Site icon Kannada News-suddikshana

ಸಂವಿಧಾನದ ಮಹತ್ವ ಸಾರುವ ಬ್ಯಾಡ್ಜ್ ಧರಿಸಿ ಗಮನ ಸೆಳೆದ ಸಚಿವ- ಸಂಸದೆ

SUDDIKSHANA KANNADA NEWS/ DAVANAGERE/ DATE:26-01-2025

ದಾವಣಗೆರೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 76 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಂವಿಧಾನದ ಮಹತ್ವ ಸಾರುವ ಸಂವಿಧಾನದ ಪೀಠಿಕೆಯ ಬ್ಯಾಡ್ಜ್ ಧರಿಸುವ ಮೂಲಕ ಗಮನ ಸೆಳೆದರು. 

ನ್ಯಾಯ,ಸಮಾನತೆ ಮತ್ತು ಸ್ವಾತಂತ್ರ್ಯದ ಮೂರ್ತ ಸ್ವರೂಪ ಹಾಗೂ ದೇಶದ ಐಕ್ಯತೆಯ ಪ್ರತೀಕವಾದ ನಮ್ಮ ಸಂವಿಧಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಗಮನ ಸೆಳೆದಿದ್ದು ವಿಶೇಷವಾಗಿತ್ತು.

Exit mobile version