Site icon Kannada News-suddikshana

ಕಿರಾಣಿ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ: ಎಷ್ಟು ಮೌಲ್ಯದ “ಎಣ್ಣೆ” ವಶ ಗೊತ್ತಾ…?

SUDDIKSHANA KANNADA NEWS/ DAVANAGERE/ DATE:16-12-2023

ದಾವಣಗೆರೆ: ಜಗಳೂರು ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದ ಮಂಜುನಾಥ್ ಎಂಬ ವ್ಯಕ್ತಿಗೆ ಸೇರಿದ ಕಿರಾಣಿ ಅಂಗಡಿ ಮೇಲೆ ಹರಿಹರ ವಲಯ ಹಾಗೂ ದಾವಣಗೆರೆ ವಲಯ 1 ಮತ್ತು 2ರ ಅಧಿಕಾರಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ರೂ.10,110 ಮೌಲ್ಯದ ಅಕ್ರಮ ಮಾರಾಟದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಅಬಕಾರಿ ಉಪಾಯುಕ್ತರ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿ, ಒಂದು ಲೀಟರ್ ಸಾಮರ್ಥ್ಯದ 76 ನೀರಿನ ಬಾಟಲಿಗಳಲ್ಲಿ 76 ಲೀಟರ್ ಸೇಂದಿ, ಒರಿಜಿನಲ್ ಚಾಯ್ಸ್ ವಿಸ್ಕಿಯ 90 ಮಿಲಿಯ 48 ಟೆಟ್ರೋಪ್ಯಾಕೇಟ್` ಮತ್ತು 500 ಮಿಲಿಯ ಪವರ್ ಕೂಲ್ 6 ಟಿನ್‍ಗಳನ್ನು ಇಲಾಖಾ ವಶಕ್ಕೆ ಪಡೆಯಲಾಗಿದೆ.

ಆರೋಪಿಯಾದ ಮಂಜುನಾಥ್‍ನ್ನು ನೋಟೀಸ್ ನೀಡಿ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತೆ ಸ್ವಪ್ನ ಆರ್.ಎಸ್ ತಿಳಿಸಿದ್ದಾರೆ.

Exit mobile version