ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭ್ಯರ್ಥಿಗಳ ಅಕಾಲಿಕ ಘೋಷಣೆ:
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೋದ ಬಂದಲ್ಲಿ ಬಿ. ಎಸ್. ಯಡಿಯೂರಪ್ಪ ಮತ್ತು ಬಿ. ವೈ. ವಿಜಯೇಂದ್ರ ಮುಂದಿನ 2028ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದ ಗುತ್ತಿಗೆ:
ನಾವು ಜಿಎಂಐಟಿಯಲ್ಲಿ ಸಭೆ ಮಾಡಿಲ್ಲ. ನಿಷ್ಠಾವಂತ ಕಾರ್ಯಕರ್ತರು ತಮ್ಮ ನೋವು ಹೇಳಿಕೊಳ್ಳಲು ಇಲ್ಲಿಗೆ ಬಂದಿದ್ದಾರೆ. ಮಾಜಿ ಸಂಸದರು ಮತ್ತು ನನ್ನ ಜೊತೆ ನೋವು ಹಂಚಿಕೊಂಡಿದ್ದಾರೆ. ಮುಂದೆ ಏನು ಮಾಡಬೇಕೆಂದು ಕಾರ್ಯಕರ್ತರು
ಚರ್ಚಿಸಲು ಬಂದಿದ್ದರು. ಸಮಸ್ಯೆಗಳನ್ನು ಆಲಿಸಿದ್ದೇವೆ. ಕಾರ್ಯಕರ್ತರಿಗೆ ಸಮಾಧಾನ ಮಾಡುತ್ತೇವೆ. ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆ ಬಂದಿದೆ. ಇಂಥ ಹೊತ್ತಿನಲ್ಲಿ ಈ ಬೆಳವಣಿಗೆ ನಡೆಯಬಾರದಿತ್ತು ಎಂದು ಹೇಳಿದರು.
ಕೆಜೆಪಿ ನೆನಪು
ಹೊನ್ನಾಳಿಯಲ್ಲಿ ನಡೆದ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಜನುಮದಿನಾಚರಣೆಯಂದು ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಎರಡೂವರೆ ವರ್ಷ ಇರುವಾಗಲೇ ವಿಧಾನಸಭೆ ಚುನಾವಣಾ ಅಭ್ಯರ್ಥಿಗಳೆಂದು ಘೋಷಿಸುವುದು
ಔಚಿತ್ಯವಾದರೂ ಏನಿತ್ತು ಎಂಬುದು ಮುಖಂಡರು ಮತ್ತು ಕಾರ್ಯಕರ್ತರ ಪ್ರಶ್ನೆ. ಮತ್ತೆ ಕೆಜೆಪಿ ಪಕ್ಷ ಕಟ್ಟಿದಂತೆ ಕಟ್ಟಲು ಯಡಿಯೂರಪ್ಪ ಮತ್ತು ಅವರ ಪುತ್ರ ಹೊರಟಿದ್ದಾರೆಯೋ ಎಂಬ ಅನುಮಾನ ಕಾಡುತ್ತಿದೆ. ಹಾಗಾಗಿ, ಬಿಜೆಪಿ ನಿಷ್ಠಾವಂತ
ಮುಖಂಡರು ಮತ್ತು ಕಾರ್ಯಕರ್ತರು ಇಲ್ಲಿಗೆ ಬಂದು ಆಕ್ರೋಶ ಹೊರ ಹಾಕಿದ್ದಾರೆ. ನಾವು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಪರ ನಿಲ್ಲುತ್ತೇವೆ ಎಂದು ತಿಳಿಸಿದರು.
ಸಚಿವ ಸಂಪುಟದ ವ್ಯಂಗ್ಯ
ಯಡಿಯೂರಪ್ಪ ಮತ್ತು ವಿಜಯೇಂದ್ರರ ಮನಸ್ಸಿನಲ್ಲಿ ಪ್ರಾದೇಶಿಕ ಪಕ್ಷ ಮಾಡಬೇಕೆಂದು ಇರಬೇಕು ಎಂಬುದು ಅವರ ಮಾತಿನ ನಡವಳಿಕೆಯಿಂದ ತಿಳಿದು ಬರುತ್ತದೆ. ಕೆಲವರಿಗೆ ಟಿಕೆಟ್ ಘೋಷಣೆ ಮಾಡಿ ಗೆಲ್ಲಿಸಿ ಎಂದು ಹೇಳಿದ್ದೂ ಅಲ್ಲದೇ
ಸಚಿವ ಸಂಪುಟವನ್ನೂ ರೆಡಿ ಮಾಡಿಬಿಟ್ಟಿದ್ದಾರೆ. ಹೊನ್ನಾಳಿಯಲ್ಲಿ ಇರುವವನನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬುದನ್ನು ಈಗಲೇ ಹೇಳಿ ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಪ್ಪ ಮಗ ಬಿಜೆಪಿ ಗುತ್ತಿಗೆ ಹಿಡಿದಿದ್ದಾರಾ? ಕೆಜೆಪಿ ಕಟ್ಟುವ ಭಾವನೆ ಇದೆಯಾ? ಈಗಲೇ ಘೋಷಣೆ ಮಾಡುವ ಅಗತ್ಯವೇನಿತ್ತು. ಚುನಾವಣೆಗೆ ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ಪಕ್ಷ ಸಂಘಟನೆ ಬದಲು ಗೊಂದಲ ಹುಟ್ಟಿಸುವಂತ ನಡವಳಿಕೆ
ಕೈಬಿಡಬೇಕು ಎಂದು ಬಿ. ಪಿ. ಹರೀಶ್ ಒತ್ತಾಯಿಸಿದರು.
- 2028 Assembly Election
- 2028 ವಿಧಾನಸಭಾ ಚುನಾವಣೆ
- B. P. HARISH
- B. Y. Vijayendra
- B.S. Yediyurappa
- BJP candidate announcement controversy.
- BJP Internal Rift
- DAVANAGERE BJP
- Harihar MLA
- Karnataka Politics
- KJP
- M. P. Renukacharya
- ಎಂ. ಪಿ. ರೇಣುಕಾಚಾರ್ಯ
- ಕರ್ನಾಟಕ ರಾಜಕಾರಣ
- ಕೆಜೆಪಿ
- ದಾವಣಗೆರೆ ಬಿಜೆಪಿ
- ಬಿ. ಪಿ. ಹರೀಶ್
- ಬಿ. ವೈ. ವಿಜಯೇಂದ್ರ
- ಬಿ.ಎಸ್. ಯಡಿಯೂರಪ್ಪ
- ಬಿಜೆಪಿ ಅಸಮಾಧಾನ
- ಹರಿಹರ ಶಾಸಕ





Leave a comment