Home ದಾವಣಗೆರೆ ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ನಲ್ಲಿ ಸಮರ್ಥ್ ಶಾಮನೂರುಗೆ ನೇಕಾರ ಮಹಾಸಭಾ ಅಧಿಕೃತ ಬೆಂಬಲ: ಏ. 5ರ ಬೃಹತ್ ಸಮಾವೇಶದಲ್ಲಿ ನಟಿ ಉಮಾಶ್ರೀ ಸೇರಿ ಹಲವರ ಭಾಗಿ
ದಾವಣಗೆರೆಬೆಂಗಳೂರು

ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ನಲ್ಲಿ ಸಮರ್ಥ್ ಶಾಮನೂರುಗೆ ನೇಕಾರ ಮಹಾಸಭಾ ಅಧಿಕೃತ ಬೆಂಬಲ: ಏ. 5ರ ಬೃಹತ್ ಸಮಾವೇಶದಲ್ಲಿ ನಟಿ ಉಮಾಶ್ರೀ ಸೇರಿ ಹಲವರ ಭಾಗಿ

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರಿಗೆ ನೇಕಾರ ಮಹಾಸಭಾ ಸಮಾಜವು ಅಧಿಕೃತವಾಗಿ ಬೆಂಬಲ ಸೂಚಿಸಿದೆ.

ದಾವಣಗೆರೆಯಲ್ಲಿ ನಡೆದ ನೇಕಾರ ಮಹಾಸಭಾದ ಸಭೆಯಲ್ಲಿ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಸಮಾಜದ ಮುಖಂಡರು, ಹಿರಿಯರು, ಮಹಾಸಭಾದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಏಪ್ರಿಲ್ 5ಕ್ಕೆ ದಾವಣಗೆರೆಯಲ್ಲಿ ನೇಕಾರ ಮಹಾಸಭಾದಿಂದ ಸಮರ್ಥ್ ಶಾಮನೂರು ಅವರನ್ನು ಬೆಂಬಲಿಸುವ ಸಲುವಾಗಿ ಬೃಹತ್ ಸಮಾವೇಶ ಆಯೋಜಿಸಲು ಸಭೆಯು ತೀರ್ಮಾನಿಸಿದೆ.

ಸಭೆಯಲ್ಲಿ ಸಮಾಜದ ಮುಖಂಡರಾದ ಗಜೇಂದ್ರ ಜಗನ್ನಾಥ್, ನಾಗಭೂಷಣ್, ಸತ್ಯನಾರಾಯಣ, ಶ್ರೀನಿವಾಸ್, ನಾಗರಾಜ್, ಡಿ ಬಸಣ್ಣ ಸೇರಿದಂತೆ ನೇಕಾರ ಸಮುದಾಯದ ಮುಖಂಡರು ಹಾಜರಿದ್ದರು.

ಆಮಂತ್ರಣ ಪತ್ರಿಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಮಸ್ತ ನೇಕಾರ ಮಹಾಸಭಾ ಬಂಧುಗಳೇ,

ನಮ್ಮ ಸಮಾಜದ ಏಕತೆ ಮತ್ತು ಶಕ್ತಿಯನ್ನು ಪ್ರದರ್ಶಿಸುವ ಸಮಯ ಬಂದಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಯ ಆಶಯದೊಂದಿಗೆ, ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಸಮರ್ಥ್ ಶಾಮನೂರು ಅವರಿಗೆ ನೇಕಾರ ಮಹಾಸಭಾ ವತಿಯಿಂದ ಅಧಿಕೃತ ಬೆಂಬಲ ಸೂಚಿಸುವ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮುಖ್ಯ ಅತಿಥಿಗಳು:

ಈ ಕಾರ್ಯಕ್ರಮಕ್ಕೆ ಮೆರುಗು ನೀಡಲು ನಮ್ಮ ಸಮಾಜದ ಗಣ್ಯರು ಹಾಗೂ ಪ್ರಮುಖ ನಾಯಕರು ಆಗಮಿಸುತ್ತಿದ್ದಾರೆ:

  • ಶ್ರೀಮತಿ ಉಮಾಶ್ರೀ: ಖ್ಯಾತ ಚಲನಚಿತ್ರ ನಟಿ ಹಾಗೂ ಹಿರಿಯ ನಾಯಕಿ.

  • ಶ್ರೀ ಕೆ.ಸಿ. ಕೊಂಡಯ್ಯ: ಮಾಜಿ ಸಂಸದರು ಹಾಗೂ ಹಿರಿಯ ಮುಖಂಡರು.

ಗೌರವಾನ್ವಿತ ಉಪಸ್ಥಿತಿ:

  • ಡಾ. ಪ್ರಭಾ ಮಲ್ಲಿಕಾರ್ಜುನ್: ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರು.

  • ಶ್ರೀ ಎಸ್. ಎಸ್. ಮಲ್ಲಿಕಾರ್ಜುನ್: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು.

  • ಶ್ರೀ ಸಮರ್ಥ್ ಶಾಮನೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ.

ಕಾರ್ಯಕ್ರಮದ ವಿವರ:

  • ದಿನಾಂಕ: ಇದೇ ಭಾನುವಾರ

  • ಸಮಯ: ಸಂಜೆ 5:00 ಗಂಟೆಗೆ

  • ಸ್ಥಳ: ತೊಗಟವೀರ ಕಲ್ಯಾಣ ಮಂಟಪ, ದಾವಣಗೆರೆ.

ವಿಶೇಷ ಮನವಿ: ನಮ್ಮ ನೇಕಾರ ಸಮಾಜದ ಹಿತದೃಷ್ಟಿಯಿಂದ ಮತ್ತು ಕ್ಷೇತ್ರದ ಉಜ್ವಲ ಭವಿಷ್ಯಕ್ಕಾಗಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಸಮಾಜದ ಎಲ್ಲಾ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ, ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸುತ್ತೇವೆ.

ಈ ಮಹತ್ವದ ಸಭೆಯಲ್ಲಿ ಸಮಾಜದ ಹಿರಿಯ ನಾಯಕಿ ಹಾಗೂ ಖ್ಯಾತ ಚಲನಚಿತ್ರ ನಟಿ ಉಮಾಶ್ರೀ, ಮಾಜಿ ಸಂಸದರಾದ ಕೆ.ಸಿ. ಕೊಂಡಯ್ಯ ಸೇರಿದಂತೆ ಸಮಾಜದ ಅನೇಕ ಗಣ್ಯರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಉಪಸ್ಥಿತರಿರಲಿದ್ದಾರೆ. ನೇಕಾರ ಸಮಾಜದ ಏಕತೆ ಮತ್ತು ರಾಜಕೀಯ ಬಲ ಪ್ರದರ್ಶಿಸುವ ಈ ಕಾರ್ಯಕ್ರಮಕ್ಕೆ ಸಮಾಜದ ಪ್ರತಿಯೊಬ್ಬರೂ ಏಪ್ರಿಲ್ 5ರ ಭಾನುವಾರ ಸಂಜೆ 5 ಗಂಟೆಗೆ ನಗರದ ತೊಗಟವೀರ ಕಲ್ಯಾಣ ಮಂಟಪಕ್ಕೆ ಆಗಮಿಸುವಂತೆ ಮಹಾಸಭಾ ಪ್ರಕಟಣೆಯಲ್ಲಿ ತಿಳಿಸಿದೆ.

Share

Leave a comment

Leave a Reply

Your email address will not be published. Required fields are marked *