Site icon Kannada News-suddikshana

ಪ್ರಯಾಣಿಕರಿಗೆ ಬಿಗ್‌ ಶಾಕ್‌ : ಖಾಸಗಿ ಬಸ್‌ ಟಿಕೆಟ್‌ ಬೆಲೆಯಲ್ಲಿ ಭಾರೀ ಏರಿಕೆ!

ಬೆಂಗಳೂರು : ರಾಜ್ಯದಲ್ಲಿ ಮಳೆಗೆ ಅವಾಂತರಗಳು ಸೃಷ್ಟಿಯಾಗಿದ್ದು, ಮಳೆಯಿಂದಾಗಿ ಹಲವಡೆ ಗುಡ್ಡ ಕುಸಿತವುಂಟಾಗಿ ರಾಜ್ಯಾದ್ಯಂತ 14 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ರೈಲುಗಳನ್ನು ರದ್ದು ಮಾಡಿದೆ. ಹೀಗಾಗಿ ಊರಿಗೆ ಹೊರಟ ಪ್ರಯಾಣಿಕರಿಗೆ ಖಾಸಗಿ ಬಸ್‌ ಮಾಲೀಕರು ಬಿಗ್‌ ಶಾಕ್‌ ನೀಡಿದ್ದು, ಟಿಕೆಟ್‌ ಬೆಲೆಯನ್ನು ದುಪ್ಪಟ್ಟು ಮಾಡಿದ್ದಾರೆ.

ಹೌದು, ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ಖಾಸಗಿ ಬಸ್ ಗಳ ಟಿಕೆಟ್ ಬೆಲೆಯಲ್ಲಿ ಭಾರೀ ಏರಿಕೆ ಮಾಡಲಾಗಿದ್ದು, 600 ರೂ ಇದ್ದ ಟಿಕೆಟ್ ಬೆಲೆ 1,000 ರೂ. ನಿಂದ 1,200 ರೂ.ಗೆ ಏರಿಕೆಯಾಗಿದ್ರೆ, ಎಸಿ ಬಸ್ ಗಳ ಟಿಕೆಟ್ ದರ 2,000ರೂ ನಿಂದ 4.000 ರೂವರೆಗೂ ಏರಿಕೆ ಮಾಡಲಾಗಿದೆ.

 

Exit mobile version