ಬೆಂಗಳೂರು: ಕೇಂದ್ರ ಸರ್ಕಾರದ ವಿದ್ಯುತ್ ವಿತರಣಾ ಕ್ಷೇತ್ರದ ಖಾಸಗೀಕರಣ ನೀತಿಯ ವಿರುದ್ಧ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಕರ್ನಾಟಕದಲ್ಲೂ ಈ ನೀತಿ ಜಾರಿಗೆ ತರುವ ಪ್ರಯತ್ನಗಳು ಲಕ್ಷಾಂತರ ರೈತರು, ಗ್ರಾಹಕರು ಹಾಗೂ ವಿದ್ಯುತ್ ನೌಕರರಲ್ಲಿ ತೀವ್ರ ಆತಂಕ ಮೂಡಿಸಿದೆ. ವಿದ್ಯುತ್ ಎಂಬುದು ಕೇವಲ ವಾಣಿಜ್ಯ ವಸ್ತುವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂಬ ಕೂಗು ಈಗ ಜೋರಾಗಿದೆ.
ಕೃಷಿ ಮತ್ತು ಗೃಹ ಬಳಕೆದಾರರಿಗೆ ಕಾಯುತ್ತಿರುವ ಅಪಾಯ:
ರಾಜ್ಯದ ಲಕ್ಷಾಂತರ ರೈತರು ಕೃಷಿ ಪಂಪ್ಸೆಟ್ಗಳಿಗೆ ಸರ್ಕಾರ ನೀಡುತ್ತಿರುವ ಉಚಿತ ವಿದ್ಯುತ್ ಸೌಲಭ್ಯವನ್ನೇ ನಂಬಿ ಬದುಕುತ್ತಿದ್ದಾರೆ. ಒಂದು ವೇಳೆ ವಿದ್ಯುತ್ ಕ್ಷೇತ್ರ ಖಾಸಗಿ ಸಂಸ್ಥೆಗಳ ಕೈ ಸೇರಿದರೆ, ಈ ಸೌಲಭ್ಯಗಳ ಮುಂದುವರಿಕೆ ಅನಿಶ್ಚಿತವಾಗಲಿದೆ. ನೀರಾವರಿ ವೆಚ್ಚ ದುಬಾರಿಯಾಗಿ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಳವಾಗುವುದರಿಂದ ರೈತರ ಆದಾಯಕ್ಕೆ ನೇರ ಹೊಡೆತ ಬೀಳಲಿದೆ. ಇತ್ತ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆಸರೆಯಾಗಿರುವ ರಾಜ್ಯ ಸರ್ಕಾರದ ‘ಗೃಹಜ್ಯೋತಿ’ ಯೋಜನೆಯ ಭವಿಷ್ಯದ ಬಗ್ಗೆಯೂ ದಟ್ಟ ಅನುಮಾನಗಳು ಮೂಡತೊಡಗಿವೆ. ಲಾಭವನ್ನೇ ಮುಖ್ಯ ಉದ್ದೇಶವಾಗಟ್ಟುಕೊಳ್ಳುವ ಖಾಸಗಿ ಕಂಪನಿಗಳು ಸಾಮಾಜಿಕ ಕಲ್ಯಾಣ ಯೋಜನೆಗಳಿಗಿಂತ ವಾಣಿಜ್ಯ ಹಿತಾಸಕ್ತಿಗೆ ಆದ್ಯತೆ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ನೌಕರರ ಉದ್ಯೋಗ ಭದ್ರತೆಗೆ ಧಕ್ಕೆ:
BESCOM, HESCOM, MESCOM, GESCOM ಮತ್ತು CESC ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಕಾಯಂ ಸಿಬ್ಬಂದಿ, ತಾಂತ್ರಿಕ ನೌಕರರು ಹಾಗೂ ಹೊರಗುತ್ತಿಗೆ ಕಾರ್ಮಿಕರ ಜೀವನೋಪಾಯದ ಮೇಲೂ ಈ ನಿರ್ಧಾರ ತೂಗುಗತ್ತಿಯಾಗಿ ಪರಿಣಮಿಸಲಿದೆ. ವೆಚ್ಚ ಕಡಿತದ ನೆಪದಲ್ಲಿ ಸಿಬ್ಬಂದಿ ಸಂಖ್ಯೆ ಇಳಿಕೆ ಹಾಗೂ ಉದ್ಯೋಗದ ಅನಿಶ್ಚಿತತೆ ಎದುರಾಗುವ ಭೀತಿಯನ್ನು ನೌಕರರ ಸಂಘಟನೆಗಳು ವ್ಯಕ್ತಪಡಿಸುತ್ತಿವೆ.
ಗ್ರಾಮೀಣ ಭಾಗದ ಬಡ ಜನರಿಗೆ ಕೈಗೆಟುಕುವ ದರದಲ್ಲಿ ವಿದ್ಯುತ್ ನೀಡುವುದು ಸಾರ್ವಜನಿಕ ವಲಯದ ಜವಾಬ್ದಾರಿಯಾಗಿದೆ. ಆದ್ದರಿಂದ, ವಿದ್ಯುತ್ ವಿತರಣಾ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಬದಲು, ಸಾರ್ವಜನಿಕ ವಿದ್ಯುತ್ ಸಂಸ್ಥೆಗಳನ್ನು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಬಲಪಡಿಸುವುದೇ ನಿಜವಾದ ಅಭಿವೃದ್ಧಿಯ ಮಾರ್ಗ ಎಂದು ತಜ್ಞರು ಮತ್ತು ನಾಗರಿಕರು ಒತ್ತಾಯಿಸುತ್ತಿದ್ದಾರೆ.
- BESCOM
- Electricity Amendment Act
- Electricity Tariff Hike
- Free Power for Farmers
- Gruha Jyothi Scheme
- HESCOM
- Job Security in ESCOMs
- KPTCL Employees Protest
- Power Privatization
- Public Sector Utilities
- Tata Power Karnataka License
- ಉಚಿತ ವಿದ್ಯುತ್ ಯೋಜನೆ
- ಉದ್ಯೋಗ ಭದ್ರತೆ
- ಕರ್ನಾಟಕ ವಿದ್ಯುತ್ ದರ ಏರಿಕೆ
- ಕೃಷಿ ಪಂಪ್ಸೆಟ್ ಉಚಿತ ವಿದ್ಯುತ್
- ಕೆಪಿಟಿಸಿಎಲ್ ನೌಕರರ ಪ್ರತಿಭಟನೆ
- ಗೃಹಜ್ಯೋತಿ ಯೋಜನೆ
- ಬೆಸ್ಕಾಂ
- ರೈತರ ಹೋರಾಟ
- ವಿದ್ಯುತ್ ಖಾಸಗೀಕರಣ
- ಸಾರ್ವಜನಿಕ ವಲಯದ ಉಳಿವು
- ಹೆಸ್ಕಾಂ





Leave a comment