ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ಯಾವುದೇ ದೂರದೃಷ್ಟಿ ಇಲ್ಲದ, ಕೇವಲ ಸಾಲದ ಸುಳಿಯಲ್ಲಿ ಸಿಲುಕಿರುವ ಆಯವ್ಯಯ ಎಂದು ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್ ಟೀಕಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿದ್ದರಾಮಯ್ಯ ಅವರು ಇದೊಂದು ದಾಖಲೆಯ ಬಜೆಟ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಇದು ಅಭಿವೃದ್ಧಿಯ ದಾಖಲೆಯಲ್ಲ, ಬದಲಿಗೆ ಅತೀ ಹೆಚ್ಚು ಸಾಲ ಮಾಡಿರುವ “ಸಾಲದ ದಾಖಲೆ” ಬಜೆಟ್ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವಂತಹ ಕೃಷಿ ಘಟಕ, ವೈದ್ಯಕೀಯ ಕಾಲೇಜು ಸ್ಥಾಪನೆ ಅಥವಾ ಜಿಲ್ಲಾಸ್ಪತ್ರೆಯ ಮೇಲ್ದರ್ಜೆಗೇರಿಸುವಂತಹ ಯಾವುದೇ ಮಹತ್ವದ ಯೋಜನೆಗಳಿಗೆ ಈ ಬಜೆಟ್ನಲ್ಲಿ ಅನುದಾನ ಘೋಷಿಸಿಲ್ಲ. ಇಡೀ ಜಿಲ್ಲೆಯನ್ನು ಕಡೆಗಣಿಸಿ, ಕೇವಲ ಚುನಾವಣಾ ದೃಷ್ಟಿಯಿಂದ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಕಳೆದ 30 ವರ್ಷಗಳಿಂದ ಆಗದ ಅಭಿವೃದ್ಧಿಯನ್ನು ಈಗ ಮಾಡುತ್ತೇವೆ ಎಂದು ಹಣ ಬಿಡುಗಡೆ ಮಾಡಿರುವುದು ಕೇವಲ ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತಿರುವ ತಂತ್ರವಾಗಿದೆ. ಒಟ್ಟಾರೆಯಾಗಿ, ಈ ಬಜೆಟ್ ಜನಸಾಮಾನ್ಯರ ಅಥವಾ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಕೂಡಿಲ್ಲ ಎಂದು ಶಿವನಗೌಡ ಟಿ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- Davanagere District Development
- DAVANAGERE NEWS
- Davanagere South Constituency Funds
- Debt Budget Karnataka
- Karnataka State Budget 2024
- Loan Record Budget
- Shivanagouda Patil Statement.
- Shivanagouda T Patil
- Shivanagouda T Patil Kannada.
- Siddaramaiah Budget Criticism
- ಕರ್ನಾಟಕ ಬಜೆಟ್ 2024-25
- ಕೃಷಿ ಮತ್ತು ವೈದ್ಯಕೀಯ ಕಾಲೇಜು
- ಜಿಲ್ಲಾ ಅಭಿವೃದ್ಧಿ ನಿರ್ಲಕ್ಷ್ಯ
- ದಾವಣಗೆರೆ ದಕ್ಷಿಣ ಕ್ಷೇತ್ರ ಅನುದಾನ
- ದಾವಣಗೆರೆ ಸುದ್ದಿ
- ಶಿವನಗೌಡ ಟಿ. ಪಾಟೀಲ್
- ಸಾಲದ ಬಜೆಟ್
- ಸಿದ್ದರಾಮಯ್ಯ ಬಜೆಟ್ ಟೀಕೆ





Leave a comment