doshi — Gujarat
Bharti Pravin Pawar — Maharashtra
Manpreet Singh Badal — Punjab
Lal Singh Arya — Madhya Pradesh
M Nagaraja — Karnataka
Tariq Mansoor — Uttar Pradesh
Madhuchandra Kar — West Bengal
National general secretary (organisation)
BL Santhosh — Delhi
National joint general secretaries (organisation)
Shivprakash — Mumbai
Saudan Singh — Chandigarh
National general secretaries
Vinod Tawde — Maharashtra
Sunil Bansal — Delhi
Biplab Kumar Deb — Tripura
Smriti Irani — Uttar Pradesh
Satish Poonia — Rajasthan
Gajendra Patel — Madhya Pradesh
Harish Dwivedi — Uttar Pradesh
Sanjay Bhatia — Haryana
National secretaries
Kavita Patidar — Madhya Pradesh
K Surendran — Kerala
Bhola Singh — Uttar Pradesh
Pradip Varma — Jharkhand
Jagdish Ishwarbhai Patel — Gujarat
Sandeep Pathak — Delhi
Phangnon Konyak — Nagaland
Sangeeta Yadav — Uttar Pradesh
Anil Antony — Kerala
M Venkateshan — Tamil Nadu
Manoj Tigga — West Bengal
Siddharth Shambhu — Bihar
Swadesh Singh — Delhi
Mriganka Deo Barman — Assam
Rohan Gupta — Gujarat
Jai Prakash — Delhi
National treasurer
Piyush Goyal — Maharashtra
ಮಾಜಿ ಸಚಿವೆ ಸ್ಮೃತಿ ಇರಾನಿ ಮತ್ತು ತ್ರಿಪುರಾದ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇವ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ. ವಿನೋದ್ ತಾವ್ಡೆ ಹಾಗೂ ಸುನಿಲ್ ಬನ್ಸಲ್ ಪ್ರಧಾನ ಕಾರ್ಯದರ್ಶಿಗಳಾಗಿ ಮುಂದುವರಿಯಲಿದ್ದು, ಬಿ.ಎಲ್. ಸಂತೋಷ್ ಅವರು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಪಕ್ಷದ ರಾಷ್ಟ್ರೀಯ ಕೋಶಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಡಿಜಿಟಲ್ ಹಾಗೂ ಸೋಶಿಯಲ್ ಮೀಡಿಯಾ ವಿಭಾಗದಲ್ಲಿದ್ದ ಅಮಿತ್ ಮಾಳವೀಯ ಅವರಿಗೆ ಈ ಬಾರಿ ಸ್ಥಾನ ನೀಡಿಲ್ಲ. ದೀಪಕ್ ಮಸ್ಕೆಗೆ ಸಾಮಾಜಿಕ ಜಾಲತಾಣ ವಿಭಾಗದ ಜವಾಬ್ದಾರಿ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ನೂತನ ಪದಾಧಿಕಾರಿಗಳಿಗೆ ಶುಭಾಶಯ ತಿಳಿಸಿದ್ದು, ಈ ಹೊಸ ತಂಡವು ‘ವಿಕಸಿತ ಭಾರತ’ದ ಸಂಕಲ್ಪವನ್ನು ಮುನ್ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.





Leave a comment