Home ಕ್ರೈಂ ನ್ಯೂಸ್ ಚಿನ್ನದಾಸೆಗೆ ಒಬ್ಬಂಟಿಯಾಗಿ ವಾಸವಿದ್ದ ವೃದ್ಧೆ ಉಸಿರುಗಟ್ಟಿಸಿ ಕೊಲೆ: ಬಂಗಾರ ದೋಚಿ ಹಂತಕರು ಪರಾರಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಚಿನ್ನದಾಸೆಗೆ ಒಬ್ಬಂಟಿಯಾಗಿ ವಾಸವಿದ್ದ ವೃದ್ಧೆ ಉಸಿರುಗಟ್ಟಿಸಿ ಕೊಲೆ: ಬಂಗಾರ ದೋಚಿ ಹಂತಕರು ಪರಾರಿ!

Share
ಚಿನ್ನ
Share

ದಾವಣಗೆರೆ: ನ್ಯಾಮತಿ ತಾಲೂಕಿನ ಅರಂಡಿ ಗ್ರಾಮದಲ್ಲಿ ಚಿನ್ನದ ಆಸೆಗೆ ವೃದ್ಧೆಯನ್ನು ಕೊಂದು ಚಿನ್ನಾಭರಣ ದೋಚಿದ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ.

ಒಬ್ಬಂಟಿಯಾಗಿ ವಾಸವಿದ್ದ 64 ವರ್ಷದ ಕಮಲಮ್ಮ ಮಲ್ಲೇಶಪ್ಪ ಎಂಬ ವೃದ್ಧೆಯನ್ನು ದುಷ್ಕರ್ಮಿಗಳು ಅಮಾನುಷವಾಗಿ ಕೊಲೆ ಮಾಡಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ.

ಒಬ್ಬಂಟಿ ಜೀವನ:

ಕಮಲಮ್ಮನವರ ಪತಿ ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ಇವರಿಗೆ ನಾಲ್ವರು ಹೆಣ್ಣು ಮಕ್ಕಳಿದ್ದು, ಅವರು ಅರಂಡಿ ಗ್ರಾಮದಲ್ಲಿ ತಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದರು.

ಕೊಲೆ ನಡೆದ ರೀತಿ:

ಸೋಮವಾರ ರಾತ್ರಿ 10 ಗಂಟೆಯ ನಂತರ ಮನೆಗೆ ನುಗ್ಗಿದ ಕಿರಾತಕರು, ಮಂಚದ ಮೇಲೆ ಮಲಗಿದ್ದ ಕಮಲಮ್ಮನವರ ಮುಖಕ್ಕೆ ದಿಂಬಿನಿಂದ ಬಲವಾಗಿ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ದರೋಡೆ ಮಾಡಿದ ಸ್ವತ್ತು:

ಮೃತರ ಮೈಮೇಲಿದ್ದ ಸುಮಾರು 73 ಗ್ರಾಂ ತೂಕದ ಚಿನ್ನಾಭರಣಗಳನ್ನು (ಸುಮಾರು 6 ಲಕ್ಷ ರೂ. ಮೌಲ್ಯದ 2 ಬಳೆಗಳು, ಕಿವಿ ಓಲೆ, ಉಂಗುರ) ದೋಚಲಾಗಿದೆ.

ಪತ್ತೆಯಾದದ್ದು ಹೇಗೆ?:

ಮಂಗಳವಾರ ಬೆಳಿಗ್ಗೆ 7:30 ಆದರೂ ಬಾಗಿಲು ತೆಗೆಯದಿದ್ದನ್ನು ಗಮನಿಸಿದ ನೆರೆಮನೆಯ ರತ್ನಮ್ಮ ಎಂಬುವವರು ಬಾಗಿಲು ತಟ್ಟಿದ್ದಾರೆ. ಸ್ಪಂದನೆ ಸಿಗದಿದ್ದಾಗ ಹಿಂಬಾಗಿಲಿನಿಂದ ಒಳಹೋಗಿ ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸ್ ತನಿಖೆ:

ಮೃತರ ಪುತ್ರಿ ವಿಶಾಲಾಕ್ಷಮ್ಮ ಚಂದ್ರಪ್ಪ ಅವರು ನೀಡಿದ ದೂರಿನ ಮೇರೆಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles