Home ದಾವಣಗೆರೆ ಶಿವಶಂಕರಪ್ಪರ ಕ್ರಿಯಾಸಮಾಧಿ ಸ್ಥಳಕ್ಕೆ ಮೈಸೂರು ಸಂಸದ ಯದುವೀರ್ ಭೇಟಿ: ಎಸ್. ಎಸ್. ಗಣೇಶ್ ಮನೆಯಲ್ಲಿ ಚರ್ಚಿಸಿದ್ದೇನು?
ದಾವಣಗೆರೆನವದೆಹಲಿಬೆಂಗಳೂರು

ಶಿವಶಂಕರಪ್ಪರ ಕ್ರಿಯಾಸಮಾಧಿ ಸ್ಥಳಕ್ಕೆ ಮೈಸೂರು ಸಂಸದ ಯದುವೀರ್ ಭೇಟಿ: ಎಸ್. ಎಸ್. ಗಣೇಶ್ ಮನೆಯಲ್ಲಿ ಚರ್ಚಿಸಿದ್ದೇನು?

Share
Share

SUDDIKSHANA KANNADA NEWS/DAVANAGERE/DATE:28_12_2025

ದಾವಣಗೆರೆ : ಲಿಂಗೈಕ್ಯ ಡಾ.ಶಾಮನೂರು ಶಿವಶಂಕರಪ್ಪನವರ ಕ್ರಿಯಾ ಸಮಾಧಿ ಸ್ಥಳಕ್ಕೆ ಇಂದು ಮೈಸೂರು ಸಂಸದ ಯದುವೀರ್ ಅವರು ಭೇಟಿ ನೀಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಜಿ.ಎಸ್.ಮಂಜುನಾಥ್, ಎ.ನಾಗರಾಜ್, ಸಚಿವರಾದ ಎಸ್‌. ಎಸ್. ಮಲ್ಲಿಕಾರ್ಜುನ ಅವರ ದಾವಣಗೆರೆ ಜಿಲ್ಲೆಯ ಆಪ್ತ ಕಾರ್ಯದರ್ಶಿ ಸಿ.ಎಸ್. ವಿಜಯಕುಮಾರ್, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಆಪ್ತ ಕಾರ್ಯದರ್ಶಿ ಹರೀಶ್ ಕೆ.ಎಲ್.ಬಸಾಪುರ ಇದ್ದರು.

ನಂತರ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್.ಎಸ್. ಗಣೇಶ್ ಅವರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಎಸ್.ಎಸ್.ಗಣೇಶ್ ಅವರ ಪತ್ನಿ ರೇಖಾ ಗಣೇಶ್, ಪುತ್ರ ಅಭಿಜಿತ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ,  ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೆಬಾಳು ಮತ್ತಿತರರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *