Site icon Kannada News-suddikshana

Chitradurga: ಪುಟಾಣಿಗಳ ರಾಧೆ, ಕೃಷ್ಣ ವೇಷಭೂಷಣದ ರಂಗು: ಕುಣಿದು ಕುಪ್ಪಳಿಸಿ ಸಂತಸಪಟ್ಟ ಮಕ್ಕಳು

krishna janmashtami

krishna janmashtami

SUDDIKSHANA KANNADA NEWS/ DAVANAGERE/ DATE: 06-09-2023

ಚಿತ್ರದುರ್ಗ (Chitradurga): ಚಿತ್ರದುರ್ಗ (Chitradurga) ನಗರದ ಐಯುಡಿಪಿ‌ಬಡಾವಣೆಯಲ್ಲಿನ ತಪೋವನ ಟ್ರಸ್ಟ್ ನ ಪ್ರಶಾಂತಿ ವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮ. ಇನ್ನು ಅದ್ದೂರಿಯಾಗಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು.

ಪುಟ್ಟ ಪುಟ್ಟ ಪುಟಾಣಿಗಳು ರಾಧೆ,ಕೃಷ್ಣನ ವೇಷಭೂಷಣ ಧರಿಸಿ‌ ಸಂಭ್ರಮಿಸಿದರು.ಈ ವೇಳೆ ರಾಧೆಕೃಷ್ಣರ ವೇಷಧರಿಸಿದ್ದ ಮಕ್ಕಳು ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದರು. ಮಕ್ಕಳ‌ ಪೋಷಕರು ಸಹ ಅವರ ಆಕರ್ಷಕ ನೃತ್ಯ,ನಟನೆ ಮತ್ತು ವೇಷಭೂಷಣವನ್ನು ಕಣ್ತುಂಬಿಕೊಂಡು ಪುಳಕಿತರಾದರು.

ಈ ಸುದ್ದಿಯನ್ನೂ ಓದಿ: 

Mayakonda: ಕೊಳೆತು ಹೋದ ತರಕಾರಿ, ಹುಳ ಹಿಡಿದಿರುವ ಟೊಮೊಟೊ, ನವಿಲು ಕೋಸು, ಮುಳಗಾಯಿ, ಗಂಧವೇ ಇಲ್ಲದ ಬೇಳೆ: ಹಾಸ್ಟೆಲ್ ನ ಅವ್ಯವಸ್ಥೆಯ ಕೆಲ ಸ್ಯಾಂಪಲ್ ಅಷ್ಟೇ…!

 

ಕಾರ್ಯಕ್ರಮದಲ್ಲಿ ಮಾತನಾಡಿದ ಸತ್ಯಸಾಯಿ ಶಿಕ್ಷಣ‌ಸಂಸ್ಥೆಯ ಸಂಯೋಜಕರಾದ ಜಗನ್ನಾಥ್ ನಾಡಿಗೇರ್‌ ಶಾಲೆಗಳು ಭಾರತೀಯ ಸಂಸ್ಕ್ರತಿ ಕಲಿಸುವ ಕೇಂದ್ರಗಳಾಗಬೇಕೆಂದು ಹೇಳಿದರು. ಚಿತ್ರದುರ್ಗ ನಗರದ ಐಯುಡಿಪಿ‌ಬಡಾವಣೆಯಲ್ಲಿನ ತಪೋವನ ಟ್ರಸ್ಟ್ ನ ಪ್ರಶಾಂತಿ ವಿದ್ಯಾಲಯದಲ್ಲಿ ‌ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪೋಷಕರು,  ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು‌ ಮಾತನಾಡಿದರು.

ಇಂದಿನ ಸಮಾಜದಲ್ಲಿ ತಂದೆತಾಯಿ ಮೇಲಿನ ಗೌರವ ಹಾಗು ಪ್ರೀತಿಯ ಭಾವನೆ ಇಲ್ಲವಾಗ್ತಿದೆ.ಹೀಗಾಗಿ ತಂದೆತಾಯಿಯನ್ನು ವೃದ್ದಾಶ್ರಮಕ್ಕೆ ಕಳಿಸದೇ ಸದಾ ಅವರನ್ನು ಪ್ರೀತಿಸುತ್ತಾ ಸುಸಂಸ್ಕ್ರತ ಭಾವನೆಯನ್ನು ಮಕ್ಕಳಲ್ಲಿ ಬೆಳೆಸುವ ಕಾರ್ಯವನ್ನು ಪ್ರಶಾಂತಿ ವಿದ್ಯಾಲಯ ‌ಮಾಡ್ತಿದೆ.ಈ ಕಾರ್ಯಕ್ಕೆ ಪೋಷಕರು ಕೈ ಜೋಡಿಸಬೇಕಿದೆ‌ ಎಂದರು.

ಒಂದೊಂದು ಮಗುವಿನಲ್ಲು ಒಳ್ಳೆಯ ಸದ್ಗುಣ ರೂಡಿಸಿಕೊಂಡದೇ ಇಡೀ‌ದೇಶ ಬದಕಾಗುತ್ತದೆ. ಇದಕ್ಕಾಗಿ ನಿತ್ಯ ಅನೇಕ ಜನ ಶಿಕ್ಷಕರು ಶ್ರಮಿಸ್ತಿದ್ದಾರೆ.ಶಿಕ್ಷಣ ಕಲಿಸುವ ಸಂಸ್ಥೆಗಳಿಗೆ ಆಡಂಬರ ಮುಖ್ಯವಲ್ಲ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶಿಸ್ತುಬದ್ದ ಸಂಸ್ಕ್ರತಿ ಕಲಿಸುವ ಮುಖ್ಯ ಎಂದರು.ಸಣ್ಣ ಸಣ್ಣ ಶಾಲೆಗಳಲ್ಲಿ ಓದಿದ ತಕ್ಷಣ ಅವರು ಬುದ್ದಿವಂತರಾಗಲ್ಲ ಅನ್ನೋದು‌ತಪ್ಪು ಕಲ್ಪನೆ.ಇಂತಹ ಚಿಕ್ಕ ಸಂಸ್ಥೆಗಳಲ್ಲಿಯೇ ಅದ್ಬುತ ಪ್ರತಿಭೆಗಳು ಹಾಗೂ ಸಾಧಕರು ಹೊರಹೊಮ್ಮಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಮುಖ್ಯ ಅಥಿತಿಗಳಾದ ಜಯ್ಯಣ್ಣ ಅವರು, ಚಿಕ್ಕದಾಗಿ ಆರಂಭವಾದ ಈ ಶಾಲೆ‌ ಇಂದು ಚೊಕ್ಕದಾಗಿ ಹೆಮ್ಮರವಾಗಿ ಬೆಳೆದಿದೆ.ದಯೆ,ಧರ್ಮ‌ ಹಾಗೂ ಭಕ್ತಿಯ ಪ್ರತೀಕವಾಗಿ ಈ ಶಾಲೆ‌ ಬೆಳೆದಿದೆ. ಈ ಶಾಲೆಯಲ್ಲಿ ಶಿಕ್ಷಣವೊಂದೆ ಮಾನದಂಡವಲ್ಲ.ಜೀವನದಲ್ಲಿ‌ ಮಕ್ಕಳು ಬದುಕುವ ಸಂಸ್ಕಾರವನ್ನು ಈ ಶಾಲೆ ನೀಡುತ್ತಿದೆ ಎಂದು ತಿಳಿಸಿದರು.

ಕಡಿಮೆ ಹಣದಲ್ಲಿ ಸಿನಿಮಾ‌ ತೆಗೆದು,ರಾಷ್ಟ್ರ ತೆಗೆದುಕೊಳ್ಳುವಂತೆ,ಅತಿ ಕಡಿಮೆ ಶುಲ್ಕದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಶಾಲೆಗಳು ಇಂದು ಅಗತ್ಯವಿದೆ.ಹೀಗಾಗಿ ಪೋಷಕರು ಕೂಡ ಹಣ ವಸೂಲಿಗಿಳಿದಿರುವ ಖಾಸಗಿ ಶಾಲೆಗಳನ್ನಹ ಕಡೆಗಣಿಸಿ‌ಇಂತಹ ಸಂಸ್ಕ್ರತಿ ಆಧಾರಿತ‌ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುವಂತೆ ಕರೆ ನೀಡಿದರು.

ಇದೇ ವೇಳೆ ಶಾಲೆಯ ಮುಂಭಾಗದಲ್ಲಿ‌ ನಿರ್ಮಾಣವಾದ ನೂತನ ಸಾಯಿಕಲಾ ವೇದಿಕೆಯನ್ನು ಸಂಸ್ಥೆಯ ಅಧ್ಯಕ್ಷ ಸೋಮನಾಥ್ ಉದ್ಘಾಟಿಸಿದರು. ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮಾರುತೇಶ್ ರೆಡ್ಡಿ, ಅತಿಥಿಗಳಾದ
ಜಯಣ್ಣ, ಸಂಸ್ಥೆಯ ಮುಖಂಡ ರಮೇಶ್ ಇಟಗಿ, ಶಿಕ್ಷಕಿಯರಾದ ಉಷಾ, ಸಂಪದಾ, ಸಂಧ್ಯಾ ಹಾಗು ಮಕ್ಕಳು, ಪೊಷಕರು ಪಾಲ್ಗೊಂಡಿದ್ದರು.

Exit mobile version