Home ದಾವಣಗೆರೆ ಮಾ.14 ರಂದು ‘ವನಿತಾ ಉತ್ಸವ’: ಲತಿಕಾ ಶೆಟ್ಟಿಗೆ ವನಿತಾ ಸೇವಾ ಪ್ರಶಸ್ತಿ ಪ್ರದಾನ
ದಾವಣಗೆರೆಬೆಂಗಳೂರು

ಮಾ.14 ರಂದು ‘ವನಿತಾ ಉತ್ಸವ’: ಲತಿಕಾ ಶೆಟ್ಟಿಗೆ ವನಿತಾ ಸೇವಾ ಪ್ರಶಸ್ತಿ ಪ್ರದಾನ

Share
ಪ್ರಶಸ್ತಿ
Share

ದಾವಣಗೆರೆ: ನಗರದ ವನಿತಾ ಸಮಾಜದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವನಿತಾ ಸಮಾಜದ ವಾರ್ಷಿಕೋತ್ಸವ ಸಮಾರಂಭ ‘ವನಿತಾ ಉತ್ಸವ’ ಮಾರ್ಚ್ 14 ರಂದು ಸಂಜೆ 5 ಗಂಟೆಗೆ ನಗರದ ಶ್ರೀ ಸತ್ಯಸಾಯಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ವಿವರಗಳು

  • ದಿನಾಂಕ: ಮಾರ್ಚ್ 14, 2026

  • ಸಮಯ: ಸಂಜೆ 5:00 ಗಂಟೆಗೆ

  • ಸ್ಥಳ: ಶ್ರೀ ಸತ್ಯಸಾಯಿ ರಂಗಮಂದಿರ, ದಾವಣಗೆರೆ

  • ಆಯೋಜನೆ: ವನಿತಾ ಸಮಾಜ, ದಾವಣಗೆರೆ

ಪ್ರಮುಖ ಅತಿಥಿಗಳು ಮತ್ತು ಪ್ರಶಸ್ತಿ ಪುರಸ್ಕೃತರು

  • ಮುಖ್ಯ ಅತಿಥಿಗಳು: * ಮಂಜುಳಾ ಕುಲಕರ್ಣಿ (ಪ್ರಾಂಶುಪಾಲರು, ಸರ್ಕಾರಿ ಪಿಯು ಕಾಲೇಜು)

    • ಲತಿಕಾ ದಿನೇಶ್ ಶೆಟ್ಟಿ (ಪ್ರಾಧ್ಯಾಪಕರು, ಬಾಪೂಜಿ ನರ್ಸಿಂಗ್ ಕಾಲೇಜು)

  • ವನಿತಾ ಸೇವಾ ಪ್ರಶಸ್ತಿ: ಪ್ರಾಧ್ಯಾಪಕಿ ಲತಿಕಾ ದಿನೇಶ್ ಶೆಟ್ಟಿ ಅವರಿಗೆ ‘ರಾಧಮ್ಮ ಚನ್ನಗಿರಿ ರಂಗಪ್ಪ ವನಿತಾ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

  • ವಿಶೇಷ ಗೌರವ: ವೈಕುಂಠ ಧಾಮದ ಸುಧಾರಣೆಯಲ್ಲಿ ತೊಡಗಿರುವ ಸುಧಾರಾಣಿ ಅವರಿಗೆ ವಿಶೇಷ ಸನ್ಮಾನ ಮಾಡಲಾಗುವುದು.

  • ಅಧ್ಯಕ್ಷತೆ: ಪ್ರೇಮಾ ನಾಗರಾಜ್ (ಅಧ್ಯಕ್ಷರು, ವನಿತಾ ಸಮಾಜ)

ಕಾರ್ಯಕ್ರಮದ ಮುಖ್ಯಾಂಶಗಳು

  • ವನಿತಾ ವಾರ್ತಾ ಬಿಡುಗಡೆ: ಸಮಾಜದ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ.

  • ಬಹುಮಾನ ವಿತರಣೆ: ಹೂ ಜೋಡಣೆ, ಕೇಶವಿನ್ಯಾಸ, ಚರ್ಚಾ ಸ್ಪರ್ಧೆ ಹಾಗೂ ರಸಪ್ರಶ್ನೆ ವಿಜೇತರಿಗೆ ಬಹುಮಾನ ನೀಡಲಾಗುವುದು.

  • ಸಾಂಸ್ಕೃತಿಕ ವೈಭವ: ‘ಯುವ ವನಿತಾ’ ತಂಡದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಂಜುಳಾ ಕುಲಕರ್ಣಿ ಹಾಗೂ ಬಾಪೂಜಿ ನರ್ಸಿಂಗ್ ಮತ್ತು ಎಸ್ ಎಸ್ ಐಎನ್ಎಸ್ ನ ಪ್ರಾಧ್ಯಾಪಕಿ ಲತಿಕಾ ದಿನೇಶ್ ಶೆಟ್ಟಿ ಆಗಮಿಸಲಿದ್ದಾರೆ. ಇದೇ  ಸಂದರ್ಭದಲ್ಲಿ ರಾಧಮ್ಮ ಚನ್ನಗಿರಿ ರಂಗಪ್ಪ ವನಿತಾ ಸೇವಾ ಪ್ರಶಸ್ತಿಗೆ ಭಾಜನರಾಗಿರುವ ಪ್ರಾಧ್ಯಾಪಕಿ ಲತಿಕಾ ದಿನೇಶ್ ಶೆಟ್ಟಿಯವರಿಗೆ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್‌ನ ಚೇರ್ಮನ್ ಸಿ.ಆರ್. ವಿರೂಪಾಕ್ಷಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಮಾಜದ ಸುಧಾರಣೆಯಲ್ಲಿ ತೊಡಗಿರುವ ವೈಕುಂಠ ಧಾಮದ ಸುಧಾರಾಣಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತದೆ

ವನಿತಾ ಸಮಾಜದ ಅಧ್ಯಕ್ಷೆ ಪ್ರೇಮಾ ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ವನಿತಾ ವಾರ್ತಾ ಬಿಡುಗಡೆ, ಬಹುಮಾನ ವಿತರಣೆ ಹಾಗೂ ಯುವ ವನಿತಾದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಇತ್ತೀಚೆಗೆ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಹೂ ಜೋಡಣೆ, ಕೇಶವಿನ್ಯಾಸ, ಚರ್ಚಾ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *