SUDDIKSHANA KANNADA NEWS/ DAVANAGERE/ DATE:26-07-2023
ದಾವಣಗೆರೆ: ಬಿಎಲ್ಒ ಕೆಲಸದಿಂದ ಪ್ರಾಥಮಿಕ ಶಾಲಾ ಶಿಕ್ಷಕರ(Teachers)ನ್ನು ವಿಮುಖಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದಾವಣಗೆರೆ ಉತ್ತರ ಘಟಕದ ನೇತೃತ್ವದಲ್ಲಿ ಶಿಕ್ಷಕರು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ, ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು. ಬಳಿಕ ಜಿಲ್ಲಾಧಿಕಾರಿ ಅವರಿಗೂ ಮನವಿ ಸಲ್ಲಿಸಿ ಸಂಕಷ್ಟ ಹೇಳಿಕೊಂಡರು.
ಶಿಕ್ಷಕರು (Teachers) ಶಿಕ್ಷಕ ವೃತ್ತಿಯ ಜೊತೆಗೆ ಇಲಾಖೆವಾರು ಕಾರ್ಯಕ್ರಮಗಳಾದ ಬಿಸಿಯೂಟ, ಮೊಟ್ಟೆ ವಿತರಣೆ, ಆನ್ ಲೈನ್ ಸೇರಿದಂತೆ ಇತರೆ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಬಿಎಲ್ ಒ ಕೆಲಸವನ್ನೂ ಮಾಡಬೇಕಿದೆ. ಇದರಿಂದ ಶಾಲೆಗಳಲ್ಲಿ ಸರಿಯಾಗಿ ಪಾಠ ಪ್ರವಚನ ನಡೆಯುತ್ತಿಲ್ಲ. ಆದ್ದರಿಂದ ಕೂಡಲೇ ಶಿಕ್ಷಕರನ್ನು ಕೂಡಲೇ ಬಿ ಎಲ್ ಒ ಕೆಲಸದಿಂದ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ:
Diamond:ದಿನಗೂಲಿ ನೌಕರರ ಮಕ್ಕಳೀಗ ಸಿನಿಮಾ ಸ್ಟಾರ್ಸ್: ಡೈಮಂಡ್ ಕ್ರಾಸ್ ನ ದಾವಣಗೆರೆ ಯುವಕರ “ಡೈಮಂಡ್” ಯಶೋಗಾಥೆ
ಈ ವೇಳೆ ಮಾತನಾಡಿದ ಅಧ್ಯಕ್ಷೆ ಎಂ. ಪಿ. ಶೋಭಾರಾಣಿ, ಶಿಕ್ಷಕರು (Teachers) ಶಾಲೆಗಳಲ್ಲಿ ಸಿಗುತ್ತಿಲ್ಲ. ಸರ್ಕಾರ ಸಂಬಳ ಕೊಡುವುದು ಪಾಠ ಮಾಡಲು. ಆದ್ರೆ, ಬಿ ಎಲ್ ಒ ಕೆಲಸ ಮಾಡಲು ಹೋದರೆ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುವವರು ಯಾರು? ಶಿಕ್ಷಣ ಇಲಾಖೆಯ ಯೋಜನೆಗಳಾದ ಬಿಸಿಯೂಟ, ಮಕ್ಕಳಿಗೆ ಮೊಟ್ಟೆ ವಿತರಣೆ, ಪಠ್ಯೇತರ ಚಟುವಟಿಕೆ ಸೇರಿದಂತೆ ಎಲ್ಲಾ ರೀತಿಯಲ್ಲಿ ಅಡಚಣೆ ಆಗುತ್ತದೆ. ಈ ಹಿಂದೆಯೂ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಶಿಕ್ಷಕರು (Teachers) ಶಾಲೆಯ ಜೊತೆಗೆ ಈ ಹೆಚ್ಚುವರಿ ಕೆಲಸ ನಿರ್ವಹಿಸುವುದು ಅಸಾಧ್ಯವಾಗಿದೆ ಎಂದು ಅಳಲು ತೋಡಿಕೊಂಡರು.
ಬಿಎಲ್ ಒ ಕೆಲಸ ಮಾಡುತ್ತೇವೆ. ಇಲ್ಲದಿದ್ದರೆ, ಶಿಕ್ಷಕ ವೃತ್ತಿ ಮಾಡುತ್ತೇವೆ. ಇಂದಿನಿಂದಲೇ ಬಿ ಎಲ್ ಒ ಹೆಚ್ಚುವರಿ ಕೆಲಸದಿಂದ ವಿಮುಕ್ತಿಗೊಳಿಸಿ. ಇಲ್ಲದಿದ್ದರೆ ನಾಳೆಯಿಂದ ನಾವ್ಯಾರು ಸಹ ಬಿ ಎಲ್ ಒ ಕೆಲಸಕ್ಕೆ ಹೋಗುವುದಿಲ್ಲ ಎಂದು ಎಚ್ಚರಿಕೆ
ನೀಡಿದರು.
ಉತ್ತರ ವಲಯ ಶಿಕ್ಷಕರು (Teachers) ಶಾಲೆಗಳಿಗೆ ಸರಿಯಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಒಂದೆಡೆ ಮಕ್ಕಳಿಗೆ ಪಾಠ ಪ್ರವಚನ ಮಾಡಬೇಕು. ಮತ್ತೊಂದೆಡೆ ಹೊರಗಡೆ ಹೋಗಿ ಬಿ ಎಲ್ ಒ ಕೆಲಸ ಮಾಡಬೇಕು. ಈ ಎರಡೂ ಕೆಲಸ ಮಾಡುವುದು ತುಂಬಾನೇ ಕಷ್ಟವಾಗಿದೆ. ಆದ್ದರಿಂದ ಆದಷ್ಟು ಬೇಗ ಬಿಡುಗಡೆಗೊಳಿಸಿ ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಹೆಚ್. ನಾಗರಾಜ್, ಗೌರವಾಧ್ಯಕ್ಷ ಬಿ. ಎನ್. ಮಂಜಪ್ಪ, ಉಪಾಧ್ಯಕ್ಷರಾದ ಬಿ. ಕುಮಾರಸ್ವಾಮಿ, ಕೆ. ಜಿ. ಸುಜಾತಾ, ಕರಿಬಸಪ್ಪ, ರವಿಶಂಕರ ಸೇರಿದಂತೆ ಇತರೆ ಶಿಕ್ಷಕರು ಪಾಲ್ಗೊಂಡಿದ್ದರು.
TEACHRES PROTEST IN DAVANAGERE, TEACHRES PROTEST, DAVANAGERE NORTH TEACHRES, TEACHER, DAVANAGERE SUDDI, DAVANAGERE NEWS UPDATEDTS