ದಾವಣಗೆರೆ: ಜಿಲ್ಲೆಯಲ್ಲಿ ಮುಂಬರುವ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಅತ್ಯಂತ ಪಾರದರ್ಶಕವಾಗಿ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಿಸಿ, ಉತ್ತಮ ಫಲಿತಾಂಶ ಪಡೆಯಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಜಿಲ್ಲಾಡಳಿತ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನು ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್ ಮೂಲಕ ಲೈವ್
ವೆಬ್ಕಾಸ್ಟಿಂಗ್ ಮಾಡಲಾಗುವುದು. ಸೂಕ್ಷ್ಮ ಕೇಂದ್ರಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ವಿವರಿಸಿದರು.
ಪ್ರಮುಖ ಮುಖ್ಯಾಂಶಗಳು:
ಪರಿಸರ ರಕ್ಷಣೆ:
ದುರ್ಗಾಂಬಿಕಾ ಜಾತ್ರೆಯಲ್ಲಿ ಅನಧಿಕೃತ ಫ್ಲೆಕ್ಸ್ ಅಳವಡಿಸುವವರ ವಿರುದ್ಧ ‘ಡಿ ಫಿಗರ್ಮೆಂಟ್ ಆಕ್ಟ್’ ಅಡಿಯಲ್ಲಿ ಎಫ್ಐಆರ್ ದಾಖಲಿಸಲು ಸೂಚನೆ.
ಕಂದಾಯ ಸುಧಾರಣೆ:
ಜಿಲ್ಲೆಯಲ್ಲಿ 24,000 ಪೌತಿ ಖಾತೆಗಳ ಬದಲಾವಣೆ ಹಾಗೂ 12,000 ಹಕ್ಕು ಪತ್ರಗಳ ವಿತರಣೆ ಪೂರ್ಣ. ಗೈರು ವಿಲೇ ಕಡತ ವಿಲೇವಾರಿಯಲ್ಲಿ ಜಿಲ್ಲೆಗೆ ರಾಜ್ಯದಲ್ಲೇ 3ನೇ ಸ್ಥಾನ.
ಡಿಜಿಟಲ್ ಜನಗಣತಿ 2026:
ಏಪ್ರಿಲ್ 1 ರಿಂದ ಭಾರತದ ಪ್ರಥಮ ಡಿಜಿಟಲ್ ಜನಗಣತಿ ಆರಂಭವಾಗಲಿದ್ದು, ಸಾರ್ವಜನಿಕರು ಆನ್ಲೈನ್ ಮೂಲಕ ಸ್ವಯಂ ದೃಢೀಕರಣಕ್ಕೆ ಅವಕಾಶವಿದೆ.
ರೈತರ ಹಿತರಕ್ಷಣೆ:
ಭದ್ರಾ ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ನಾಲೆಯುದ್ದಕ್ಕೂ ಸೆಕ್ಷನ್ 144 ಜಾರಿ.
ಸಾರ್ವಜನಿಕ ಸೇವೆ:
ನಗರದಲ್ಲಿ ಪ್ರಿಪೇಯ್ಡ್ ಆಟೋಗೆ ರೂ. 38 ನಿಗದಿ ಹಾಗೂ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಚಾಲನೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಹೆಚ್.ಟಿ ಹಾಗೂ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.
- Bhadra Canal Water Management
- Davanagere DC
- Defacement Act FIR
- Digital Census 2026 India
- G.M. Gangadharaswamy
- Live Webcasting
- Prepaid Auto Fare Davanagere.
- Revenue Department Karnataka
- SSLC PUC Exams 2026
- ಎಸ್.ಎಸ್.ಎಲ್.ಸಿ ಪರೀಕ್ಷೆ
- ಕನ್ನಡ ಭವನ
- ಜಿ.ಎಂ.ಗಂಗಾಧರಸ್ವಾಮಿ
- ಡಿಜಿಟಲ್ ಜನಗಣತಿ 2026
- ದಾವಣಗೆರೆ ಜಿಲ್ಲಾಧಿಕಾರಿ.
- ಪಿಯುಸಿ ಫಲಿತಾಂಶ
- ಪೌತಿ ಆಂದೋಲನ
- ಪ್ರಿಪೇಯ್ಡ್ ಆಟೋ
- ಭದ್ರಾ ನಾಲೆ
- ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್.





Leave a comment