Site icon Kannada News-suddikshana

ಹೊಳೆಸಿರಿಗೆರೆಯ ಅಡಿಕೆ ತೋಟದಲ್ಲಿ ಚಿರತೆ ದಾಳಿ: 26 ಕುರಿಗಳ ದಾರುಣ ಸಾವು

SUDDIKSHANA KANNADA NEWS/ DAVANAGERE/DATE:06_08_2025

ದಾವಣಗೆರೆ: ಕುರಿಗಳ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿದ ಘಟನೆ ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆ ಕ್ರಾಸ್ ಸಮೀಪದ ಅಡಿಕೆ ತೋಟದಲ್ಲಿ ನಡೆದಿದೆ.

READ ALSO THIS STORY: IBPSನಲ್ಲಿ ಭರ್ಜರಿ ಉದ್ಯೋಗಾವಕಾಶ: ಭಾರತದಾದ್ಯಂತ 10,277 ಗ್ರಾಹಕ ಸೇವಾ ಸಹಾಯಕ ಹುದ್ದೆಗಳಿಗೆ ಅರ್ಜಿ

ಮಂಗಳವಾರ ತಡರಾತ್ರಿ ಚಿರತೆಯು ಬೀಡುಬಿಟ್ಟಿದ್ದ ಕುರಿ ಹಿಂಡಿನ ಮೇಲೆ ಆಕ್ರಮಣ ನಡೆಸಿದ ಪರಿಣಾಮವಾಗಿ ಸುಮಾರು 26 ಕುರಿಗಳು ಮೃತಪಟ್ಟಿವೆ.

ಈ ವಿಷಯ ಗೊತ್ತಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಚಿರತೆಗಳನ್ನು ಶೀಘ್ರದಲ್ಲಿಯೇ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸೂಚನೆ ನೀಡಿದರು.

ಈ ಘಟನೆಯಿಂದ ಆರ್ಥಿಕ ನಷ್ಟಕ್ಕೊಳಗಾದ ಚಿಕ್ಕೋಡಿ ತಾಲ್ಲೂಕಿನ ಸದಲಗ ಗ್ರಾಮದ ಕುರಿಪಾಲಕಸೋಮಣ್ಣ ಅವರಿಗೆ ಸಾಂತ್ವನ ಹೇಳಿದರು. ಅಗತ್ಯ ಸಹಾಯವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

Exit mobile version