Site icon Kannada News-suddikshana

ಅಂಚೆ ಇಲಾಖೆ ಗ್ರಾಹಕರಿಗೆ ಮಹತ್ವದ ಸೂಚನೆ: ಉದ್ಯಮ ಸಪ್ತಾಹದಲ್ಲಿ ಸಿಗಲಿದೆ ಹಲವು ಮಹತ್ವದ ಮಾಹಿತಿ

ಅಂಚೆ ಇಲಾಖೆ

SUDDIKSHANA KANNADA NEWS/ DAVANAGERE/DATE:10_09_2025

ದಾವಣಗೆರೆ: ಅಂಚೆ ಇಲಾಖೆಯು ದಿನಾಂಕ ಸೆ.8 ರಿಂದ 13 ರವರೆಗೆ ಅಂಚೆ ಉದ್ಯಮ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

READ ALSO THIS STORY: 8 ತಿಂಗಳಲ್ಲಿ 56 ಸೈಬರ್ ಕೇಸ್, ದಾವಣಗೆರೆಯಲ್ಲಿ ರೂ. 1 ಕೋಟಿಗೂ ಹೆಚ್ಚು ವಂಚನೆ: ಸೈಬರ್ ಅಪರಾಧ ಡಿವೈಎಸ್ಪಿ ನಾಗಪ್ಪ

ದೇಶದ ಮೂಲೆ ಮೂಲೆಗಳನ್ನು ಸಂಪರ್ಕಿಸಿ ಸ್ಪೀಡ್ ಪೋಸ್ಟ್ ಡಾಕ್ಯುಮೆಂಟ್, ಸ್ಪೀಡ್ ಪೋಸ್ಟ್ ಪಾರ್ಸೆಲ್, ಇಂಟನ್ಯಾಷನಲ್ ಸ್ಪೀಡ್ ಪೋಸ್ಟ್ ಗಳನ್ನು, ಬೃಹತ್ ಸಂಖ್ಯೆಯಲ್ಲಿ ಕಳಿಸುವ ಗ್ರಾಹಕರನ್ನು ಸಂಪರ್ಕಿಸಿ ನಮ್ಮ
ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಪ್ರಚಾರಗೊಳಿಸುವ ಯೋಜನೆಯಾಗಿರುತ್ತದೆ.

ಗ್ರಾಹಕರು ಕಡಿಮೆ ಬೆಲೆಯಲ್ಲಿ ದೇಶ ಹಾಗೂ ವಿದೇಶಗಳಿಗೆ ತಮ್ಮ ಪತ್ರಗಳನ್ನು ಮತ್ತು ಸರಕು ಸಾಮಗ್ರಿಗಳನ್ನು ಕಳುಹಿಸಬಹುದು. ಗ್ರಾಹಕರ ಆಫೀಸ್ ಅಥವಾ ಅವರ ವ್ಯವಹಾರಿಕ ಸ್ಥಳಗಳಿಗೆ ಬಂದು ಅಂಚೆಗಳನ್ನು ಸಂಗ್ರಹಿಸುವ ವ್ಯವಸ್ಥೆಯು ಸಹ ಇರುತ್ತದೆ. ಅಥವಾ ಗ್ರಾಹಕರೇ ಅದನ್ನು ಬುಕ್ ಮಾಡಿದರೆ, ಅದನ್ನು ಸಮೀಪದ ಅಂಚೆ ಕಚೇರಿಯವರು ಬಂದು ತೆಗೆದು ಕೊಂಡು ಹೋಗುವ ಸೌಲಭ್ಯವು ಇರುತ್ತದೆ.

ಬೃಹತ್ ಸಂಖ್ಯೆಗಳಲ್ಲಿ ಅಂಚೆ ಪತ್ರಗಳನ್ನು ಅಥವಾ ಸರಕು ಸಾಮಗ್ರಿಗಳನ್ನು ಕಳುಹಿಸುವ ಗ್ರಾಹಕರು ಈ ಸೌಲಭ್ಯಗಳನ್ನು ಉಪಯೋಗಿಸಿ ಸುರಕ್ಷಿತವಾಗಿ ತಮ್ಮ ಅಂಚೆಗಳನ್ನು ಸಮಯಕ್ಕೆ ಸರಿಯಾಗಿ ಕಳಿಹಿಸುವ ಈ ಅಂಚೆ ಸೇವೆಯನ್ನು ಪಡೆದು ಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ 8861126883 ಸಂತೋಷ್ ಬಿ. (ಮಾರುಕಟ್ಟೆ ಅಧಿಕಾರಿ) ಸಂಪರ್ಕಿಸಲು ಅಂಚೆ ವಿಭಾಗದ ಅಧೀಕ್ಷಕರಾದ ಚಂದ್ರಶೇಖರ ತಿಳಿಸಿದ್ದಾರೆ.

Exit mobile version