Home ದಾವಣಗೆರೆ ವಿಪಕ್ಷ ಕಾಲು ಕೆರೆದು ಗಲಾಟೆ ಮಾಡಲು ಬರುತ್ತೆ, ಗಾಂಧಿ ತತ್ವದಂತೆ ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ಕೊಡುವವರು ನಾವು: ಎಸ್. ಎಸ್. ಮಲ್ಲಿಕಾರ್ಜುನ್
ದಾವಣಗೆರೆಬೆಂಗಳೂರು

ವಿಪಕ್ಷ ಕಾಲು ಕೆರೆದು ಗಲಾಟೆ ಮಾಡಲು ಬರುತ್ತೆ, ಗಾಂಧಿ ತತ್ವದಂತೆ ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ಕೊಡುವವರು ನಾವು: ಎಸ್. ಎಸ್. ಮಲ್ಲಿಕಾರ್ಜುನ್

Share
ಎಸ್. ಎಸ್. ಮಲ್ಲಿಕಾರ್ಜುನ್
Share

ದಾವಣಗೆರೆ: ವಿರೋಧ ಪಕ್ಷದವರು ಕಾಲು ಕೆರೆದು ಗಲಾಟೆ ಮಾಡಲು ಬರುತ್ತಾರೆ. ನಮ್ಮರೆಲ್ಲರೂ ಶಾಂತಿಯುತವಾಗಿರಬೇಕು. ನಾವು ಗಾಂಧಿ ತತ್ವದವರು. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ಕೊಡುತ್ತೇವೆ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸೂಚನೆ ನೀಡಿದ್ದಾರೆ.

ಸಾದಿಕ್ ಪೈಲ್ವಾನ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರೂ ಸೇರಿ ಒಗ್ಗಟ್ಟಿನಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಎದುರಿಸೋಣ ಎಂದು ಹೇಳಿದರು.

ಸಾದಿಕ್ ಪೈಲ್ವಾನ್ ಹೊರಗಿನವರಲ್ಲ, ಮನೆಯವರು. ಬಹಳ ಬಾರಿ ಬಂದಿದ್ದೇನೆ. ಲೆಕ್ಕವಿಲ್ಲದಷ್ಟು ಬಾರಿ ಊಟ ಮಾಡಿದ್ದೇನೆ. ಯಾವಾಗ ಕರೆದರೂ ಹೋಗುತ್ತೇನೆ. ಸ್ನೇಹ ಮನೋಭಾವನೆಯಿಂದ ಇದ್ದೇವೆ ಎಂದು ತಿಳಿಸಿದರು.

ಜಮೀರ್ ಅಹ್ಮದ್ ಅವರಿಗೆ ಬರಲು ಹೇಳಿದ್ದೆ. ಕೇರಳ ಚುನಾವಣೆಗೆ ಹೋಗಿದ್ದಾರೆ. ಈ ಚುನಾವಣೆ ಮುಗಿಸಿ ಬರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ದಾವಣಗೆರೆಯಲ್ಲಿಯೂ ದೆಹಲಿ ರಾಜಕೀಯದಂತೆ ಹೆಚ್ಚು ಕಮ್ಮಿ ನಡೆಯುತ್ತದೆ. ಇನ್ನೂ ಕಾಲವಾಕಾಶ ಇದೆ. ಹತ್ತು ದಿನ ಮಾತ್ರ ಇದೆ. ಎಷ್ಟು ಲೀಡ್ ನಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಎಂದು ಈಗಲೇ ಹೇಳಲ್ಲ ಆಗಲ್ಲ. ಏನೇನೂ ಬೆಳವಣಿಗೆ ಆಗುತ್ತೋ ಗೊತ್ತಿಲ್ಲ. ಸ್ನೇಹ ಮನೋಭಾವನೆಯಿಂದ ಎಲ್ಲಾ ಸಮಾಜದವರನ್ನು ಒಗ್ಗೂಡಿಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆ ಮಾಡಲಿ. ಯಾವುದೇ ಗೊಂದಲಕ್ಕೆ ಆಸ್ಪದ ಕೊಡಬೇಡಿ. ಒಗ್ಗಟ್ಟಿನಿಂದ ಶಾಂತಿಯುತವಾಗಿ ಚುನಾವಣೆ ಮಾಡೋಣ ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *