Site icon Kannada News-suddikshana

ಹರ್ಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್, ಕಾಂಗ್ರೆಸ್ ಗೆ ಮುಖಭಂಗ: ಮೂರನೇ ಬಾರಿ ಅಧಿಕಾರಕ್ಕೇರಿದ ಕಮಲ ಪಡೆ – ಸಮೀಕ್ಷೆ ಉಲ್ಟಾ ಪಲ್ಟಾ..!

SUDDIKSHANA KANNADA NEWS/ DAVANAGERE/ DATE:08-10-2024

ಹರ್ಯಾಣ: ಹರ್ಯಾಣದ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಂದಿದ್ದು, ಅಚ್ಚರಿ ಫಲತಾಂಶ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದರೂ ಮೂರನೇ ಬಾರಿಗೆ ಅಧಿಕಾರಕ್ಕೇರುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿದೆ.

ಹರ್ಯಾಣದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಏರುತ್ತದೆ ಸಮೀಕ್ಷೆ ನಡೆಸಿದ ಏಜೆನ್ಸಿಗಳು ಹೇಳಿದ್ದರೂ, ಅಂತಿಮವಾಗಿ ಜನಾದೇಶ ಬಿಜೆಪಿ ಪರವಾಗಿ ಬಂದಿದೆ. ಈ ಮೂಲಕ ಹತ್ತು ವರ್ಷಗಳ ಬಳಿಕ ಅಧಿಕಾರಕ್ಕೇರುವ ಕಾಂಗ್ರೆಸ್ ಕನಸು ನನಸಾಗಲಿಲ್ಲ.

ಹರ್ಯಾಯಾ ವಿಧಾನಸಭಾ ಚುನಾವಣಾ ಫಲಿತಾಂಶಗಳಲ್ಲಿ ಬಿಜೆಪಿ ತನ್ನ ಮುನ್ನಡೆಯನ್ನು ಬಲಪಡಿಸುವುದರೊಂದಿಗೆ, ಗಮನವು ಈಗ ಹರಿಯಾಣದಲ್ಲಿ ಸರ್ಕಾರ ರಚನೆಯ ಮುಂದಿನ ಹಂತದತ್ತ ಸಾಗುತ್ತಿದೆ. ಕೇಂದ್ರ ಸಚಿವ ಜೆಪಿ ನಡ್ಡಾ ಅವರು ನಯಾಬ್ ಸಿಂಗ್ ಸೈನಿ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ. ಚುನಾವಣಾ ಪ್ರಚಾರ ಪ್ರಾರಂಭವಾಗುವ ಮೊದಲು, ಬಿಜೆಪಿ ಸೈನಿ ಅವರನ್ನು ಸಿಎಂ ಮುಖ ಎಂದು ಘೋಷಿಸಿತ್ತು ಎಂಬುದನ್ನು
ಗಮನಿಸಬೇಕು.

ಈ ನಡುವೆ ಮನೋಹರ್ ಲಾಲ್ ಖಟ್ಟರ್ ನಿವಾಸದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಮತ್ತೊಂದೆಡೆ, ಎಣಿಕೆ ದತ್ತಾಂಶವನ್ನು ಅಪ್‌ಲೋಡ್ ಮಾಡುವಲ್ಲಿನ ವ್ಯತ್ಯಾಸದ ಕುರಿತು ಕಾಂಗ್ರೆಸ್ ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಬಿಜೆಪಿ ಐತಿಹಾಸಿಕ ಮೂರನೇ ಸತತ ಅವಧಿಯ ಅಧಿಕಾರಕ್ಕೆ ಹತ್ತಿರವಾಗುತ್ತಿದೆ.

Exit mobile version