SUDDIKSHANA KANNADA NEWS/ DAVANAGERE/ DATE:01-07-2024
ದಾವಣಗೆರೆ: ನಗರದ ಹಳೇ ಕುಂದುವಾಡದಲ್ಲಿ ಮನಾ ಯುವ ಬ್ರಿಗೇಡ್&ಜರವೇ ಯಿಂದ ಅದ್ದೂರಿಯಾಗಿ ನಡೆಸಲಾಗಿದ್ದ ಗೋಲ್ಡನ್ ಕೆಪಿಎಲ್ -6 ಪಂದ್ಯಾವಳಿಗೆ ತೆರೆ ಬಿದ್ದಿದ್ದು, ಡ್ರಾನಲ್ಲಿ ಅಂತ್ಯಗೊಂಡಿತು.
ಕೊನೆ ಎಸೆತದ ತನಕ ಎರಡು ತಂಡಗಳು ಗೆಲುವಿಗಾಗಿ ಭಾರೀ ಫೈಪೋಟಿ ನಡೆಸಿದ್ದವು, ಈ ಹಿನ್ನಲೆ ಅಂತಿಮವಾಗಿ ಕುಂದುವಾಡ ಯೋಧಾಸ್ ಹಾಗೂ ಅಪ್ಪು ಪವರ್ ಫೈಟರ್ಸ್ ತಂಡಗಳಿಗೆ ಸಮಬಲ ಪ್ರಶಸ್ತಿ ಎಂದು ಘೋಷಣೆ ಮಾಡಿ ಪ್ರಶಸ್ತಿ ವಿತರಣೆ ಮಾಡಲಾಗಿದೆ.
ನಗರದ ಹಳೇ ಕುಂದುವಾಡ ಶಿಬಾರದಲ್ಲಿಂದು ಕುಂದುವಾಡ ಯೋಧಾಸ್ ತಂಡದ ಫ್ರಾಂಚೈಸಿ ಕೆಎನ್ ಲಿಂಗರಾಜ್ ಹಾಗೂ ಅಪ್ಪು ಫೈಟರ್ಸ್ ತಂಡದ ಫ್ರಾಂಚೈಸಿ ಸೋಮು ಅಕ್ಕಿ ಅವರುಗಳಿಗೆ ಸನ್ಮಾನಿಸಿ ಗೌರವಿಸಿ ಬಂಗಾರದ ಕಪ್ ನ್ನೂ ಇಬ್ಬರಿಗೂ ವಿತರಣೆ ಮಾಡಲಾಯಿತು.
ತೃತೀಯ ಬಹುಮಾನವನ್ನು ಜೆಕೆ ಕ್ರಿಕೆಟರ್ಸ್ ಗೆ ವಿತರಣೆ ಮಾಡಲಾಯಿತು, ಟೂರ್ನಿಯಲ್ಲಿ ಹತ್ತು ತಂಡಗಳು ಭಾಗವಹಿಸಿದ್ದವು,
ಇದೇ ಮೊದಲ ಬಾರಿಗೆ ಬಂಗಾರದ ಕಪ್ ಅನ್ನೂ ಪ್ರಥಮ ಬಹುಮಾನವಾಗಿಸಿ ಅದ್ದೂರಿಯಾಗಿ ಟೂರ್ನಿ ನಡೆಸಲಾಯಿತು.. ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಮಧುನಾಗರಾಜ್ ಕುಂದುವಾಡ, ಪ್ರಧಾನ ಕಾರ್ಯದರ್ಶಿ ರಾಜು ಕರೂರು, ಖಜಾಂಚಿ ನಾಗರಾಜ್ ಎಸ್ ಬಿ, ಕೆಪಿಎಲ್ ಕ್ರಿಕೆಟ್ ಉಸ್ತುವಾರಿಗಳಾದ ರಮೇಶ್ ಯರಿಯಪ್ಪರ, ಸಂತೋಷ್ ಟೋನಿ, ಶಿವರಾಜ್ ಯರಿಯಪ್ಪರ, ಗಣೇಶ್ ಕುರುಮನಹಳ್ಳಿ, ಬೀರೇಶ್, ಬೆಳಕೇರಪ್ಪ,ಜಯರಾಮ್, ಕಾಳಾಚಾರಿ, ತರುಣ್ ಸೇರಿದಂತೆ ಮತ್ತಿತರರಿದ್ದರು..