Home ಕ್ರೈಂ ನ್ಯೂಸ್ ಮಾಜಿ ಬಸ್ ಡ್ರೈವರ್ ಮನೆಯಲ್ಲಿ ಬೆಟ್ಟದಷ್ಟು ಹಣ: ₹28 ಕೋಟಿ ನಗದು, 15 ಕೆಜಿ ಚಿನ್ನ ಜಪ್ತಿ, 5 ನೋಟು ಎಣಿಕೆ ಯಂತ್ರಗಳೇ ಫೇಲ್!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಮಾಜಿ ಬಸ್ ಡ್ರೈವರ್ ಮನೆಯಲ್ಲಿ ಬೆಟ್ಟದಷ್ಟು ಹಣ: ₹28 ಕೋಟಿ ನಗದು, 15 ಕೆಜಿ ಚಿನ್ನ ಜಪ್ತಿ, 5 ನೋಟು ಎಣಿಕೆ ಯಂತ್ರಗಳೇ ಫೇಲ್!

Share
ಬಸ್
Share

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಬೃಹತ್ ದಾಳಿಯಲ್ಲಿ ಅಕ್ರಮ ಸಂಪತ್ತಿನ ಬಹುದೊಡ್ಡ ನಿಧಿಯೇ ಪತ್ತೆಯಾಗಿದೆ. ಮಾಜಿ ಸರ್ಕಾರಿ ಬಸ್ ಚಾಲಕ ಮಿನಾರ್ ಮಂಡಲ್ ಎಂಬುವವರ ಮನೆಯ ಮೇಲೆ ದಾಳಿ ನಡೆಸಿದ ಪೋಲಿಸರು ₹28 ಕೋಟಿಗೂ ಹೆಚ್ಚು ನಗದು ಹಾಗೂ 15 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

ವಶಪಡಿಸಿಕೊಂಡ ಚಿನ್ನದ ಮೌಲ್ಯವೇ ಸುಮಾರು ₹21 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

ನೋಟು ಎಣಿಕೆ ಯಂತ್ರಗಳೇ ಫೇಲ್!

ಮನೆಯಲ್ಲಿ ಕಟ್ಟು ಕಟ್ಟಾಗಿ ಬಿದ್ದಿದ್ದ ಹಣದ ರಾಶಿಯನ್ನು ಕಂಡು ಪೋಲಿಸರೇ ಬೆಚ್ಚಿಬಿದ್ದಿದ್ದಾರೆ. ಹಣವನ್ನು ಎಣಿಸಲು ಬ್ಯಾಂಕ್‌ನಿಂದ ತರಿಸಲಾಗಿದ್ದ 5 ನೋಟು ಎಣಿಕೆ ಯಂತ್ರಗಳು ಹದಗೆಟ್ಟು ಫೇಲ್ ಆಗಿವೆ. ಸತತ 15 ಗಂಟೆಗೂ ಹೆಚ್ಚು ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಕೊನೆಗೆ ಐದು ಬೃಹತ್ ಕಬ್ಬಿಣದ ಪೆಟ್ಟಿಗೆಗಳಲ್ಲಿ (ಟ್ರಂಕ್‌ಗಳಲ್ಲಿ) ಹಣ ಮತ್ತು ಬಂಗಾರವನ್ನು ತುಂಬಿ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದೆ.

ಯಾರೀ ಮಿನಾರ್ ಮಂಡಲ್? ಸಿಂಡಿಕೇಟ್ ಲಿಂಕ್ ಏನು?

ಬಂಧಿತ ಮಿನಾರ್ ಮಂಡಲ್, ಹಿಂದೆ ಸಾರಿಗೆ ಸಂಸ್ಥೆಯಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಈತ ಕಲ್ಲು ಮತ್ತು ಮರಳು ಉದ್ಯಮಿ ತುಳು ಮಂಡಲ್‌ನ ಹತ್ತಿರದ ಸಂಬಂಧಿಯಾಗಿದ್ದಾನೆ. ಈ ಜಪ್ತಿಯಾದ ಬೃಹತ್ ಮೊತ್ತ ಮತ್ತು ಚಿನ್ನವು ತುಳು ಮಂಡಲ್ ನಡೆಸುತ್ತಿದ್ದ ಅಕ್ರಮ ಕಲ್ಲು ಮತ್ತು ಮರಳು ಸಿಂಡಿಕೇಟ್‌ಗೆ ಸೇರಿದ್ದು ಎಂದು ಮಿನಾರ್ ಮಂಡಲ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ರಾಜಕೀಯ ಕೆಸರೆರಚಾಟ ಹಾಗೂ ಬಿಗ್ ಫ್ಯಾಟ್ ವೆಡ್ಡಿಂಗ್:

ಈ ಘಟನೆಯು ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಪ್ರಭಾವಿ ನಾಯಕರ ಹೆಸರುಗಳು ಈ ಪ್ರಕರಣದಲ್ಲಿ ಕೇಳಿಬರುತ್ತಿದ್ದು, ಪಕ್ಷದ ಆಂತರಿಕ ಬಣಗಳ ನಡುವೆ ಆರೋಪ-ಪ್ರತ್ಯಾರೋಪಗಳು ಪ್ರಾರಂಭವಾಗಿವೆ. ಇನ್ನು ತುಳು ಮಂಡಲ್ 2024 ರಲ್ಲಿ ತನ್ನ ಮಗಳ ಮದುವೆಗೆ ಬೋಲಿವುಡ್ ಹಾಗೂ ಬೆಂಗಾಲಿ ನಟ-ನಟಿಯರನ್ನು ಆಹ್ವಾನಿಸಿ ₹100 ಕೋಟಿ ವೆಚ್ಚದ ಅದ್ದೂರಿ ಮದುವೆ ಮಾಡಿದ್ದ ವಿಚಾರವೂ ಈಗ ಮತ್ತೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬಂದಿದೆ.

ಪೊಲೀಸರು ಈ ಹಣ ಮತ್ತು ಚಿನ್ನದ ಮೂಲವನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ಕಾಯ್ದೆಗೊಳಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles