Site icon Kannada News-suddikshana

ಅನಧಿಕೃತ ಹಂದಿ ಸಾಕಾಣಿಕೆಯಿಂದ ಸೌಂದರ್ಯಕ್ಕೆ ತೊಂದರೆ, ಬೀಡಾಡಿ ದನಗಳಿಂದ ಸಂಚಾರಕ್ಕೆ ಅಡ್ಡಿ: ಮಾಲೀಕರಿಗೆ ಡಿಸಿ ಕೊಟ್ಟ ಖಡಕ್ ಸೂಚನೆ ಏನು?

ದನ

SUDDIKSHANA KANNADA NEWS/DAVANAGERE/DATE:04_10_2025

ದಾವಣಗೆರೆ: ಬೀಡಾಡಿ ದನಗಳಿಂದ ಸಂಚಾರಕ್ಕೆ ದಾವಣಗೆರೆಯಲ್ಲಿ ಅಡಚಣೆ ಉಂಟಾಗುತ್ತಿದೆ. ಜೊತೆಗೆ ನಗರದ ಪ್ರದೇಶದಲ್ಲಿ ಅನಧಿಕೃತ ಹಂದಿ ಸಾಕಾಣಿಕೆ ಮಾಡಿ ನಗರ ಸೌಂದರ್ಯ ಹಾಳು ಮಾಡುವವರ ವಿರುದ್ಧ ಕಠಿಣ
ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

READ ALSO THIS STORY: ಭಾರೀ ಮಳೆಗೆ ದಾವಣಗೆರೆ ಜಿಲ್ಲೆಯಲ್ಲಿ 100 ಕೋಟಿ ರೂ. ನಷ್ಟ? ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಗೆ ಸಿದ್ದತೆ!

ಬಿಡಾಡಿ ದನಗಳಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು ಸಂಬಂಧಿಸಿದವರ ಮಾಲೀಕರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮವಹಿಸಲಾಗುವುದು ಎಂದು ಡಿಸಿ ಗಂಗಾಧರ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸ್ವಚ್ಚತೆಯನ್ನು ಕಾಪಾಡುವುದು ನಮ್ಮ-ನಿಮ್ಮೆಲ್ಲರ ಹೊಣೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 104 ಕಿ.ಮೀ ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆಯಾಗಿದ್ದು ಕೂಡಲೇ ದುರಸ್ತಿ ಕಾರ್ಯ ಆರಂಭಿಸಲಾಗುವುದು. ಮಳೆಯಿಂದ ಹಾನಿಯಾಗಿದ್ದನ್ನು ದುರಸ್ತಿ ಮಾಡಿದ ಬಗ್ಗೆ ಮತ್ತು ಹಾನಿಯಾಗಿರುವ ಬಗ್ಗೆ ಪ್ರತ್ಯೇಕವಾಗಿ ವರದಿ ನೀಡಬೇಕು. ಮಳೆಗೆ ಮೊದಲು 57 ಕೆರೆ ಒಡಲು ತುಂಬಿಸಲಾಗಿತ್ತು. ಹಿಂಗಾರಿನಲ್ಲಿ ಸುರಿದ ಮಳೆಗೆ ಕೆರೆಗಳ ಕಟ್ಟೆ, ಕೋಡಿ ಒಡೆದು ಶಿಥಿಲಾವಸ್ಥೆಗೆ ತಲುಪಿರುವ ಕುರಿತು ಸಮಗ್ರವಾಗಿ ಪರಿಶೀಲಿಸಿ ವರದಿ ನೀಡಬೇಕು ಎಂದರು.

Exit mobile version