ಮುಂಬೈ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ರಾಹುಲ್ ಗಾಂಧಿ ನೇತೃತ್ವದ ‘ಛಾತ್ರೋನ್ ಕಿ ಗೂಂಜ್’ ಅಭಿಯಾನದ ಬಗ್ಗೆ ಬಹಿರಂಗವಾಗಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ ನಡೆದ ಐಐಎಮ್ಯುಎನ್ (IIMUN) 15ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಅಭಿಯಾನವು ದೇಶದ ಯುವಜನತೆಯಲ್ಲಿ ನಿರೀಕ್ಷಿತ ಪ್ರಭಾವ ಬೀರಲು ವಿಫಲವಾಗಿದೆ ಎಂದು ನೇರವಾಗಿ ಒಪ್ಪಿಕೊಂಡಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ (CJP) ಹಾಗೂ ಜಂತರ್ ಮಂತರ್ನಲ್ಲಿ ನಡೆದ ಯುವಜನರ ಪ್ರತಿಭಟನೆಗಳು ಸೃಷ್ಟಿಸಿದ ಸಂಚಲನವನ್ನು ಕಾಂಗ್ರೆಸ್ನ ಕಾರ್ಯಕ್ರಮ ಸೃಷ್ಟಿಸಲು ಸಾಧ್ಯವಾಗಲಿಲ್ಲ ಎಂದು ತರೂರ್ ಹೇಳಿದರು.
“ಪೇಪರ್ ಲೀಕ್ ಮತ್ತು ನಿರುದ್ಯೋಗದಂತಹ ಸಮಸ್ಯೆಗಳನ್ನು ನಾವು ಮೊದಲೇ ಕೈಗೆತ್ತಿಕೊಂಡಿದ್ದರೂ, ಯುವಜನರ ಹಾಗೂ ಜೆನ್ ಝೀ (Gen Z) ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ಎಲ್ಲಿ ಎಡವಿದ್ದೇವೆ ಎಂಬ ಬಗ್ಗೆ ಪಕ್ಷದ ಒಳಗೆ ಸ್ವಯಂ ವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
- Chhatron ki Goonj
- CJP protest
- Congress internal criticism
- Congress youth outreach
- Gen Z politics
- Indian Youth Congress
- Jantar Mantar protests
- paper leak issue
- Rahul Gandhi
- Shashi Tharoor
- ಕಾಂಗ್ರೆಸ್ ಯುವ ಅಭಿಯಾನ
- ಕಾಂಗ್ರೆಸ್ ಸ್ವಯಂ ವಿಮರ್ಶೆ
- ಛಾತ್ರೋನ್ ಕಿ ಗೂಂಜ್
- ಜಂತರ್ ಮಂತರ್ ಚಳುವಳಿ
- ಜೆನ್ ಝಿ ರಾಜಕೀಯ
- ಪೇಪರ್ ಲೀಕ್ ಸುದ್ದಿ
- ರಾಹುಲ್ ಗಾಂಧಿ
- ವಿದ್ಯಾರ್ಥಿ ಚಳುವಳಿ
- ಶಶಿ ತರೂರ್
- ಸಿಜೆಪಿ ಪ್ರತಿಭಟನೆ





Leave a comment