Site icon Kannada News-suddikshana

ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ: 8ಮಂದಿ ಬಂಧನ

ಪುಷ್ಪಾ 2 ವಿವಾದದ ಬಳಿಕ ನಟ ಅಲ್ಲು ಅರ್ಜುನ್ ವಿರುದ್ಧ ಸಿಎಂ ರೇವಂತ್​ ರೆಡ್ಡಿ ಸೇರಿದಂತೆ ಹಿರಿಹ ರಾಜಕಾರಣಿಗಳು ಆಕ್ರೋಶ ಹೊರಹಾಕಿದ್ದಾರೆ. ಇಷ್ಟೇ ಅಲ್ಲ ಹೈದರಾಬಾದ್‌ನಲ್ಲಿರೋ ನಟ ಅಲ್ಲು ಅರ್ಜುನ್ ಜೂಬಿಲಿ ಹಿಲ್ಸ್ ನಿವಾಸದ ಮೇಲೆ ಉಸ್ಮಾನಿಯಾ ಯೂನಿವರ್ಸಿಟಿ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ.

 

ಈ ಸಂಬಂಧ ಮಾತಾಡಿದ ಹೈದರಾಬಾದ್​ ಪೊಲೀಸ್ರು ಕೇಸ್​ನಲ್ಲಿ ಉಸ್ಮಾನಿಯಾ ಯೂನಿವರ್ಸಿಟಿ ಅನ್ನೋ ಸಂಘಟನೆಗೆ ಸೇರಿದ 8 ಮಂದಿ ವಿದ್ಯಾರ್ಥಿ ಹೋರಾಟಗಾರರನ್ನು ಬಂಧಿಸಲಾಗಿದೆ. ಇವರು ಅಲ್ಲು ಅರ್ಜುನ್​ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ ಎಂದರು.

 

ಡಿಸೆಂಬರ್ 4ನೇ ತಾರೀಕು ಪುಷ್ಪಾ 2 ಸಿನಿಮಾ ಪ್ರದರ್ಶನದ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಒರ್ವ ಮಹಿಳೆ ಮೃತಪಟ್ಟಿದ್ದರು. ಈಗ ಉಸ್ಮಾನಿಯಾ ವಿವಿ ವಿದ್ಯಾರ್ಥಿ ಹೋರಾಟಗಾರರು ಅಲ್ಲು ಅರ್ಜುನ್​ ವಿರುದ್ಧ ಹೋರಾಟ ನಡೆಸಿದ್ದು. ಅಲ್ಲು ಅರ್ಜುನ್​​ ಮನೆ ಮೇಲೆ ಮೇಲೆ ಕಲ್ಲು ತೂರಾಟ ಮಾಡಿ ಧಾಂಧಲೆ ನಡೆಸಿದರು

 

ತೆಲಂಗಾಣ ವಿಧಾನಸಭೆಯಲ್ಲೂ ಪುಷ್ಪ 2 ಪ್ರಕರಣ ಪ್ರತಿಧ್ವನಿಸಿದೆ. ಸಿಎಂ ರೇವಂತ್ ರೆಡ್ಡಿ ಅವರೇ ಅಲ್ಲು ಅರ್ಜುನ್​ ವಿರುದ್ಧ ಹೇಳಿಕೆ ನೀಡಿದ್ರು. ಸಿಎಂ ಹೇಳಿಕೆ ಬಳಿಕ ಅಲ್ಲು ಅರ್ಜುನ್ ಜುಬ್ಲಿ ಹಿಲ್ಸ್​​ನಲ್ಲಿರೋ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಕೌಂಟರ್​ ನೀಡಿದ್ರು.

Exit mobile version