Home ದಾವಣಗೆರೆ ದಾವಣಗೆರೆಯ ಸಿದ್ಧಗಂಗಾ ಸಂಸ್ಥೆಯಲ್ಲಿ 77 ನೇ ಗಣರಾಜ್ಯೋತ್ಸವ ಸಂಭ್ರಮ: ಯಾವೆಲ್ಲಾ ಸ್ಪೆಷಾಲಿಟಿ ಇತ್ತು ಗೊತ್ತಾ?
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆಯ ಸಿದ್ಧಗಂಗಾ ಸಂಸ್ಥೆಯಲ್ಲಿ 77 ನೇ ಗಣರಾಜ್ಯೋತ್ಸವ ಸಂಭ್ರಮ: ಯಾವೆಲ್ಲಾ ಸ್ಪೆಷಾಲಿಟಿ ಇತ್ತು ಗೊತ್ತಾ?

Share
ದಾವಣಗೆರೆ
Share

ದಾವಣಗೆರೆ: ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಾಲಾ-ಕಾಲೇಜಿನ ಮಕ್ಕಳು 77 ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಈ ಸುದ್ದಿಯನ್ನೂ ಓದಿ: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ದಾವಣಗೆರೆಯ ಡಾ. ಸುರೇಶ್ ಹನಗವಾಡಿ ಕಂಪ್ಲೀಟ್ ಡೀಟೈಲ್ಸ್

ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸ್ಕೌಟ್ ಗೈಡ್ಸ್ ನ ಕಾರ್ಯದರ್ಶಿ ಎಂ.ಸಿ. ಮಹೇಶ್ ರವರು ಧ್ವಜಾರೋಹಣ ನೆರವೇರಿಸಿದರು. ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್‌ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ಎಲ್‌ಕೆಜಿ ಯುಸ್ರಾ ಖಾಜಿ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯ ಕೋರಿದಳು. 2 ನೇ ತರಗತಿ ಯಶಸ್‌ ಆರ್.ಎಸ್‌ ಡಾ. ಬಿ.ಆರ್‌ ಅಂಬೇಡ್ಕರ್‌ ಬಗ್ಗೆ, ಚೈತ್ರಿಕ ಸಂವಿಧಾನ ದಿನಾಚರಣೆ ಬಗ್ಗೆ ಮೂರನೇ ತರಗತಿ ಫಜೀಲತ್‌ ಕೋಠಿ ಮತ್ತು ಹರ್ಷಿತ್‌ ಟಿ ಇವರು ಸಂವಿಧಾನದ ಪೀಠಿಕೆ ಮತ್ತು ಸಂವಿಧಾನದಲ್ಲಿರುವ ವಿವರಣೆ ತಿಳಿಸಿದರು.

ಸಂವಿಧಾನದ ರಚನೆ ಕುರಿತ ಮಾಹಿತಿ:

6 ನೇ ತರಗತಿ ಸಾಕ್ಷಿ ಮತ್ತು ಗಾನಶ್ರೀ ಸಂವಿಧಾನದ ರಚನೆ ಮತ್ತು ಸಮಿತಿ ಸದಸ್ಯರ ಬಗ್ಗೆ ಬೆಳಕು ಚೆಲ್ಲಿದರು. ಅಭಿಷೇಕ್‌ ಎಂ.ಸಿ ಜನವರಿ 26 ರಂದು ಹುತಾತ್ಮನಾದ ಸಂಗೊಳ್ಳಿ ರಾಯಣ್ಣನ ತ್ಯಾಗ-ಬಲಿದಾನವನ್ನು ಸ್ಮರಿಸಿದನು. 1 ನೇ ತರಗತಿ ಮಕ್ಕಳು ಐ ಲವ್‌ ಮೈ ಇಂಡಿಯಾ, 3 ನೇ ತರಗತಿ ಮಕ್ಕಳು ವಂದೇ ಮಾತರಂ ಗೀತೆಗಳಿಗೆ ಆಕರ್ಷಕವಾಗಿ ನೃತ್ಯ ಪ್ರಸ್ತುತ ಪಡಿಸಿದರು.

ಸುಶ್ರಾವ್ಯವಾಗಿ ಗೀತೆ ಹಾಡಿದ ಮಕ್ಕಳು:

7 ನೇ ತರಗತಿಯ ಜಾನ್ಹವಿ ತಂಡದವರು ಚೊಡೋ ಕಲ್‌ ಕಿ ಬಾತ್‌, ಐಜಾ ಅಫ್ಸರಿ ತಂಡದವರು ವಿಶ್ವ ವಿನೂತನ ವಿದ್ಯಾಚೇತನ, 6ನೇ ತರಗತಿಯ ಕೀರ್ತನಾ ತಂಡದವರು ತಾಯಿ ಭಾರತಿಯ ಪಾದ ಪದ್ಮಗಳ ಎಂಬ ಗೀತೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು.

ಜೈಹೋ ಹಾಡಿಗೆ ರ್ಯಾಂಪ್ ವಾಕ್:

1 ನೇ ತರಗತಿ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟು ಜೈಹೋ ಹಾಡಿಗೆ ರ್ಯಾಂಪ್ ವಾಕ್‌ ಮಾಡಿ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ವಾಣಿಶ್ರೀ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿದ್ಧಗಂಗಾ ಸಿಬಿಎಸ್‌ಇ ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್‌, ಕಾಂಪೋಜಿಟ್‌ ಹೈಸ್ಕೂಲ್‌ ಮುಖ್ಯ ಶಿಕ್ಷಕಿ ರೇಖಾರಾಣಿ, ಸಂಸ್ಥೆಯ ಕಾರ್ಯದರ್ಶಿ ಹೇಮಂತ್‌, ನಿರ್ದೇಶಕರಾದ ಜಯಂತ್‌ ಮತ್ತು ಮುಖ್ಯಸ್ಥರಾದ ಜಸ್ಟಿನ್‌ ಡಿʼಸೌಜ ಉಪಸ್ಥಿತರಿದ್ದರು. ಶಾಲಾ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಪಾಲ್ಗೊಂಡಿದ್ದರು. ಸಹ ಶಿಕ್ಷಕಿ ಆಶಾ. ಎಸ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ಭಾರತದ ಭೂಪಟದ ಸೊಬಗು:

ಚಿತ್ರಕಲಾ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಧ್ವಜಸ್ತಂಭದ ಮುಂದೆ ಭಾರತದ ಭೂಪಟ ಮತ್ತು ರಂಗೋಲಿ ಬಿಡಿಸಿ ಸುಂದರವಾಗಿ ಸಿಂಗರಿಸಿದ್ದರು.

Share

Leave a comment

Leave a Reply

Your email address will not be published. Required fields are marked *