ಎನ್. ಆರ್. ಪುರ: ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ರನ್ಯಾ (32) ಎಂಬುವವರು ಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮುಡುಬ ಸೇತುವೆ ಬಳಿ ನಡೆದಿದೆ.
ಘಟನೆಯ ವಿವರ: ಶಿವಮೊಗ್ಗದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ರನ್ಯಾ ಅವರು ನಿನ್ನೆ ಸಂಜೆ ಕೆಲಸ ಮುಗಿಸಿ ಮನೆಗೆ ಮರಳಿದ್ದರು. ನಂತರ ಮುಡುಬ ಸೇತುವೆ ಬಳಿ ತೆರಳಿ ಭದ್ರಾ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.
ಮೃತ ಮಹಿಳೆಗೆ 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇವರ ಪತಿ ಕಾಫಿ ಬೆಳೆಗಾರರಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಎನ್.ಆರ್. ಪುರ ಪೊಲೀಸ್ ಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
- Bhadra River
- Chikkamagaluru Crime News
- Coffeenadu updates
- Muduba Bridge incident
- NR Pura News
- NR Pura Police Station.
- Nurse suicide case
- Ranya Nurse death
- Shimoga Nurse Suicide
- ಎನ್.ಆರ್.ಪುರ ಸುದ್ದಿ
- ಕಾಫಿನಾಡು ಸುದ್ದಿ
- ಚಿಕ್ಕಮಗಳೂರು ಕ್ರೈಮ್ ನ್ಯೂಸ್
- ನರ್ಸ್ ಸಾವು
- ಪೊಲೀಸ್ ತನಿಖೆ
- ಭದ್ರಾ ನದಿ
- ಮುಡುಬ ಸೇತುವೆ
- ರನ್ಯಾ ಆತ್ಮಹತ್ಯೆ
- ಶಿವಮೊಗ್ಗ ನರ್ಸ್ ಆತ್ಮಹತ್ಯೆ





Leave a comment