ದಾವಣಗೆರೆ: ಭೋವಿ ಸಮಾಜದ ಶಾಸಕರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕು. ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಉಪಮುಖ್ಯಮಂತ್ರಿಯಾಗಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೀತಿ ಸಂಶೋಧನೆ ಮತ್ತು ತರಬೇತಿ ವಿಭಾಗದ ರಾಜ್ಯ ಸಂಚಾಲಕರು ಹಾಗೂ ಭೋವಿ ಸಮಾಜದ ಯುವ ಮುಖಂಡ ಬಿ. ಎನ್. ವಿನಾಯಕ್ ಅವರು ಕಾಂಗ್ರೆಸ್ ಹೈಕಮಾಂಡ್ ಅನ್ನು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ ಸಮಾಜದವರು ಮೂವರು ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಈ ಪೈಕಿ ಇಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಗಣಿ ಮತ್ತು ಭೂ ವಿಜ್ಞಾನ ಮತ್ತು ತೋಟಗಾರಿಕೆ ಇಲಾಖೆ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿರುವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿ ಮಧ್ಯ ಕರ್ನಾಟಕದ ದಾವಣಗೆರೆಯ ಸರ್ವತೋಮುಖ ಅಭಿವೃದ್ಧಿಗೆ ಇನ್ನಷ್ಟು ಶಕ್ತಿ ನೀಡಬೇಕೆಂದು ದಾವಣಗೆರೆ ಜಿಲ್ಲಾ ಭೂವಿ ಸಮಾಜದ ವತಿಯಿಂದ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅನ್ನು ಒತ್ತಾಯಿಸುತ್ತಿದ್ದೇವೆ ಎಂದರು.
ಭೋವಿ ಸಮಾಜದ ಅಭಿವೃದ್ಧಿಗೆ ಹಾಗೂ ಹಿಂದುಳಿದ ಸಮಾಜವನ್ನು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗಿಸಲು ನಿಯೋಜಿತ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಭೋವಿ ಸಮಾಜದಿಂದ ಕನಿಷ್ಠ ಇಬ್ಬರು ಸಮಾಜದ ಶಾಸಕರನ್ನು ಸಂಪುಟದ ದರ್ಜೆಯ ಸಚಿವರನ್ನಾಗಿಸಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಭೋವಿ ಸಮಾಜದ ಮುಖಂಡರಾದ ಹರೀಶ್ ಗೊಲ್ಲರಹಟ್ಟಿ, ಪ್ರದೀಪ್ ನೇರ್ಲಗಿ, ದಯಾನಂದ್ ಹುಚ್ಚವನಹಳ್ಳಿ, ಚೌಡೇಶ್, ಕನಕಮೂರ್ತಿ ಅವರು ಹಾಜರಿದ್ದರು.
- Bhovi community cabinet berth
- BN Vinayak Davanagere
- Congress high command appeal
- DAVANAGERE NEWS UPDATES
- DK Shivakumar cabinet
- Karnataka Political News
- SS Mallikarjun DCM post
- ಎಸ್ ಎಸ್ ಮಲ್ಲಿಕಾರ್ಜುನ್ ಡಿಸಿಎಂ
- ಕರ್ನಾಟಕ ರಾಜಕಾರಣ ಸುದ್ದಿಗಳು
- ಕಾಂಗ್ರೆಸ್ ಹೈಕಮಾಂಡ್ ಮನವಿ
- ಡಿ ಕೆ ಶಿವಕುಮಾರ್ ಸಂಪುಟ
- ದಾವಣಗೆರೆ ಭೋವಿ ಸಮಾಜ ಪತ್ರಿಕಾಗೋಷ್ಠಿ
- ಬಿ ಎನ್ ವಿನಾಯಕ್ ದಾವಣಗೆರೆ
- ಭೋವಿ ಸಮಾಜ ಸಚಿವ ಸ್ಥಾನ






Leave a comment