SUDDIKSHANA KANNADA NEWS/ DAVANAGERE/ DATE:06-10-2024
ಗ್ವಾಲಿಯಾರ್: ಇಲ್ಲಿ ನಡೆದ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ತಂಡವು ಬಾಂಗ್ಲಾದೇಶದ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದೆ. ಈ ಮೂಲಕ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.
ಐಪಿಎಲ್ನ ವೇಗಿ ಮಯಾಂಕ್ ಯಾದವ್, ವರುಣ್ ಚಕ್ರವರ್ತಿ, ಹರ್ಷದೀಪ್ ಸಿಂಗ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡವು ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿನ ಪಂದ್ಯದಲ್ಲಿ ಅಲ್ಪಮೊತ್ತಕ್ಕೆ
ಕುಸಿಯಿತು. ಭಾರತ ಏಳು ವಿಕೆಟ್ ಗಳಿಂದ ಜಯಭೇರಿ ಬಾರಿಸಿತು.
ವರುಣ್ ಹಾಗೂ ಮಯಾಂಕ್ ಯಾದವ್ ಬೌಲಿಂಗ್ ಗೆ ತತ್ತರಿಸಿ ಬಾಂಗ್ಲಾ ತಂಡವು 127 ರನ್ಗಳಿಗೆ ಸರ್ವಪತನ ಕಂಡಿತು. ಸೂರ್ಯಕುಮಾರ್ ಯಾದವ್ (29), ಸಂಜು ಸ್ಯಾಮ್ಸನ್ (29) ಮತ್ತು ಹಾರ್ದಿಕ್ ಪಾಂಡ್ಯ (39) ಬ್ಯಾಟಿಂಗ್ ನೆರವಿನಿಂದ 11.5 ಓವರ್ಗಳಲ್ಲಿ ಗುರಿಯನ್ನು ಮುಟ್ಟಿತು.
ಟಾಸ್ಗೆ ಮುಂಚೆಯೇ ಎಲ್ಲಾ ಕಣ್ಣುಗಳು 22 ವರ್ಷದ ಮಯಾಂಕ್ ಯಾದವ್ (1/21) ಮೇಲೆ ಇದ್ದವು ಮತ್ತು ಐದು ತಿಂಗಳ ನಂತರದ ಮೊದಲ ಸ್ಪರ್ಧಾತ್ಮಕ ಔಟಿಂಗ್ನಲ್ಲಿ ಅವರು ನಿರಾಶೆಗೊಳಿಸಲಿಲ್ಲ. ಐಪಿಎಲ್ ಟೂರ್ನಿಯಲ್ಲಿ 150 kmph ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದ ಮಯಾಂಕ್, 2-1-3-1 ಮಾರಕ ಬೌಲಿಂಗ್ ದಾಳಿ ನಡೆಸಿದರು.
ಮೊದಲ ಎರಡು ಓವರ್ಗಳಲ್ಲಿ 145.7 kmph ಮತ್ತು 148.7 kmph ವೇಗ ಎಸೆತ ಹಾಕಿ ಮಯಾಂಕ್ ಗಮನ ಸೆಳೆದರು. ಅನುಭವಿ ಮಹಮ್ಮದುಲ್ಲಾ, ಅವರ ವೇಗದ ಬಗ್ಗೆ ಎಚ್ಚರದಿಂದ, ಮಯಾಂಕ್ ಅವರ ಮೊದಲ ಅಂತರರಾಷ್ಟ್ರೀಯ ವಿಕೆಟ್ ಆದರು. ವಾಷಿಂಗ್ಟನ್ ಸುಂದರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಸುಮಾರು ಮೂರು ವರ್ಷಗಳ ನಂತರ ತಂಡಕ್ಕೆ ಮರಳಿದ ವರುಣ್ ಚಕ್ರವರ್ತಿ (3/31), ಬಾಂಗ್ಲಾದೇಶದ ಬ್ಯಾಟರ್ಗಳಿಗೆ ಸವಾಲಾಗಿ ಪರಿಣಮಿಸಿದರು, ಎಡಗೈ ವೇಗಿ ಹರ್ಷದೀಪ್ ಸಿಂಗ್ (3/14) ಸಹ ಪ್ರಮುಖ ಪಾತ್ರ ವಹಿಸಿದರು.