Home ದಾವಣಗೆರೆ ತಮಿಳುನಾಡು ಸಚಿವ ಸಂಪುಟ ಖಾತೆ ಹಂಚಿಕೆ: ಸೆಂಕೋಟಯ್ಯನ್‌ಗೆ ಹಣಕಾಸು, ಸಿಎಂ ವಿಜಯ್‌ ಗೃಹ ಇಲಾಖೆ ಇಟ್ಟುಕೊಂಡಿದ್ಯಾಕೆ?
ದಾವಣಗೆರೆನವದೆಹಲಿಬೆಂಗಳೂರು

ತಮಿಳುನಾಡು ಸಚಿವ ಸಂಪುಟ ಖಾತೆ ಹಂಚಿಕೆ: ಸೆಂಕೋಟಯ್ಯನ್‌ಗೆ ಹಣಕಾಸು, ಸಿಎಂ ವಿಜಯ್‌ ಗೃಹ ಇಲಾಖೆ ಇಟ್ಟುಕೊಂಡಿದ್ಯಾಕೆ?

Share
ತಮಿಳುನಾಡು
Share

ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (CM Vijay) ಅವರ ಸಚಿವ ಸಂಪುಟದ ಖಾತೆ ಹಂಚಿಕೆ ಶನಿವಾರ ಅಧಿಕೃತವಾಗಿ ಪ್ರಕಟಗೊಂಡಿದೆ.

ಮುಖ್ಯಮಂತ್ರಿ ವಿಜಯ್ ಅವರು ಗೃಹ ಮತ್ತು ಪೊಲೀಸ್ ಸೇರಿದಂತೆ ಪ್ರಮುಖ ಇಲಾಖೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದರೆ, ಹಿರಿಯ ನಾಯಕ ಕೆ.ಎ. ಸೆಂಕೋಟಯ್ಯನ್ ಅವರಿಗೆ ಹಣಕಾಸು ಜವಾಬ್ದಾರಿ ನೀಡಲಾಗಿದೆ. ಸಂಪುಟದ ಅತ್ಯಂತ ಕಿರಿಯ ಸಚಿವೆ ಸೆಲ್ವಿ ಎಸ್. ಕೀರ್ತನಾ ಅವರಿಗೆ ಕೈಗಾರಿಕಾ ಇಲಾಖೆಯ ಉಸ್ತುವಾರಿ ವಹಿಸಿರುವುದು ವಿಶೇಷ ಗಮನ ಸೆಳೆದಿದೆ.

ಸಿಎಂ ವಿಜಯ್ ಬಳಿ ಇರುವ ಪ್ರಮುಖ ಇಲಾಖೆಗಳು:

ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಸಾರ್ವಜನಿಕ, ಸಾಮಾನ್ಯ ಆಡಳಿತ, ಗೃಹ, ಪೊಲೀಸ್, ಜಿಲ್ಲಾ ಕಂದಾಯ ಅಧಿಕಾರಿಗಳು, ವಿಶೇಷ ಕಾರ್ಯಕ್ರಮ ಅನುಷ್ಠಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವಜನ ಕಲ್ಯಾಣ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಕಲ್ಯಾಣ, ಪೌರಾಡಳಿತ ಹಾಗೂ ನಗರಾಭಿವೃದ್ಧಿ ಮತ್ತು ಜಲಸರಬರಾಜು ಇಲಾಖೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

ಪ್ರಮುಖ ಸಚಿವರು ಮತ್ತು ಖಾತೆಗಳ ವಿವರ:

  • ಕೆ.ಎ. ಸೆಂಕೋಟಯ್ಯನ್: ಹಣಕಾಸು, ಪಿಂಚಣಿ ಮತ್ತು ಪಿಂಚಣಿ ಭತ್ಯೆಗಳು.

  • ಸೆಲ್ವಿ ಎಸ್. ಕೀರ್ತನಾ (ಕಿರಿಯ ಸಚಿವೆ): ಕೈಗಾರಿಕೆ ಮತ್ತು ಹೂಡಿಕೆ ಉತ್ತೇಜನ.

  • ಎನ್. ಆನಂದ್: ಗ್ರಾಮೀಣಾಭಿವೃದ್ಧಿ ಮತ್ತು ಜಲಸಂಪನ್ಮೂಲ (ಪಂಚಾಯತ್ ರಾಜ್, ಬಡತನ ನಿರ್ಮೂಲನೆ, ನೀರಾವರಿ ಯೋಜನೆಗಳು).

  • ಆಧವ್ ಅರ್ಜುನ: ಸಾರ್ವಜನಿಕ ಲೋಕೋಪಯೋಗಿ (PWD), ಹೆದ್ದಾರಿಗಳು, ಸಣ್ಣ ಬಂದರುಗಳು ಮತ್ತು ಕ್ರೀಡಾ ಅಭಿವೃದ್ಧಿ.

  • ಡಾ. ಕೆ.ಜಿ. ಅರುಣ್‌ರಾಜ್: ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಕುಟುಂಬ ಕಲ್ಯಾಣ.

  • ಪಿ. ವೆಂಕಟರಮಣನ್: ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ಸಂರಕ್ಷಣೆ.

  • ಆರ್. ನಿರ್ಮಲ್‌ಕುಮಾರ್: ಇಂಧನ ಸಂಪನ್ಮೂಲ ಮತ್ತು ಕಾನೂನು (ವಿದ್ಯುತ್, ಜೈಲುಗಳು, ಭ್ರಷ್ಟಾಚಾರ ತಡೆ, ಚುನಾವಣೆ).

  • ರಾಜಮೋಹನ್: ಶಾಲಾ ಶಿಕ್ಷಣ, ತಮಿಳು ಅಭಿವೃದ್ಧಿ, ಮಾಹಿತಿ ಮತ್ತು ಪ್ರಚಾರ, ಸಂಸ್ಕೃತಿ ಮತ್ತು ಸಿನೆಮಾಟೋಗ್ರಾಫ್ ಕಾಯ್ದೆ.

  • ಡಾ. ಟಿ.ಕೆ. ಪ್ರಭು: ನೈಸರ್ಗಿಕ ಸಂಪನ್ಮೂಲಗಳು, ಗಣಿ ಮತ್ತು ಖನಿಜ ಇಲಾಖೆ.

ವಿಶೇಷವಾಗಿ ಯುವ ಹಾಗೂ ಮಹಿಳಾ ನಾಯಕಿಯಾಗಿರುವ ಸೆಲ್ವಿ ಕೀರ್ತನಾ ಅವರಿಗೆ ಕೈಗಾರಿಕೆಯಂತಹ ಪ್ರಮುಖ ಖಾತೆ ನೀಡಿರುವುದು ತಮಿಳುನಾಡು ರಾಜಕೀಯ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ.

Share

Leave a comment

Leave a Reply

Your email address will not be published. Required fields are marked *