Site icon Kannada News-suddikshana

ಕೊಲೆಗಾರ ಜೈಲು ಸೇರಲೇ ಬೇಕು: ನ್ಯಾಯಕ್ಕೆ ಸಾವಿಲ್ಲ, ಪಾಪಿ ‘ಕೈ’ಗೆ ಕರ್ಮ ತಪ್ಪಲ್ಲ!

SUDDIKSHANA KANNADA NEWS/ DAVANAGERE/ DATE-14-06-2025

ಬೆಂಗಳೂರು: ಉಪ್ಪು ತಿಂದವ ನೀರು ಕುಡಿಯಲೇ ಬೇಕು. ಕೊಲೆಗಾರ ಜೈಲು ಸೇರಬೇಕು. ನ್ಯಾಯಕ್ಕೆ ಸಾವಿಲ್ಲ, ಪಾಪಿ ಕೈಗೆ ಕರ್ಮ ತಪ್ಪಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಧಾರವಾಡದಜಿ‌.ಪಂ.ಮಾಜಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪಿ ಮಾಜಿ ಸಚಿವ, ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲು ಪಾಲಾಗಿದ್ದಾರೆ. ರಾಜಕೀಯವಾಗಿ ಬಿಜೆಪಿಯನ್ನು ಎದುರಿಸಲಾಗದ ವಿನಯ್ ಕುಲಕರ್ಣಿ ಸುಪಾರಿ ಕೊಟ್ಟು ಬಿಜೆಪಿಯ ಜಿಲ್ಲಾ ಪಂಚಾಯತ್‌ ಸದಸ್ಯನನ್ನು ಕೊಂದ ಗಂಭೀರ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಕುರಿತಂತೆ ಕೊಲೆಗಾರರೇ ತಪ್ಪೊಪ್ಪಿಕೊಂಡಿದ್ದಾರೆ.
ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಕುಮ್ಮಕ್ಕಿನಿಂದ ಕೊಂದಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದೆ.

ಕಾಂಗ್ರೆಸ್ ಪಕ್ಷವು ರಾಜಕೀಯ ಕಾರಣಕ್ಕೆ ನೆತ್ತರು ಹರಿಸಲು ಸಿದ್ದ ಎಂಬುದನ್ನು ಈ ಮೂಲಕ ಸಾಬೀತುಪಡಿಸಿದೆ‌‌. ಕೇರಳ, ಪಶ್ಚಿಮ ಬಂಗಾಳದ ರಾಜಕೀಯ ಸೂತ್ರವನ್ನು ರಾಜ್ಯದಲ್ಲಿ ಜಾರಿ ಮಾಡಲು ಡಿ.ಕೆ.ಶಿವಕುಮರ್ ನೇತೃತ್ವದ ಕಾಂಗ್ರೆಸ್ ಪಕ್ಷ ಹೊರಟಿದೆ‌ ಎಂದು ಬಿಜೆಪಿ ಕಿಡಿಕಾರಿದೆ.

Exit mobile version