ನವದೆಹಲಿ: ಭಾರತೀಯ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಒಂದು ಕುತೂಹಲಕಾರಿ ಸಂಗತಿ ಎದ್ದು ಕಾಣುತ್ತದೆ. ಕಾಂಗ್ರೆಸ್ ಪಕ್ಷದಿಂದ ಹೊರಬಂದು ಹೊಸ ಪಕ್ಷ ಕಟ್ಟಿದ ನಾಯಕರು ಪ್ರಾದೇಶಿಕವಾಗಿ ಭಾರಿ ಯಶಸ್ಸು ಸಾಧಿಸಿದ್ದಾರೆ. ಆದರೆ, ಬಿಜೆಪಿಯಿಂದ ಬಂಡಾಯ ಎದ್ದು ಹೋದವರು ಮಾತ್ರ ರಾಜಕೀಯವಾಗಿ ಹಿನ್ನಡೆ ಅನುಭವಿಸಿ, ಮತ್ತೆ ಮಾತೃ ಸಂಸ್ಥೆಗೆ ಮರಳಿದ್ದಾರೆ ಅಥವಾ ಮೂಲೆಗುಂಪಾಗಿದ್ದಾರೆ.
ಇತ್ತೀಚೆಗೆ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಟಿಎಂಸಿ ಮತ್ತು ಎನ್ಸಿಪಿ ಪಕ್ಷಗಳು ಕಾಂಗ್ರೆಸ್ ಜೊತೆ ವಿಲೀನವಾಗಬೇಕು ಎಂದು ಹೇಳಿರುವುದು ಈ ಚರ್ಚೆಯನ್ನು ಮತ್ತೆ ಮುಂಚೂಣಿಗೆ ತಂದಿದೆ.
ಕಾಂಗ್ರೆಸ್ ಸೃಷ್ಟಿಸಿದ ಪ್ರಾದೇಶಿಕ ಶಕ್ತಿಗಳು:
ಕಾಂಗ್ರೆಸ್ನಿಂದ ಸೈದ್ಧಾಂತಿಕ ಅಥವಾ ನಾಯಕತ್ವದ ಭಿನ್ನಾಭಿಪ್ರಾಯದಿಂದ ಹೊರಬಂದ ಮಮತಾ ಬ್ಯಾನರ್ಜಿ (ಟಿಎಂಸಿ), ಶರದ್ ಪವಾರ್ (ಎನ್ಸಿಪಿ), ಮತ್ತು ವೈ.ಎಸ್. ಜಗನ್ ಮೋಹನ್ ರೆಡ್ಡಿ (ವೈಎಸ್ಆರ್ಸಿಪಿ) ಅವರಂತಹ ನಾಯಕರು ತಮ್ಮದೇ ಆದ ರಾಜ್ಯಗಳಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದರು. ಇಂದಿರಾ ಗಾಂಧಿ ಕಾಲದಲ್ಲೂ ಕಾಂಗ್ರೆಸ್ ಇತಿಹಾಸದಲ್ಲೇ ಅತಿ ದೊಡ್ಡ ಸೀಳು ಕಂಡರೂ ಅವರು ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಬಿಜೆಪಿ ಬಂಡಾಯಗಾರರ ವಿಫಲ ಯತ್ನ:
ಮತ್ತೊಂದೆಡೆ, ಆರ್ಎಸ್ಎಸ್ ಸಿದ್ಧಾಂತ ಮತ್ತು ಬಲಿಷ್ಠ ಕೇಂದ್ರ ನಾಯಕತ್ವ ಹೊಂದಿರುವ ಬಿಜೆಪಿಯಲ್ಲಿ ಬಂಡಾಯಗಾರರ ಆಟ ನಡೆಯುತ್ತಿಲ್ಲ. ಗುಜರಾತ್ನ ಶಂಕರ್ಸಿಂಗ್ ವಹೇಲಾ, ಉತ್ತರ ಪ್ರದೇಶದ ಕಲ್ಯಾಣ್ ಸಿಂಗ್, ಮಧ್ಯಪ್ರದೇಶದ ಉಮಾ ಭಾರತಿ ಮತ್ತು ಕರ್ನಾಟಕದ ಬಿ.ಎಸ್. ಯಡಿಯೂರಪ್ಪ (ಕೆಜೆಪಿ) ಅವರಂತಹ ಪ್ರಭಾವಿ ನಾಯಕರು ಬಿಜೆಪಿಯಿಂದ ಹೊರಬಂದು ಹೊಸ ಪಕ್ಷ ಕಟ್ಟಿದರೂ, ದೀರ್ಘಕಾಲ ಉಳಿಯಲು ಸಾಧ್ಯವಾಗದೆ ಮತ್ತೆ ಬಿಜೆಪಿಗೆ ಮರಳಬೇಕಾಯಿತು.
ವಿಲೀನ ಯಾಕೆ ಕಷ್ಟ?
ಪ್ರಸ್ತುತ ಸಂದರ್ಭದಲ್ಲಿ ಟಿಎಂಸಿ ಅಥವಾ ಎನ್ಸಿಪಿಯಂತಹ ಪಕ್ಷಗಳು ಕಾಂಗ್ರೆಸ್ನೊಂದಿಗೆ ಸಂಪೂರ್ಣವಾಗಿ ವಿಲೀನಗೊಳ್ಳುವುದು ಅಸಾಧ್ಯದ ಮಾತು. ಏಕೆಂದರೆ ಈ ಪ್ರಾದೇಶಿಕ ಪಕ್ಷಗಳು ದಶಕಗಳಿಂದ ಕಷ್ಟಪಟ್ಟು ತಮ್ಮದೇ ಆದ ವೋಟ್ ಬ್ಯಾಂಕ್ ಮತ್ತು ಬ್ರ್ಯಾಂಡ್ ಮೌಲ್ಯವನ್ನು ಸೃಷ್ಟಿಸಿಕೊಂಡಿವೆ. ಹೀಗಾಗಿ ಮೈತ್ರಿ ಸಾಧ್ಯವೇ ಹೊರತು, ವಿಲೀನ ತೀರಾ ವಿರಳ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
- BJP rebels
- BS Yediyurappa
- Congress splits
- Indian Politics
- Mamata Banerjee
- opposition unity
- political history India
- political mergers
- Regional Parties
- Sharad Pawar
- ಕಾಂಗ್ರೆಸ್ ವಿಭಜನೆ
- ಪ್ರಾದೇಶಿಕ ಪಕ್ಷಗಳು
- ಬಿ.ಎಸ್. ಯಡಿಯೂರಪ್ಪ
- ಬಿಜೆಪಿ ಬಂಡಾಯಗಾರರು
- ಭಾರತದ ರಾಜಕೀಯ ಪಕ್ಷಗಳು
- ಮಮತಾ ಬ್ಯಾನರ್ಜಿ
- ರಾಜಕೀಯ ಇತಿಹಾಸ
- ರಾಜಕೀಯ ವಿಲೀನ
- ಶರದ್ ಪವಾರ್
- ಸಂಜಯ್ ರಾವತ್ ಹೇಳಿಕೆ





Leave a comment