Home ಕ್ರೈಂ ನ್ಯೂಸ್ ಸ್ವಾತಂತ್ರ್ಯ ಹೋರಾಟಗಾರರ ಪುತ್ರ, ಬಿಜೆಪಿ ಹಿರಿಯ ಮುಖಂಡ ಅಂಗಡಿ ಮರುಳ ಸಿದ್ದಪ್ಪ ನಿಧನ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಸ್ವಾತಂತ್ರ್ಯ ಹೋರಾಟಗಾರರ ಪುತ್ರ, ಬಿಜೆಪಿ ಹಿರಿಯ ಮುಖಂಡ ಅಂಗಡಿ ಮರುಳ ಸಿದ್ದಪ್ಪ ನಿಧನ

Share
ಸ್ವಾತಂತ್ರ್ಯ ಹೋರಾಟಗಾರ
Share

ದಾವಣಗೆರೆ: ಚನ್ನಗಿರಿ ತಾಲೂಕಿನ ದುರ್ವಿಗೆರೆ ಗ್ರಾಮದ ನಿವಾಸಿ, ಸ್ವಾತಂತ್ರ್ಯ ಹೋರಾಟಗಾರ ಮಲ್ಲಪ್ಪನವರ ಪುತ್ರ ಅಂಗಡಿ ಶ್ರೀ ಮರುಳ ಸಿದ್ದಪ್ಪ (75) ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಸುಮಾರು ಮೂರೂವರೆ ದಶಕಗಳ ಹಿಂದೆ ಭಾರತೀಯ ಜನತಾ ಪಾರ್ಟಿಯ ಆರಂಭಿಕ ದಿನಗಳಲ್ಲಿ ಸಕ್ರಿಯರಾಗಿದ್ದ ಇವರು, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಸಮಾಜಮುಖಿ ಚಿಂತನೆ ಹಾಗೂ ಸರಳ ಸ್ವಭಾವದ ಮೂಲಕ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದರು. ಮೃತರು ಪತ್ನಿ ಹಾಗೂ ಮಂಜುನಾಥ್ ಮತ್ತು ಜಗದೀಶ್ ಎಂಬ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ದುರ್ವಿಗೆರೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share

Leave a comment

Leave a Reply

Your email address will not be published. Required fields are marked *