Site icon Kannada News-suddikshana

Police Warning: ಕರ್ಕಶ ಸೌಂಡ್ ಸಿಸ್ಟಂ, ಡಿಜೆ ಬಳಕೆಗೆ ನಿಷೇಧ, ಮಾದಕ ವಸ್ತು – ಮದ್ಯ ಸೇವಿಸುವಂತಿಲ್ಲ: ಯಾವೆಲ್ಲಾ ಎಚ್ಚರಿಕೆ ಕೊಟ್ಟಿದೆ ಪೊಲೀಸ್ ಇಲಾಖೆ…?

POLICE WARNING

POLICE WARNING

SUDDIKSHANA KANNADA NEWS/ DAVANAGERE/ DATE:17-09-2023

ದಾವಣಗೆರೆ: ಗೌರಿ- ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಜಿಲ್ಲಾ ಪೊಲೀಸ್ (Police) ಇಲಾಖೆಯು ಕೋರಿದೆ. ಜಿಲ್ಲಾ ಪೊಲೀಸ್ ಇಲಾಖೆಯು ಎಲ್ಲಾ ರೀತಿಯ ಭದ್ರತೆ ಕೈಗೊಂಡಿದೆ. ಆದರೂ ಜನರಿಗೆ ಸೂಚನೆಗಳನ್ನು ಕೊಟ್ಟಿದೆ.

ಈ ಸುದ್ದಿಯನ್ನೂ ಓದಿ: 

ದಾವಣಗೆರೆಯ ಸಿದ್ದಗಂಗೆಯಲ್ಲಿ ಪರಿಸರಸ್ನೇಹಿ ಗಣೇಶ (Ganesha) ಮೂರ್ತಿಗಳ ನೋಡಬನ್ನಿ.. ಪೇಪರ್ ಗಣಪನ ಸ್ಪೆಷಾಲಿಟಿ ಏನು ಗೊತ್ತಾ…?

ಜಿಲ್ಲೆಯಾದ್ಯಂತ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಸಂಭ್ರಮದಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ.ಪ್ರತಿವರ್ಷದಂತೆ ಈ ವರ್ಷವೂ ಶಾಂತಿಯುತ, ಸೌಹಾರ್ದಯುತ, ಪರಿಸರ ಕಾಳಜಿ ವಹಿಸಿ ಹಬ್ಬವನ್ನು ಆಚರಿಸಲು ಜಿಲ್ಲಾಡಳಿತವೂ ಸಕಲ ಸಿದ್ಧತೆ ಮಾಡಿಕೊಂಡಿದೆ. ಜೊತೆಗೆ ಶಾಂತಿ ಕಾಪಾಡುವ ದೃಷ್ಠಿಯಿಂದ ಸೂಕ್ತ ನಿಂಯಮಗಳನ್ನು ಸಹ ಸೂಚಿಸಲಾಗಿದ್ದು ಅದರಂತೆ ಹಬ್ಬಗಳನ್ನು ಆಚರಿಸುವ ಮೂಲಕ ಶಾಂತಿ ಮತ್ತು ಸೌಹಾರ್ದತೆಗೆ ಮಾದರಿ ಜಿಲ್ಲೆಯನ್ನಾಗಿಸೋಣ ಎಂದು ಜಿಲ್ಲಾ ಪೊಲೀಸ್ (Police) ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಕರೆ ನೀಡಿದ್ದಾರೆ.

SP UMA PRASHANTH DAVANAGERE

ಈ ಆದೇಶ ಪಾಲನೆ ಆಗಲೇಬೇಕು…?

ಕಾನೂನು ಕೈಗೆತ್ತಿಕೊಂಡರೆ ಹುಷಾರ್:

ಮಾದಕ ವಸ್ತು, ಮದ್ಯ ಸೇವಿಸುವಂತಿಲ್ಲ:

ರೌಡಿ, ಗೂಂಡಾಗಳ ಬಗ್ಗೆ ನಿಗಾ:

ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳು ಕಂಡುಬಂದರೆ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ. ಸ್ಥಳೀಯ ಪೊಲೀಸ್ ಠಾಣೆ, ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಮಾಹಿತಿ ನೀಡಲು ಕೋರಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಪಡೆಯದೇ ಬ್ಯಾನರ್, ಬಂಟಿಂಗ್ಸ್ ಗಳನ್ನು ಹಾಕಬಾರದು. ಕೋಮು ಸೌಹಾರ್ದತೆ ಪಾಲನೆ ಮತ್ತು ಜನಸ್ನೇಹಿ ಪೊಲೀಸ್ ಆಗಿ ಕರ್ತವ್ಯ ಮಾಡಲಾಗುವುದು.

ಪೊಲೀಸ್ (Police) ಬಂದೋಬಸ್ತ್:

ದಾವಣಗೆರೆ ಜಿಲ್ಲೆಯಾದ್ಯಂತ ವಿವಿಧ ಕಡೆಗಳಲ್ಲಿ ಅಂದಾಜು 1876 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸ್ಥಾಪಿಸುತ್ತಿರುವ ಬಗ್ಗೆ ಮಾಹಿತಿ ಇದೆ. ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಸಂಬಂಧ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.

Exit mobile version