ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Independence Day: ಸ್ವಾತಂತ್ರ್ಯ ದಿನಾಚರಣೆಯಂದು ಇರಬೇಕು ಶಾಲಾ ಮಕ್ಕಳ ಕಾಳಜಿ: ಡಿ. ಎಸ್. ಹೇಮಂತ್ ರು ಕೊಟ್ಟಿರುವ ಸಲಹೆ, ಮನವಿ ಏನು…?

On: August 12, 2023 5:25 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:12-08-2023

ದಾವಣಗೆರೆ: ಸ್ವಾತಂತ್ರ್ಯ ದಿನಾಚರಣೆ (Independence Day)ಗೆ ಎಲ್ಲೆಡೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದ್ರೆ, ಶಾಲಾ ಮಕ್ಕಳು ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ತೆರಳುತ್ತಾರೆ. ಶಾಲೆಗಳಿಂದ ಹೋಗುವ ವಿದ್ಯಾರ್ಥಿಗಳ
ಸುರಕ್ಷತೆಯೆಡೆಗೂ ಗಮನ ನೀಡಬೇಕು.

ಹೌದು. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ (Independence Day ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಯಾಗಿರುತ್ತದೆ. ಶಾಲಾ ಕಾಲೇಜಿನ ಮಕ್ಕಳು ನಗರದ ವಿವಿಧ ಭಾಗಗಳಿಂದ ಕ್ರೀಡಾಂಗಣದ ಪೂರ್ವ
ಮತ್ತು ಉತ್ತರ ಗೇಟಿನಿಂದ ಒಳ ಬರುತ್ತಾರೆ. ಹದಡಿ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದು ರಸ್ತೆ ದಾಟುವ ಮಕ್ಕಳಿಗೆ ಅಪಾಯ ಕಟ್ಟಿಟ್ಟ ಬುತ್ತಿ.

ಈ ಸುದ್ದಿಯನ್ನೂ ಓದಿ: 

Bhadra Dam: ಆಗಸ್ಟ್ 10ರಿಂದ ಭದ್ರಾ ಅಚ್ಚುಕಟ್ಟುದಾರರಿಗೆ ಭದ್ರಾ ಡ್ಯಾಂನಿಂದ ನೀರು: ಎಷ್ಟು ದಿನಗಳ ಕಾಲ? ಎಷ್ಟು ಕ್ಯೂಸೆಕ್ ನೀರು ಹರಿಯುತ್ತೆ ಗೊತ್ತಾ…?

ಕಾರ್ಯಕ್ರಮ ಪ್ರಾರಂಭವಾಗುವ ವೇಳೆಯಿಂದ ಮುಕ್ತಾಯವಾಗುವವರೆಗೆ ಹದಡಿ ರಸ್ತೆಯಲ್ಲಿ ಸಂಚರಿಸುವ ವಾಹನ ಮಾರ್ಗ ಬದಲಿಸಿದರೆ ಮಕ್ಕಳು ಅಪಾಯ ರಹಿತವಾಗಿ ಓಡಾಡಬಹುದು. ಜೊತೆಗೆ ಸುಗಮ ಸಂಚಾರ ಮತ್ತು ಜನಸಂದಣಿ ನಿಯಂತ್ರಿಸಲು ಪೋಲಿಸ್ ವ್ಯವಸ್ಥೆಯೂ ಆಗಬೇಕು.

ಸ್ಟೇಡಿಯಂ ಸೌಂಡ್ ಸಿಸ್ಟಂ ಕೊನೆಯಲ್ಲಿರುವವರಿಗೆ ತಲುಪುವುದಿಲ್ಲ. ಸ್ಟೇಡಿಯಂನಲ್ಲಿ ಕಾರ್ಯಕ್ರಮ ಕೊಡಲು ಬರುವ ಮಕ್ಕಳಿಗೆ ನಿರೂಪಕರ ಮಾತು ಕೇಳಿಸುವುದಿಲ್ಲ. ಕ್ರೀಡಾಂಗಣದ ಸುತ್ತಲೂ ಕುಳಿತ ವೀಕ್ಷಕರಿಗೆ ಧ್ವನಿ ತಲುಪುವುದಿಲ್ಲ. ಈ ನ್ಯೂನತೆ ಸರಿಪಡಿಸಿ ಧ್ವನಿವರ್ಧಕದ ಸಾಮಥ್ರ್ಯ ಹೆಚ್ಚು ಮಾಡಿ ಎಲ್ಲರಿಗೂ ಕೇಳುವಂತೆ ವ್ಯವಸ್ಥೆ ಮಾಡಲು ಸಂಬಂಧಪಟ್ಟವರಲ್ಲಿ ವಿನಂತಿಸುತ್ತೇನೆ. ಬಾಯಾರಿದ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಸೌಕರ್ಯವಿರುವಂತೆ ನೋಡಿಕೊಳ್ಳುವಂತೆ ಸಿದ್ದಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಿ. ಎಸ್. ಹೇಮಂತ್ ಅವರು ಮನವಿ ಮಾಡಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment